ಎಣ್ಣೆ ಪಾರ್ಟಿ ಮಾಡಿ ಸ್ನೇಹಿತನಿಗೆ ಮಹೂರ್ತವಿಟ್ಟ ಹಂತಕರು: ಒಂದು ಬಿಯರ್ ಬಾಟೆಲ್ ಕೊಡು ಎಂದು ಕೇಳಿದರೆ ಮೂರು ಕೊಡುತ್ತೇನೆ ಎಂದು ಹೇಳಿ ಕರೆಸಿ ಕೊಂದೇ ಬಿಟ್ಟ ಕಿರಾತಕರು

ಆತ ತನ್ನ ಪಾಡಿಗೆ ತಾನು ಪೈಂಟ್ ಕೆಲಸ ಮಾಡಿಕೊಂಡು ಇದ್ದ. ಕುಟುಂಬ ನಿರ್ವಹಣೆಗೆ ಹಣ ಸಾಲಲ್ಲ ಎಂದು ರಾತ್ರಿ ವೇಳೆಯೂ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ‌‌ ಮಾಡಿಕೊಂಡು ಇದ್ದ. ಆದರೆ ಸ್ನೇಹಿತರ ಸಹವಾಸ ಮಾಡಿ ಈಗ ಬೀದಿ ಹೆಣವಾಗಿ ಬಿಟ್ಟಿದ್ದಾನೆ.

ಒಂದು ಬಾಟೆಲ್‌ ಕೇಳಿದರೆ ಎರಡು ಬಾಟೆಲ್‌ ನೀಡುತ್ತೇನೆ ಎಂದು ಹೇಳಿ ಕೊಲೆ ಮಾಡಿ, ರಸ್ತೆ ಬದಿಯಲ್ಲಿ ಬಿಸಾಡಿ ಅಪಘಾತ ಆಗಿದೆ ಎಂದು ದಿಕ್ಕು ತಪ್ಪಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು, ಸತ್ತವ ಯಾರು ಅಂತಿರಾ , ಈ ಸ್ಟೋರಿ ಓದಿ……………

ಹೌದು, ರಸ್ತೆಯ ಮೇಲೆ‌ ಅಪಘಾತವಾದ ರೀತಿ ಬಿದ್ದಿರುವ ಶವ, ಅಯ್ಯೋ‌ ಈತನಿಗೆ  ಹೀಗೆ ಆಗಬಾರದಿತ್ತು ಎಂದು ಗುಸು ಗುಸು ಎನ್ನುತ್ತಿರುವ ಜನ, ಸ್ಥಳ ಪರಿಶೀಲನೆ ಮಾಡುತ್ತಿರುವ ಪೋಲೀಸರು, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸಿದ್ದೇನಹಳ್ಳಿಯಲ್ಲಿ. ಅಶೋಕ್ (35) ಕೊಲೆಯಾದ ದುರ್ದೈವಿ.

ಅಶೋಕ್ ವೃತ್ತಿಯಲ್ಲಿ ಪೇಂಟರ್.‌ ಇದರಲ್ಲಿ ಕುಟುಂಬ ನಿರ್ವಹಣೆ ಮಾಡಲು ಹಣ ಸಾಲಲ್ಲ ಎಂದು ರಾತ್ರಿಯ ವೇಳೆ  ವಾಚ್ ಮೆನ್ ಆಗಿ ಕೆಲಸ‌‌‌‌‌ ಮಾಡುತ್ತಿದ್ದ. ಬರುವ ಹಣದಲ್ಲಿಯೇ ಮೂರು ಮಕ್ಕಳ ಜೊತೆ ಮಡದಿಯನ್ನ ಸಾಕಿಕೊಂಡು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿದ್ದ. ಆದರೆ‌ ಈಗ ರಸ್ತೆ ಬದಿಯಲ್ಲಿ ಕೊಲೆಯಾಗಿ ಬಿದ್ದಿದ್ದಾನೆ.

ಇನ್ನೂ ಅಶೋಕ್ ಕೆಲಸಕ್ಕೆ ಹೋಗಿದ್ದ ವೇಳೆ, ಸ್ನೇಹಿತರಿಂದ ಎಣ್ಣೆ ಪಾರ್ಟಿ ಮಾಡೋಣಾ ಅಂತ ಕರೆ‌ ಬಂದಿದೆ.‌ ಆಗ ಅಶೋಕ್ ನನಗೆ ಒಂದು ಬಿಯರ್ ಬಾಟೆಲ್‌‌ ಸಾಕು ಎಂದಿದ್ದನಂತೆ.‌ ಆದರೆ‌ ಆತನ ಸ್ನೇಹಿತರು ಒಂದು ಯಾಕೆ ಮೂರು ಕೊಡಿಸುತ್ತೇನೆ ಬಾ ಎಂದು ಹೇಳಿದ್ದರಂತೆ. ಆಗ ಅಶೋಕ್‌‌ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿದ್ದ ಸ್ನೇಹಿತರ ಬಳಿ‌,‌ ಹೆಂಗೆ ನನ್ನ‌ ಸ್ನೇಹಿತರು, ಒಂದು ಕೇಳಿದರೆ ಮೂರು ಕೊಡುತ್ತಾರೆ ಎಂದು ಜಂಬ ಕೊಚ್ಚಿಕೊಂಡಿದ್ದಾನೆ. ಕೆಲಸದಿಂದ ಪಾರ್ಟಿಗೆ ಹೋದವನು ಈಗ ಹೆಣವಾಗಿದ್ದಾನೆ‌.

ಪಾರ್ಟಿ ಮಾಡಿಕೊಳ್ಳುವ ವೇಳೆ ಏನಾಯ್ತೋ ಏನೋ, ತಲೆಗೆ ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿ‌ ಕೊಲೆ ಮಾಡಿದ್ದಾರೆ. ಇನ್ನೂ ಕೊಲೆ ಬೆಳಕಿಗೆ ಬರಬಾರದು ಎಂದು ಕೆರೆಯಲ್ಲಿ ರಕ್ತದ ಕಲೆಗೆಲ್ಲಾ ಮಣ್ಣು ಹಾಕಿ, ನಂತರ ರಸ್ತೆ ಬದಿಗೆ ಶವವನ್ನ ತಂದು ಅಪಘಾತ ಆದ ರೀತಿ ಹಾಕಿ ಹೋಗಿದ್ದಾರೆ.

ಹೊಸಕೋಟೆ ಸೂಲಿಬೆಲೆ‌ ಪೋಲೀಸರು ಸ್ಥಳಕ್ಕೆ ಬಂದಾಗಲೇ ಕೊಲೆಯ ರಸಹ್ಯ ಬಯಲಾಗಿದೆ. ಸೂಲಿಬೆಲೆ ಪೋಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆ ಪಾರ್ಟಿಗೆ ಎಂದು ಹೋದವ ಈಗ ಬೀದ ಹೆಣವಾಗಿದ್ದಾನೆ. ಇನ್ನೂ ಕೊಲೆ ಮಾಡಿದ ಆರೋಪಿಗೆ ಅಕ್ರಮ ಸಂಬಂಧವಿತ್ತು. ಅದನ್ನ ಪ್ರಶ್ನೆ ಮಾಡಿದ್ದಕ್ಕೆ ಕೊಲೆಯಾಗಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.‌ ಪೋಲೀಸ್ ತನಿಖೆಯ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

Ramesh Babu

Journalist

Recent Posts

ಸೈಕಲ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಬೈಕ್: ಮಹಿಳೆ ಸಾವು

ದೇವನಹಳ್ಳಿ: ರಸ್ತೆಯಲ್ಲಿ ತೆರಳುತ್ತಿದ್ದ ಸೈಕಲ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು, ಬಳಿಕ ಬೈಕ್ ಡಿವೈಡರ್‌ಗೆ ಅಪ್ಪಳಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ…

10 hours ago

ಬೆಳೆಗಳಿಗೆ ಅಸಮರ್ಪಕ ರಸಗೊಬ್ಬರ ಬಳಕೆ: ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ- ಮಣ್ಣು ವಿಜ್ಞಾನಿ ಡಾ. ಬಾಲಾಜಿ ನಾಯ್ಕ್

ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮದಲ್ಲಿ ಸಮತೋಲಿತ ರಸಗೊಬ್ಬರಗಳ ಬಳಕೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ…

14 hours ago

ಬಾಲ್ಯ ವಿವಾಹ ತಡೆದ ಅಧಿಕಾರಿಗಳು: 16 ವರ್ಷದ ಬಾಲಕಿ ರಕ್ಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದು 16 ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ.…

16 hours ago

ರಾಜ್ಯದಲ್ಲಿ ಹೆಚ್ಚಿದ ಸನ್ ಸ್ಟ್ರೋಕ್‌ ಪ್ರಕರಣ : ಉರಿ ಬಿಸಿಲಿಗೆ ತತ್ತರಿಸಿದ ಜನಜೀವನ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೇ ತಿಂಗಳ ಉರಿ ಬಿಸಿಲು ಜನರನ್ನು…

18 hours ago

ವಿಜಯ್, ಆಃಡವನ್ ಮತ್ತು ಪ್ರಮಾಣವಚನ ನಿಷ್ಠೆ…….

ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ...…

21 hours ago

ಸಿನಿಮಾ ಸ್ಟೈಲ್‌ನಲ್ಲಿ ಪೊಲೀಸರ ಚೇಸಿಂಗ್: ಎರಡೇ ಗಂಟೆಗಳಲ್ಲಿ ಕಳವು ಮಾಡಿದ್ದ ಕ್ಯಾಷ್‌ ಸಮೇತ ಕಳ್ಳರ ಬಂಧನ

ಚಿಕ್ಕಬಳ್ಳಾಪುರ-‌ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಕ್ಷಣ ಮಾತ್ರದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳೂವರೆ…

1 day ago