Categories: ಕೋಲಾರ

ಕ್ರೆಡಿಲ್ ಮತ್ತು ನಿರ್ಮಿತಿ ಕೇಂದ್ರವು ಶಾಸಕರು, ಎಂಎಲ್ಸಿಗಳನ್ನು ಸಾಕುವ ಕೇಂದ್ರ ಮುಬಾರಕ್ ಆರೋಪ: ದಾಖಲೆ ಬಹಿರಂಗ ಪಡಿಸುವಂತೆ ನಗರಸಭೆ ಅಧ್ಯಕ್ಷೆ, ಸದಸ್ಯರ ಸವಾಲು

ಕೋಲಾರ: ನಗರಸಭೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 30 ಕೋಟಿ ಬಂದಿದ್ದು ಈ ಹಣವು ನಿರ್ಮಿತಿ ಕೇಂದ್ರ ಮತ್ತು ಕ್ರೆಡಿಲ್ ಇಲಾಖೆಗೆ ವಹಿಸಿದ್ದರ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ಅವರು ಸಭೆಯಲ್ಲಿ ಶಾಸಕರು ಮತ್ತು ಎಂಎಲ್ಸಿಗಳನ್ನು ಸಾಕುವ ಕೇಂದ್ರಗಳ ಎಂದು ಆರೋಪಿಸಿದ್ದಾರೆ ಬರೀ ಅರೋಪ ಮಾಡುವುದು ಬಿಟ್ಟು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಸವಾಲು ಹಾಕಿದರು.

ನಗರಸಭೆ ಆವರಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಗರಸಭೆ ಮಾಜಿ ಅಧ್ಯಕ್ಷರಾಗಿ ಹಿರಿಯ ಸದಸ್ಯರಾಗಿರುವ ಮುಬಾರಕ್ ಅವರು ಪ್ರತಿ ಸಭೆಯಲ್ಲಿ ಬರೀ ಆರೋಪಗಳನ್ನು ಮಾಡಲಿಕ್ಕೆ ಬರತ್ತಾರೆ ಒಂದು ಬಾರಿ ಅಭಿವೃದ್ಧಿಗೆ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಅನಿಲ್ ಕುಮಾರ್ ನಯಾ ಪೈಸೆ ಬಂದಿಲ್ಲ ಎಂದು ಹೇಳುವ ಅವರು ಹೇಗೆ 30 ಕೋಟಿ ಅನುದಾನದ ಬಗ್ಗೆ ಮಾತಾಡತ್ತಾರೆ ಇವರಿಗೆ ಏನಾದರೂ ನೈತಿಕತೆ ಇದ್ದರೆ ಮೊದಲು ದಾಖಲೆಗಳನ್ನು ನೀಡಲಿ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಸದಸ್ಯರೇ ಬುದ್ದಿ ಕಲಿಸಬೇಕಾಗುತ್ತದೆ ಎಂದರು.

ಕಳೆದ ಬಾರಿಯ ಸಭೆಯಲ್ಲಿ ನಗರಸಭೆ ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ಶಾಸಕರು ಎಂಎಲ್ಸಿಗಳು ಆಪರೇಟ್ ಮಾಡತ್ತಾರೆ ಎಂದು ಆರೋಪಿಸಿದರು. ನನ್ನನ್ನು 23 ಸದಸ್ಯರಿಂದ ಆಯ್ಕೆಯಾಗಿದ್ದೇನೆ ನನಗೂ ಒಂದಿಷ್ಟು ಜ್ಞಾನವು ಇದೆ ಯಾರ ಕಡೆಯಿಂದಲೂ ಅಪರೇಟ್ ಮಾಡಿಸಿಕೊಳ್ಳುವ ಪರಿಸ್ಥಿತಿ ಇನ್ನೂ ಬಂದಿಲ್ಲ ನೀವು ಕೂಡ ಅಧ್ಯಕ್ಷರಾಗಿ ಇದ್ದವರು ನೀವು ಯಾರ ಕಡೆಯಿಂದ ಅಪರೇಟ್ ಆಗಿದ್ದೀರ ಉತ್ತರ ಕೊಡಬೇಕು ಅವರು ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಸದಸ್ಯ ಎನ್. ಅಂಬರೀಷ್ ಮಾತನಾಡಿ, ಮುಬಾರಕ್ ಸಹ 2014 ರಿಂದ 2016 ರ ವರೆಗೆ ಅಧ್ಯಕ್ಷರಾಗಿ ಸುಮಾರು 1.40 ಕೋಟಿ ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ಹಾಗೂ ಕಿಯೋನಿಕ್ಸ್ ಇಲಾಖೆಗೆ ಬಿಡುಗಡೆ ಮಾಡಿದ್ದರು ಅವತ್ತು ಯಾವ ಉದ್ದೇಶಕ್ಕಾಗಿ ಕೊಟ್ಟಿದ್ದೀರಾ ಇವತ್ತು ಅ ಇಲಾಖೆಗಳ ಬಗ್ಗೆ ಆರೋಪ ಮಾಡಲಿಕ್ಕೆ ಯಾವ ನೈತಿಕತೆ ಇದೆ ನಿಮ್ಮ ಹೊಟ್ಟೆಪಾಡಿಗಾಗಿ ಯಾರ ಯಾರ ಮನೆ ಬಾಗಿಲಿಗೆ ಹೋಗಿದ್ದೀರಾ ಜನಕ್ಕೆ ಗೊತ್ತಿದೆ ಆರೋಪ ಮಾಡುವ ಮೊದಲು ತಾವು ದಾಖಲೆಗಳನ್ನು ಸಾಬೀತು ಮಾಡಲಿ ಇಲ್ಲದೇ ಹೋದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯ ಸುರೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದನ್ನು ಕಾಮಗಾರಿ ಸ್ಥಳದಲ್ಲಿಯೇ ಸಾಬೀತು ಪಡಿಸಲು ಸಿದ್ದವಿದ್ದೇವೆ ಮುಬಾರಕ್ ಅವರೇ ನಿಮಗೆ ಏನಾದರೂ ರಾಜಕೀಯದ ಮೌಲ್ಯದ ಜೊತೆಗೆ ನೈತಿಕತೆ ಇದ್ದರೆ ಮಾಧ್ಯಮರೊಂದಿಗೆ ದಿನಾಂಕ ನಿಗಧಿ ಮಾಡಿ ಅದು ಎಲ್ಲಾ ಬಿಟ್ಟು ಆಧಾರ ರಹಿತವಿಲ್ಲದೇ ವಿನಾಕಾರಣ ಮಾತಾಡುವುದಕ್ಕೆ ನಾಚಿಕೆ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸದಸ್ಯ ಅಫ್ಸರ್ ಮಾತನಾಡಿ, ಪ್ರತಿ ಬಾರಿಯ ಸಭೆಯಲ್ಲಿ ಆರೋಪ ಮಾಡಲಿಕ್ಕೆ ಸೀಮಿತವಾಗಿದ್ದು ಅಭಿವೃದ್ಧಿಗೆ ಸಹಕಾರವಿಲ್ಲ ಅಲ್ಪಸಂಖ್ಯಾತ ವಾರ್ಡ್ ಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದರು ವಿರೋಧ ವ್ಯಕ್ತಪಡಿಸತ್ತಾರೆ ಎಂದರೆ ನಮ್ಮ ಸಮುದಾಯದವರು ಎಂದು ಹೇಳಿಕೊಂಡು ಓಡಾಡುತ್ತಾರೆ ಅವರು ಅಧ್ಯಕ್ಷರಾಗಿ ಹೇಗೆ ಸಭೆಗಳನ್ನು ನಡೆಸಿದ್ದಾರೆ ಎಂಬುದು ಜನಕ್ಕೆ ಗೊತ್ತಿದೆ ಇವತ್ತಿನ ಅಧ್ಯಕ್ಷರ ಉಪಾಧ್ಯಕ್ಷ ಬಗ್ಗೆ ಮಾತಾಡುವುದಕ್ಕೆ ಯೋಗ್ಯತೆ ಇಲ್ಲ ಎಂದು ಆರೋಪಿಸಿದರು.

ಸದಸ್ಯ ರಫೀ ಮಾತನಾಡಿ, ಮಾಜಿ ಅಧ್ಯಕ್ಷ ಮುಬಾರಕ್ ಅವರಿಗೆ ಅತ್ಮ ಮತ್ತು ಶರೀರ ಕೆಟ್ಟರಬೇಕು ಅದಕ್ಕೆ ಅವರು ಬರೀ ಆರೋಪಕ್ಕೆ ಸೀಮಿತವಾಗಿದ್ದಾರೆ ಎರಡು ನಾಲಿಗೆ ಇರೋ ವ್ಯಕ್ತಿ ಅವರಿಂದ ಮುಸ್ಲಿಂ ಸಮುದಾಯಕ್ಕೆ ಅವಮಾನವಾಗಿದೆ ಪ್ರತಿ ಚುನಾವಣೆಗೆ ಒಂದೊಂದು ಪಕ್ಷದ ಪರವಾಗಿ ಕೆಲಸ ಮಾಡತ್ತಾರೆ ಅಂತಹವರಿಂದ ನಗರಸಭೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್ ಸದಸ್ಯರಾದ ಹಿದಾಯಿತ್ ಉಲ್ಲಾ, ಏಜಾಜ್, ಗುಣಶೇಖರ್, ಶ್ಯಾಮೀರ್, ಏಜಾಜ್ ಪಾಷ, ಮುಂತಾದವರು ಇದ್ದರು.

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರದಲ್ಲಿ ಕ್ಷಯರೋಗದ ಆತಂಕ: ಏಳು ತಿಂಗಳಲ್ಲಿ 26,531 ಮಂದಿಗೆ ಕಫ ಪರೀಕ್ಷೆ; 434 ಪ್ರಕರಣಗಳು ಪತ್ತೆ, 530 ಸಕ್ರಿಯ ರೋಗಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…

4 hours ago

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

1 day ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

2 days ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

2 days ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

3 days ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

3 days ago