ಎಣ್ಣೆ ಪಾರ್ಟಿ ಮಾಡಿ ಸ್ನೇಹಿತನಿಗೆ ಮಹೂರ್ತವಿಟ್ಟ ಹಂತಕರು: ಒಂದು ಬಿಯರ್ ಬಾಟೆಲ್ ಕೊಡು ಎಂದು ಕೇಳಿದರೆ ಮೂರು ಕೊಡುತ್ತೇನೆ ಎಂದು ಹೇಳಿ ಕರೆಸಿ ಕೊಂದೇ ಬಿಟ್ಟ ಕಿರಾತಕರು

ಆತ ತನ್ನ ಪಾಡಿಗೆ ತಾನು ಪೈಂಟ್ ಕೆಲಸ ಮಾಡಿಕೊಂಡು ಇದ್ದ. ಕುಟುಂಬ ನಿರ್ವಹಣೆಗೆ ಹಣ ಸಾಲಲ್ಲ ಎಂದು ರಾತ್ರಿ ವೇಳೆಯೂ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ‌‌ ಮಾಡಿಕೊಂಡು ಇದ್ದ. ಆದರೆ ಸ್ನೇಹಿತರ ಸಹವಾಸ ಮಾಡಿ ಈಗ ಬೀದಿ ಹೆಣವಾಗಿ ಬಿಟ್ಟಿದ್ದಾನೆ.

ಒಂದು ಬಾಟೆಲ್‌ ಕೇಳಿದರೆ ಎರಡು ಬಾಟೆಲ್‌ ನೀಡುತ್ತೇನೆ ಎಂದು ಹೇಳಿ ಕೊಲೆ ಮಾಡಿ, ರಸ್ತೆ ಬದಿಯಲ್ಲಿ ಬಿಸಾಡಿ ಅಪಘಾತ ಆಗಿದೆ ಎಂದು ದಿಕ್ಕು ತಪ್ಪಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು, ಸತ್ತವ ಯಾರು ಅಂತಿರಾ , ಈ ಸ್ಟೋರಿ ಓದಿ……………

ಹೌದು, ರಸ್ತೆಯ ಮೇಲೆ‌ ಅಪಘಾತವಾದ ರೀತಿ ಬಿದ್ದಿರುವ ಶವ, ಅಯ್ಯೋ‌ ಈತನಿಗೆ  ಹೀಗೆ ಆಗಬಾರದಿತ್ತು ಎಂದು ಗುಸು ಗುಸು ಎನ್ನುತ್ತಿರುವ ಜನ, ಸ್ಥಳ ಪರಿಶೀಲನೆ ಮಾಡುತ್ತಿರುವ ಪೋಲೀಸರು, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸಿದ್ದೇನಹಳ್ಳಿಯಲ್ಲಿ. ಅಶೋಕ್ (35) ಕೊಲೆಯಾದ ದುರ್ದೈವಿ.

ಅಶೋಕ್ ವೃತ್ತಿಯಲ್ಲಿ ಪೇಂಟರ್.‌ ಇದರಲ್ಲಿ ಕುಟುಂಬ ನಿರ್ವಹಣೆ ಮಾಡಲು ಹಣ ಸಾಲಲ್ಲ ಎಂದು ರಾತ್ರಿಯ ವೇಳೆ  ವಾಚ್ ಮೆನ್ ಆಗಿ ಕೆಲಸ‌‌‌‌‌ ಮಾಡುತ್ತಿದ್ದ. ಬರುವ ಹಣದಲ್ಲಿಯೇ ಮೂರು ಮಕ್ಕಳ ಜೊತೆ ಮಡದಿಯನ್ನ ಸಾಕಿಕೊಂಡು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿದ್ದ. ಆದರೆ‌ ಈಗ ರಸ್ತೆ ಬದಿಯಲ್ಲಿ ಕೊಲೆಯಾಗಿ ಬಿದ್ದಿದ್ದಾನೆ.

ಇನ್ನೂ ಅಶೋಕ್ ಕೆಲಸಕ್ಕೆ ಹೋಗಿದ್ದ ವೇಳೆ, ಸ್ನೇಹಿತರಿಂದ ಎಣ್ಣೆ ಪಾರ್ಟಿ ಮಾಡೋಣಾ ಅಂತ ಕರೆ‌ ಬಂದಿದೆ.‌ ಆಗ ಅಶೋಕ್ ನನಗೆ ಒಂದು ಬಿಯರ್ ಬಾಟೆಲ್‌‌ ಸಾಕು ಎಂದಿದ್ದನಂತೆ.‌ ಆದರೆ‌ ಆತನ ಸ್ನೇಹಿತರು ಒಂದು ಯಾಕೆ ಮೂರು ಕೊಡಿಸುತ್ತೇನೆ ಬಾ ಎಂದು ಹೇಳಿದ್ದರಂತೆ. ಆಗ ಅಶೋಕ್‌‌ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿದ್ದ ಸ್ನೇಹಿತರ ಬಳಿ‌,‌ ಹೆಂಗೆ ನನ್ನ‌ ಸ್ನೇಹಿತರು, ಒಂದು ಕೇಳಿದರೆ ಮೂರು ಕೊಡುತ್ತಾರೆ ಎಂದು ಜಂಬ ಕೊಚ್ಚಿಕೊಂಡಿದ್ದಾನೆ. ಕೆಲಸದಿಂದ ಪಾರ್ಟಿಗೆ ಹೋದವನು ಈಗ ಹೆಣವಾಗಿದ್ದಾನೆ‌.

ಪಾರ್ಟಿ ಮಾಡಿಕೊಳ್ಳುವ ವೇಳೆ ಏನಾಯ್ತೋ ಏನೋ, ತಲೆಗೆ ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿ‌ ಕೊಲೆ ಮಾಡಿದ್ದಾರೆ. ಇನ್ನೂ ಕೊಲೆ ಬೆಳಕಿಗೆ ಬರಬಾರದು ಎಂದು ಕೆರೆಯಲ್ಲಿ ರಕ್ತದ ಕಲೆಗೆಲ್ಲಾ ಮಣ್ಣು ಹಾಕಿ, ನಂತರ ರಸ್ತೆ ಬದಿಗೆ ಶವವನ್ನ ತಂದು ಅಪಘಾತ ಆದ ರೀತಿ ಹಾಕಿ ಹೋಗಿದ್ದಾರೆ.

ಹೊಸಕೋಟೆ ಸೂಲಿಬೆಲೆ‌ ಪೋಲೀಸರು ಸ್ಥಳಕ್ಕೆ ಬಂದಾಗಲೇ ಕೊಲೆಯ ರಸಹ್ಯ ಬಯಲಾಗಿದೆ. ಸೂಲಿಬೆಲೆ ಪೋಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆ ಪಾರ್ಟಿಗೆ ಎಂದು ಹೋದವ ಈಗ ಬೀದ ಹೆಣವಾಗಿದ್ದಾನೆ. ಇನ್ನೂ ಕೊಲೆ ಮಾಡಿದ ಆರೋಪಿಗೆ ಅಕ್ರಮ ಸಂಬಂಧವಿತ್ತು. ಅದನ್ನ ಪ್ರಶ್ನೆ ಮಾಡಿದ್ದಕ್ಕೆ ಕೊಲೆಯಾಗಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.‌ ಪೋಲೀಸ್ ತನಿಖೆಯ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

Ramesh Babu

Journalist

Recent Posts

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

6 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

19 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

21 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

21 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

21 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

1 day ago