Categories: ಕೋಲಾರ

ಕೋಮುಲ್ ಕ್ಷೇತ್ರ ವಿಂಗಡಣೆ: ಅಸಮಾಧಾನ ಹೊರಹಾಕಿದ ಮಾಜಿ ನಿರ್ದೇಶಕರು

ಕೋಲಾರ: ಹಾಲು ಒಕ್ಕೂಟದ ಕ್ಷೇತ್ರಗಳ ವಿಂಗಡಣೆ ಸಂಬಂಧ ಏಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಿ ಒಕ್ಕೂಟದ ಮಾಜಿ ನಿರ್ದೇಶಕರಾದ ವಡಗೂರು ಡಿ.ವಿ ಹರೀಶ್ ಹಾಗೂ ಕಾಡೇನಹಳ್ಳಿ ನಾಗರಾಜ್ ನೇತೃತ್ವದಲ್ಲಿ ಕೆಲ ಹಾಲು ಡೇರಿಗಳ ಅಧ್ಯಕ್ಷರು ಸೋಮವಾರ ಕೋಮುಲ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡದರು.

ಕೋಮುಲ್ ಒಕ್ಕೂಟದ ಕಛೇರಿಗೆ ಭೇಟಿದ ಅವರು ಕ್ಷೇತ್ರ ವಿಂಡಗಣೆ ಕುರಿತು ಮಾಹಿತಿ ಕೇಳಿದರು. ಇದಕ್ಕೆ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಮತ್ತು ವ್ಯವಸ್ಥಾಪಕ (ಅಡ್ಮಿನ್) ನಾಗೇಶ್ ಮಾಹಿತಿ ಒದಗಿಸುವಲ್ಲಿ ವಿಫಲರಾದರು. ಯಾವ ಮಾನದಂಡಗಳ ಆಧಾರದ ಮೇರೆಗೆ ಕ್ಷೇತ್ರಗಳನ್ನು ವಿಂಡಗಣೆ ಮಾಡಿದೀರ ಇದನ್ನು ಮೊದಲು ಅಕ್ಷೇಪಣೆಗಳ್ನು ಕರೆದಿದ್ದೀರ ಸಂಘಗಳ ಅಧ್ಯಕ್ಷರಿಗೆ ಪತ್ರಗಳನ್ನು ಕಳುಹಿಸಿದ್ದೀರ ಎಂದು ಪ್ರಶ್ನಿಸಿ, ಹಿಂಬರಹ ನೀಡುವಂತೆ ಪಟ್ಟು ನೀಡಿದರು ಇದಕ್ಕೆ ಉತ್ತರ ನೀಡಲು ಅಧಿಕಾರಿಗಳು ತಡಬಡಿಸಿದರು.

ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಮಾತನಾಡಿ, ನಮ್ಮ ಅಧಿಕಾರಾವಧಿ ಮುಗಿದ ನಂತರ ಇಲ್ಲಿನ ಅಧಿಕಾರಿಗಳಿಗೆ ಆಡಿದ್ದೇ ಅಟವಾಗಿದೆ. ಅಧಿಕಾರಿಗಳು ಮಾಡಿರುವ ತಪ್ಪಿನ ಹಿಂದೆ ಅನಕ್ಷರಸ್ಥರು ಇದ್ದಾರೆ. ಅವರು ಹೇಳುವ ರೀತಿ ಮಾಡುವ ಹಾಗಿದ್ದರೆ ವಿದ್ಯಾವಂತರು ನೀವು ಯಾಕೆ ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರಶ್ನಿಸಿದರು.

ನಿರ್ದೇಶಕ ಸ್ಥಾನಗಳನ್ನು ನಿಗಮ ಮಾಡುವ ವಿಚಾರವಾಗಿ ರಾಜ್ಯ ಸಹಕಾರ ಇಲಾಖೆಯಿಂದ ನ.29ರಂದು ಒಕ್ಕೂಟಕ್ಕೆ ಪತ್ರ ಬಂದಿದೆ. ಅದರ ಅನ್ವಯ ಕ್ಷೇತ್ರ ವಿಗಂಡಣೆ ಮಾಡುವಲ್ಲಿ ಅಧಿಕಾರಿಗಳು ಅನಕ್ಷರಸ್ಥರ ಮಾತು ಕೇಳಿದ್ದಾರೆ. ಈ ಸಂಬಂಧ ಆಡಳಿತ ಪಕ್ಷದ ಶಾಸಕರೇ ದಾಖಲೆ ಸಮೇತ ಪತ್ರಿಕಾಗೋಷ್ಠಿ ಮಾಡುತ್ತಾರೆ. ಇದಕ್ಯಾರು ಹೊಣೆ ಎಂದು ತರಾಟಗೆ ತೆಗೆದುಕೊಂಡರು.

ಒಬ್ಬರ ಮುಲಾಜಿಗೆ ಒಳಗಾಗಿ ಕೆಲಸ ಮಾಡಲು ಹೋಗಿ ಸಹಕಾರಿ ಬ್ಯಾಂಕನ್ನು ಮುಳಗಿಸಿದ್ದು ಆಯಿತು, ಈಗ ಒಕ್ಕೂಟವನ್ನು ಮುಳುಗಿಸಲು ಪ್ರಯತ್ನ ಮಾಡುತ್ತಿದ್ದೀರ. ಇವತ್ತು ಹತ್ತು ಮಂದಿಯೊಂದಿಗೆ ಬಂದಿದ್ದೇವೆ, ಮುಂದಿನ ದಿನಗಳಲ್ಲಿ ಸಾವಿರ ಮಂದಿ ಹಸುಗಳ ಸಮೇತ ಬಂದು ಒಕ್ಕೂಟದ ಮುಂದೆ ನಿಲ್ಲಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಡಳಿತ ಮಂಡಳಿ ಇದ್ದಾಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು. ಇಲ್ಲಿನ ಅಧಿಕಾರಿಯೊಬ್ಬರ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಬದಲಾಯಿಸಿದ ಹಿನ್ನಲೆಯಲ್ಲಿ ಇಡಿ ದಾಳಿ ಮಾಡಿತು, ತದನಂತರ ಈ ಪ್ರಕರಣ ಲೋಕಾಯುಕ್ತರ ತನಿಖೆಗೆ ಹೋಗಿದೆ. ಇದು ಅಧಿಕಾರಿಗಳ ಸಾಧನೆ, ಒಬ್ಬರ ತಾಳಕ್ಕೆ ತಕ್ಕಂತೆ ಕೆಲಸ ಮಾಡುವುದು ಬಿಟ್ಟು ರೈತರ ಸಬಲೀಕರಣಕ್ಕಾಗಿ ದುಡಿಯಿರಿ, ಪ್ರತಿ ತಿಂಗಳು ಬಟವಾಡ ನೀಡುವುದರಲ್ಲೂ ತಡವಾಗುತ್ತಿದೆ. ರೈತರಿಗೆ ಯಾವ ರೀತಿ ಉತ್ತರ ಹೇಳಬೇಕು ಹೇಳಿ ಎಂದು ಪ್ರಶ್ನಿಸಿದರು.

ಮತ್ತೊಂದು ಮಾಜಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಒಕ್ಕೂಟವು ರೈತರ ಸಂಸ್ಥೆಯಾಗಿದೆ. ಇದನ್ನು ಹಾಳು ಮಾಡಿದರೆ ಯಾರು ಸುಮ್ಮಿನಿರುವುದಿಲ್ಲ. ಕೋಲಾರ-ಚಿಕ್ಕಬಳ್ಳಾಪುರ ಒಕ್ಕೂಟವನ್ನು ವಿಭಜನೆ ಮಾಡಿದ ಆದ ಮೇಲೆ ಪ್ರಕ್ರಿಯೆಗಳು ಶುರುವಾಗಿದೆ. ಆದರೆ ಕ್ಷೇತ್ರದ ವಿಂಡಗಣೆ ಮಾಡಿರುವುದರಲ್ಲಿ ಅನೇಕ ನ್ಯೂನತೆಗಳು ಇವೆ, ಇದನ್ನು ಯಾರನ್ನು ಮೆಚ್ಚಿಸಲು ಮಾಡಲಾಗಿದೆ ಎಂದು ಕಿಡಿಕಾರಿದರು.

ಒಕ್ಕೂಟವನ್ನು ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆ ಮಾಡಬೇಕು ಎಂಬದನ್ನು ತೀರ್ಮಾನಕೈಗೊಳ್ಳಲಾಯಿತು. ಮುಳಬಾಗಿಲು ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ ಎಂದು ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ಇದನ್ನು ಯಾರ ಮುಲಾಜಿಗೆ ಒಳಗಾಗಿ ಮಾಡಿದೀರ. ವೈಜ್ಞಾನಿಕವಾಗಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ಒಕ್ಕೂಟಕ್ಕೆ ಅಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಆಗಮಿಸಿದರು. ಆಗ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿ ಅವರು ಅಧಿಕಾರಿಗಳು ನನಗೂ ವಿಚಾರವನ್ನು ಮರೆ ಮಾಚಿದ್ದಾರೆ. ಮುಂದಿನ ದಿನಗಳಲ್ಲಿ ಆಡಳಿತದಲ್ಲಿ ವ್ಯತ್ಯಾಸಗಳು ಆಗದಂತೆ ಎಚ್ಚವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಲು ಡೇರಿ ಅಧ್ಯಕ್ಷರಾದ ನಲ್ಲೂರು ರಘುಪತಿರೆಡ್ಡಿ, ಶ್ಯಾಮೇಗೌಡ, ವಿಟ್ಟಪ್ಪನಹಳ್ಳಿ ಮಂಜುನಾಥ್, ಯಾನಾದನಹಳ್ಳಿ ಗೋಪಾಲಗೌಡ, ಮುಖಂಡರಾದ ಅಶೋಕ್, ಶಂಕರಪ್ಪ, ಮುರಳಿ ಮುಂತಾದವರು ಇದ್ದರು.

Ramesh Babu

Journalist

Recent Posts

ಫ್ರಿಡ್ಜ್ ಕ್ಲೀನ್ ಮಾಡುವಾಗ ವಿದ್ಯುತ್ ಶಾಕ್: ಮಹಿಳೆ ದುರ್ಮರಣ

ದೊಡ್ಡಬಳ್ಳಾಪುರ: ಫ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ನಗರದ ಚೈತನ್ಯನಗರದಲ್ಲಿ ನಡೆದಿದೆ. ಮೃತರನ್ನು…

3 hours ago

“ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ”…….

" ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ....." ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ.... ಇದಕ್ಕೆ ಅತ್ಯಂತ ನೈಜ…

12 hours ago

ಎಲ್ರಿ ಅಧಿಕಾರಿಗಳು, ಜನರ ಸಮಸ್ಯೆ ಕೇಳೋದ್ಯಾರು..?- ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳಗೆ ಸಚಿವ ಕೆ.ಎಚ್ ಮುನಿಯಪ್ಪ ತೀವ್ರ ತರಾಟೆ

ಎಲ್ರಿ ಅಧಿಕಾರಿಗಳು, ಜನ್ರ ಸಮಸ್ಯೆ ಕೇಳೋದ್ಯಾರು..?ಜನ ನನಗೆ ವೋಟ್ ಹಾಕಿದ್ಯಾಕೆ..? ಅಧಿಕಾರಿಗಳು ಇಲ್ಲಿದ್ರೆ ಜನರ ಸಮಸ್ಯೆ ಕೂಡಲೇ ಬಗೆಹರಿಸಬಹುದಲ್ವಾ.. ವೋಟ್…

23 hours ago

1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿರುವ ಜೊತೆಗೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತಗಳ ಸರ್ವಾಂಗೀಣ ಅಭಿವೃದ್ಧಿಗಳಿಗೆ…

1 day ago

ಪ್ರಸ್ತುತ ಒಂದು ಮಲೇರಿಯಾ, 6 ಡೆಂಗ್ಯೂ ದಾಖಲು: ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:- ಡಿಸಿ ಡಾ.ಕೆ ಎನ್ ಅನುರಾಧ

ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ…

2 days ago

ಗ್ರಾಮಾಂತರ ಪೊಲೀಸ್ ಠಾಣೆಗೆ ಬೊಲೆರೋ ವಾಹನ ಹಸ್ತಾಂತರ

ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದೆ. ಆದರೆ, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಪೊಲೀಸ್ ಠಾಣೆಯ ಜೀಪ್ ಗೂ ಶಾಸಕರ…

2 days ago