Categories: ಲೇಖನ

ಕಾರ್ಗಿಲ್ ಯುದ್ಧದ ನೆನಪುಗಳ ಸರಮಾಲೆಯಲ್ಲಿ ನಿರ್ಗಮಿಸಿದ ಜೀವಗಳಿಗೆ ಅಶ್ರುತರ್ಪಣೆ…..

ಕಾರ್ಗಿಲ್………

ಭಾರತ ಎಂಬುದು ಒಂದು ಪ್ರೀತಿಯ ಮರ………

ಕಾರ್ಗಿಲ್ ಯುದ್ಧದ ನೆನಪುಗಳ ಸರಮಾಲೆಯಲ್ಲಿ ನಿರ್ಗಮಿಸಿದ ಜೀವಗಳಿಗೆ ಅಶ್ರುತರ್ಪಣೆ……..

ಜುಲೈ ‌26 ಕಾರ್ಗಿಲ್ ಯುದ್ಧದ ಕಾರ್ಮೋಡ ಸರಿದ ದಿನ. ಕಳೆದ ವರ್ಷ ಕಾರ್ಗಿಲ್ ಯುದ್ಧ ನಡೆದ ಕಾಶ್ಮೀರದ ಆ ಹಿಮಾಚ್ಛಾದಿತ ಪ್ರದೇಶದಲ್ಲಿರುವ ಹುತಾತ್ಮ ಯೋಧರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದೆ. ಆ ಯುದ್ಧದಲ್ಲಿ ಮಡಿದವರ ಸಮಾಧಿ, ಪ್ರತಿಕೃತಿ, ಹೆಸರುಗಳು ಮತ್ತು ಆ ಬಗ್ಗೆ ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ಸಹ ವೀಕ್ಷಿಸಿದೆ…..

ಅತ್ಯಂತ ಕಡಿಮೆ ಆಮ್ಲಜನಕ, ಮೈನಸ್ ಡಿಗ್ರಿ ಸೆಲ್ಸಿಯಸ್ ನ ಕೊರೆಯುವ ಚಳಿ, ಕಣ್ಣ ನೋಟಕ್ಕೆ ನಿಲುಕದಷ್ಟು ಎತ್ತರದ ಪರ್ವತಗಳು ಮತ್ತು ಆಳದ ಪ್ರಪಾತಗಳ ನಡುವೆ ಮನುಷ್ಯ ಜೀವಿ ಶತ್ರುಗಳೊಂದಿಗೆ ಹೋರಾಡುವುದನ್ನು ಕಲ್ಪಿಸಿಕೊಳ್ಳುವುದು ಸಾಮಾನ್ಯರಿಗೆ ಸಾಧ್ಯವಿಲ್ಲ. ಅಷ್ಟು ಭಯಾನಕ ಪ್ರದೇಶವದು. ಪ್ರವಾಸಿಗರಿಗೆ ಸುಂದರ ರಮಣೀಯ ಎನಿಸುತ್ತದೆ. ಆದರೆ ಜೀವದ ಹಂಗು ತೊರೆದು ಹೋರಾಡುವ ಯೋಧರಿಗೆ……

ಸೈನಿಕರ ಸಾಹಸಗಾಥೆಗಳು ರೋಮಾಂಚನ ಮತ್ತು ಅಭಿಮಾನ ಮೂಡಿಸುವಂತೆ ಇರುತ್ತದೆ ನಿಜ ಹಾಗೆಯೇ ಅವರ ಸಾವು ನೋವುಗಳು ಒಡಲಾಳದಲ್ಲಿ ಕರುಳು ಕಿವುಚಿದಂತಾಗುತ್ತದೆ. ಅವರು ಬದುಕಿದ್ದಿದ್ದರೆ……,

ಆದ್ದರಿಂದ ಅದನ್ನು ವಿಜಯೋತ್ಸವ ಎಂದು ಕರೆಯಲು ಮನಸ್ಸು ಹಿಂಜರಿಯುತ್ತದೆ. ಆ ಯುದ್ದದಲ್ಲಿ ಕೇವಲ ಭಾರತದ ಸೈನಿಕರು ಮಾತ್ರವಲ್ಲ ವಿರೋಧಿ ಪಡೆಯ ಇನ್ನೂ ಹಲವಾರು ಜನರು ಸತ್ತಿದ್ದಾರೆ. ಸಾವಿನ ಆಟ ವಿಜಯೋತ್ಸವ ಆಗುವುದಿಲ್ಲ. ಆದರೂ ಸಾಮಾನ್ಯ ಮನಸ್ಥಿತಿಯಲ್ಲಿ ಆ ಘಟನೆಗಳನ್ನು ನೋಡೋಣ….

ಭಾರತ ಎಂಬುದು ಒಂದು ಪ್ರೀತಿಯ ಮರ…..

ಕಾರ್ಗಿಲ್ ಯುದ್ಧ…..

ಮೇ 3 – ಜುಲೈ ‌26 – 1999

ಭಾರತದ ಜಯ – ಪಾಕಿಸ್ತಾನದ ಸೋಲು –
ಪಾಕಿಸ್ತಾನದ್ದೇ ಕುತಂತ್ರ —-

ಆದರೆ ಇದು ವಿಜಯೋತ್ಸವವೇ ಅಥವಾ ಹುತಾತ್ಮ ಜೀವಗಳ ಆಶ್ರುತರ್ಪಣವೇ…….

ಸತ್ತಿದ್ದು ಮನುಷ್ಯರಾಗಿದ್ದು ಬದುಕಲು ಸೈನಿಕ ಎಂಬ ದೇಶ ಸೇವೆಯ ವೃತ್ತಿ ಆರಿಸಿಕೊಂಡ ಭಾರತ ಮತ್ತು ಪಾಕಿಸ್ತಾನದ ಅಮಾಯಕ ಸೈನಿಕರು ಜೊತೆಗೆ ದಾರಿ ತಪ್ಪಿ ಭಯೋತ್ಪಾದಕರಾದವರೂ ಸೇರಿದ್ದರು.

ಪರ್ವೇಜ್ ಮುಷರಫ್ ಎಂಬ ವ್ಯಕ್ತಿಯ ತೆವಲಿಗೆ ಸಾವಿರಾರು ಜೀವಗಳ ಬಲಿ……..

ಆಕ್ರಮಣ ಮಾಡಿದವರೂ, ರಕ್ಷಣೆಗೆ ಹೋರಾಡಿದವರು ಇಬ್ಬರೂ ಹತ್ಯೆಗೊಳಗಾದರು. ಗೌರವ ಪೂರ್ವಕವಾಗಿ ಸತ್ತ ಸೈನಿಕರನ್ನು ಹುತಾತ್ಮರು ಎಂದು ಎರಡೂ ದೇಶದ ಜನ ಕರೆಯಬಹುದು. ಆದರೆ ಅವರನ್ನು ಮತ್ತೆ ಮರಳಲಾಗದ ಲೋಕಕ್ಕೆ ನಾವೇ ಕಳುಹಿಸಿದೆವು.

ಭಾರತೀಯರಾದ ನಾವು ಇದನ್ನು ಸಂಭ್ರಮದಿಂದ ವಿಜಯೋತ್ಸವ ಎಂದು ಆಚರಿಸುತ್ತೇವೆ. ಪಾಕಿಸ್ತಾನಿಯರು ಇದನ್ನು ಮರೆಯಲು ಪ್ರಯತ್ನಿಸುತ್ತಾರೆ.

ಆದರೆ ಆ ಘಟನೆಯಲ್ಲಿ ಸತ್ತ ಯೋದರ ತಂದೆ ತಾಯಿ ಮಗ ಮಗಳು ಅಣ್ಣ ತಂಗಿ ತಮ್ಮ ಗೆಳೆಯ ಮುಂತಾದವರು ನೆನಪಿನ ನೋವಿನಿಂದ ನರಳುತ್ತಾರೆ – ಮುದುಡುತ್ತಾರೆ.

ಮಹಾಭಾರತದಲ್ಲಿ ವ್ಯಾಸರು ತುಂಬಾ ಸೂಕ್ಷ್ಮವಾಗಿ ಮತ್ತು ಮಾರ್ಮಿಕವಾಗಿ ಇದನ್ನು ಚಿತ್ರಿಸಿದ್ದಾರೆ. ಯುದ್ಧವನ್ನು ಸಂಪೂರ್ಣ ಗೆದ್ದ ಪಾಂಡವರು ಅದರ ಸಾವು ನೋವಿನ ಭೀಕರತೆಗೆ ಮನನೊಂದು ವೈರಾಗ್ಯದಿಂದ ತಮ್ಮ ಉತ್ತರಾಧಿಕಾರಿಗಳಿಗೆ ರಾಜ್ಯವನ್ನು ಒಪ್ಪಿಸಿ ತೀರ್ಥಯಾತ್ರೆಗೆ ( ಸ್ವರ್ಗಕ್ಕೆ ) ಹೊರಡುತ್ತಾರೆ. ಅವರು ಆ ಯುದ್ದದ ವಿಜಯವನ್ನು ಸಂಭ್ರಮಿಸುವುದಿಲ್ಲ. ಏಕೆಂದರೆ….

ಯುದ್ಧ ಒಂದು ಘರ್ಷಣೆ,
ಯುದ್ಧ ಒಂದು ಸಾವಿನ ಆಟ,
ಯುದ್ಧ ಒಂದು ದುರಂತ,
ಯುದ್ಧ ಒಂದು ಅಹಂಕಾರ,
ಯುದ್ಧ ಒಂದು ದುರಾಸೆ,
ಯುದ್ಧ ಒಂದು ಪಾಠ,
ಯುದ್ಧ ಒಂದು ಅನುಭವ,
ಯುದ್ಧ ಒಂದು ರಕ್ಷಣಾ ವ್ಯೂಹ,
ಯುದ್ಧ ಒಂದು ಅನಿವಾರ್ಯ ಕರ್ತವ್ಯ,

ಸಂಭ್ರಮಕ್ಕಿಂತ ಸಹಾನುಭೂತಿಯೇ ಹೆಚ್ಚು ಪರಿಣಾಮಕಾರಿ.

ಯುದ್ಧ ಮಾಡಿದವರು ನಾವಲ್ಲ,
ಯುದ್ಧ ಗೆದ್ದವರು ನಾವಲ್ಲ,
ಅದು ಸೈನಿಕರು.
ನಾವೇನಿದ್ದರೂ ಅದರ ಫಲಾನುಭವಿಗಳು ಮಾತ್ರ.

ದುಷ್ಟ ಪರ್ವೇಜ್ ಮುಷರಫ್ ಎಂಬುವವನ ಅಧಿಕಾರ ದಾಹಕ್ಕೆ, ಶಾಶ್ವತ ಗಾಯಗಳಾದ, ಶಾಶ್ವತ ಶವಗಳಾದ ಪಾಕಿಸ್ತಾನ ಮತ್ತು ಭಾರತದ ಸೈನಿಕರನ್ನು, ಅವರ ಪ್ರೀತಿ ಪಾತ್ರರನ್ನು ಮೌನದಿಂದ ನೆನೆಯುತ್ತಾ………

ಸತ್ತವರು ಭೂಮಿಯ ಮೇಲಿನ ಮನುಷ್ಯ ಪ್ರಾಣಿಗಳು…..

ಉಳಿದದ್ದೆಲ್ಲಾ ಅವನ ಭ್ರಮೆ ಮತ್ತು ಸ್ವಾರ್ಥ…..

ಮನುಷ್ಯ ಕುಲಂ ತಾನೊಂದು ವಲಂ…..

ವಿಶ್ವ ಮಾನವ ಪ್ರಜ್ಞೆಯೇ ನಮ್ಮನ್ನು ವಿಶಾಲತೆಯೆಡೆಗೆ – ನೆಮ್ಮದಿಯೆಡೆಗೆ – ಬದುಕಿನ ‌ಸಾರ್ಥಕತೆಯೆಡೆಗೆ ಸಾಗುವಂತೆ ಮಾಡುತ್ತದೆ.

ಹೌದು ಹೇಳಬಹುದು…..

ಭಾರತ ಗೆದ್ದಿತು, ದುಷ್ಟ ಪಾಕಿಸ್ತಾನ ಸೋತಿತು.
ಅದರ ನೆನಪಿನಲ್ಲಿ ಸಂಭ್ರಮ ಆಚರಿಸಿ. ಅದಕ್ಕೆ ಸಾಕಷ್ಟು ಜನರು ಚಪ್ಪಾಳೆ ಹೊಡೆಯಬಹುದು. ಆದರೆ ಈ ದಿನದ ನೆನಪುಗಳು ಸಾರ್ಥಕವಾಗುವುದು ಮುಂದೆ ಯುದ್ದವಾಗದಂತೆ ತಡೆದು ಸೈನಿಕರು ಸಾಯದಂತೆ ತಡೆಯುವ ಮಾರ್ಗಗಳ ಹುಡುಕಾಟದಲ್ಲಿ ಮಾತ್ರ.

ದೇಶದ ರಕ್ಷಣೆ ಬಹಳ ಮುಖ್ಯ. ಇದೇ ಬಹುದೊಡ್ಡ ಸತ್ಯ. ಅದಕ್ಕೆ ಬಲಶಾಲಿಗಳಾಗಬೇಕು ನಿಜ.‌ ಆದರೆ ಯಾರು ಬಲಶಾಲಿಗಳು, ಎಷ್ಟು ಬಲಶಾಲಿಗಳು, ಯಾವುದರಲ್ಲಿ ಬಲಶಾಲಿಗಳು, ಆ ಬಲಶಾಲಿಗಳು ಎಷ್ಟು ಶಾಶ್ವತ ಎಂಬ ಕಾಡುವ ಪ್ರಶ್ನೆಗೆ…..

ಒಂದು ಮರಕ್ಕಿಂತ ಮತ್ತೊಂದು ‌ದೊಡ್ಡ ಮರ ಬೆಳೆಯುತ್ತಲೇ ಇರುತ್ತದೆ. ಪ್ರತಿ ಮರವೂ ತಾನೇ ಬಲಶಾಲಿ ಎಂದು ಕೊಳ್ಳುತ್ತದೆ. ಆದರೆ ದ್ವೇಷದ ಮರ ತನ್ನ ಅಹಂ ನಿಂದಲೇ ನಾಶವಾಗುತ್ತದೆ. ಪ್ರೀತಿಯ ಮರ ಬೆಳೆಯುತ್ತಲೇ ಇರುತ್ತದೆ…..

ಭಾರತ ಎಂಬುದು ಒಂದು ಪ್ರೀತಿಯ ಮರ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026: ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆ. 23 ವರೆಗೆ ಅವಕಾಶ-ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿ ಪ್ರಕಟಗೊಂಡಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಮತಗಟ್ಟೆ…

49 minutes ago

ರೈಲು ಡಿಕ್ಕಿಗೆ ಅಪರಿಚಿತ ವ್ಯಕ್ತಿ ಬಲಿ

ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ…

4 hours ago

ಮಳೆ ಕೊರತೆ ನೀಗಿಸಲು ಸರ್ಕಾರದ ಮಾಸ್ಟರ್ ಪ್ಲ್ಯಾನ್: ಎಚ್.ಎ.ಎಲ್‌ನಲ್ಲಿ ಮೋಡ ಬಿತ್ತನೆಗೆ ಜಲ ಸಂಪನ್ಮೂಲ ಸಚಿವರಿಂದ ಚಾಲನೆ

ರಾಜ್ಯದಲ್ಲಿ ಎದುರಾಗಿರುವ ಮಳೆ‌ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಮೋಡ…

5 hours ago

ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ; ಚಾಲಕ ಸ್ಥಳದಲ್ಲೇ ಸಾವು ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಮುಂಜಾನೆ ದುರಂತ | ರಸ್ತೆಗೆ ಚೆಲ್ಲಾಪಿಲ್ಲಿಯಾದ ಸಿಮೆಂಟ್ ಮೂಟೆಗಳು

  ದೊಡ್ಡಬಳ್ಳಾಪುರ: ಕಡಿದಾದ ತಿರುವಿನಲ್ಲಿ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ…

8 hours ago

ಬಸ್ ಏರಿದ್ರೆ ಗಮ್ಯಸ್ಥಾನ ಸೇರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ!: ಗುಂಡಮ್ಮಗೆರೆ–ಹೊಸಹಳ್ಳಿ ಮಾರ್ಗದಲ್ಲಿ ಪದೇ ಪದೇ ಕೆಟ್ಟು ನಿಲ್ಲುವ ಸಾರಿಗೆ ಬಸ್‌ಗಳು

ದೊಡ್ಡಬಳ್ಳಾಪುರ: ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಪದೇ ಪದೇ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…

8 hours ago

ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ……

ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು…

10 hours ago