ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಂತು ನಾಗರ ಪಂಚಮಿ ಹಬ್ಬವನ್ನ ಸಡಗರ, ಸಂಭ್ರಮದಿಂದ ಹೆಣ್ಮಕ್ಕಳು ಜೋಕಾಲಿಯಲ್ಲಿ ಜಿಕಿಕೊಂಡು ಆಚರಿಸುವ ಹಬ್ಬವಷ್ಟೆ ಅಲ್ಲದೇ ಇದು ಸಹೋದರತ್ವದ ಬಾಂಧವ್ಯ ಬೆಸೆಯುವಂತಹ ಮಹತ್ವಪೂರ್ಣ ನಾಡಿನ ದೊಡ್ಡ ಹಬ್ಬವಿದಾಗಿದೆ.
ಈ ನಾಗರ ಪಂಚಮಿ ಹಬ್ಬ ಸಮಿಪಿಸುತ್ತಿದಂತೆ ಗಂಡನ ಮನೆಯಲ್ಲಿರುವ ಪ್ರತಿ ಹೆಣ್ಮಕ್ಕಳ ಮುಖದಲ್ಲಿ ಎಲ್ಲಿಲ್ಲದ ಸಂತಸ ಕಾಣಬಹುದು. ಏಕೆಂದರೆ ಸಹೋದರನಾದವನು ಸಹೋದರಿಯ ಗಂಡನ ಮನೆಗೆ ಹೋಗಿ ಪಂಚಮಿ ಹಬ್ಬಕ್ಕೆ ಕರೆತರುವದು ಪುರಾತನ ಕಾಲದಿಂದಲ್ಲೂ ವಾಡಿಕೆಯಾಗಿ ಬಂದಿದೆ. ಅದಕ್ಕೆ ಪ್ರತಿ ಹೆಣ್ಮಕ್ಕಳಲ್ಲಿ ಪಂಚಮಿಯ ಸಂಭ್ರಮ ಮನೆ ಮಾಡಿರುತ್ತದೆ.
ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ಬೆಳಿಗ್ಗೆ ಎದ್ದೊಡನೆ ಮೈತುಂಬಾ ಎಣ್ಣೆ-ಜೋಳದ ಹಿಟ್ಟು ಹಚ್ಚಿ ಸ್ನಾನ ಮಾಡಿಸುವುದು ಹಿಂದಿನಿಂದ ಬಂದ ವಾಡಿಕೆ. ನಾಡಿನಾದ್ಯಂತ ಮಹಿಳೆಯರು ಹಾಗೂ ಪುಟ್ಟ ಹೆಣ್ಮಕ್ಕಳು ಹೊಸ ಬಟ್ಟೆ ತೊಟ್ಟು ಗ್ರಾಮದಲ್ಲಿರುವ ನಾಗರ ಕಟ್ಟೆಗಳಿಗೆ ತೆರಳಿ, ಶ್ರದ್ಧಾ-ಭಕ್ತಿಯಿಂದ ನಾಗ ದೇವತೆಯ ಪ್ರತಿಮೆ-ಹುತ್ತಕ್ಕೆ ಹಾಲೆರೆದು, ಹೋಳಿಗೆ ನೈವೇದ್ಯ ಅರ್ಪಿಸುವ ಮುಖಾಂತರ ತಮ್ಮ ಸಹೋದರನ ಆಯುಷ್ಯ-ಆರೋಗ್ಯ ನೂರೂ ಕಾಲ ವೃದ್ಧಿಸಲೆಂದು ಮೊರೆ ಇಡುತ್ತಾರೆ.
ತದನಂತರದಲ್ಲಿ ತಮ್ಮ ಮನೆಗಳಲ್ಲಿ ರವೆ-ಶೇಂಗಾ ಉಂಡೆ, ಕಾರಚಿಕಾಯಿ, ಚಕಲಿ, ಕರದಂಟು, ಚುಡಾ ಹೀಗೆ ವಿವಿಧ ಖಾದ್ಯಗಳ ತಿನಿಸು ತಿಂದು ಜೋಕಾಲಿ ಜಿಕಿಕೊಂಡ ಎಂಜಾಯ್ ಮಾಡುವ ಹಬ್ಬ. ಈ ದಿನ ಗ್ರಾಮೀಣ ಪ್ರದೇಶದಲ್ಲಿ ಸಂಜೆ ಹೊತ್ತಿಗೆ ಸಂಗ್ರಾಣಿ ಕಲ್ಲು ಎತ್ತುವುದು, ಬಂಡಿ ಎಳೆಯುವುದು, ಬಾರವಾದ ಕಲ್ಲು ಎತ್ತುವುದು, ಲಿಂಬು ಹಣ್ಣು ಚಮಚದಲ್ಲಿಟ್ಟುಕೊಂಡು ಓಡುವುದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಣ್ಣಾಮುಚ್ಚಾಲೆ ಪುರುಷರು ಆಡಿದರೆ, ಇನ್ನೂ ಮಹಿಳೆಯರು ಜೋಕಾಲಿಯಲ್ಲಿ ಜಿಕುವ, ಹಾಡು ಹಾಡುವ ಮೂಲಕ ಇಂತಹ ಗ್ರಾಮೀಣ ಆಟಗಳನ್ನು ಆಡಿ ಹಬ್ಬದ ಖುಷಿ ಸಂಭ್ರಮಿಸುವರು.
ಈ ಬಾರಿ ಮುಂಗಾರು ಮಳೆ-ಬೆಳೆಯ ಕೊರತೆ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ನಾಗರ ಪಂಚಮಿ ಹಬ್ಬಕ್ಕೆ ಜನರು ಸಿಹಿ ತಿಂಡಿ-ತಿನಿಸುಗಳನ್ನು ತಯಾರಿಸಲು ಸಾಮಾಗ್ರಿ ಖರೀದಿ ಜೋರಾಗಿಯೇ ಮಾಡುತ್ತಿದ್ದಾರೆ.
ವರದಿ: ರೇವಣಸಿದ್ದ ಬಗಲಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ)
ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…
ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…
ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…