TAPMCS Election : ಶ್ರೀನಿವಾಸ್ ಮೂರ್ತಿ ಯಾವ ಪಕ್ಷದ ಅಭ್ಯರ್ಥಿ…?: ಕಾಂಗ್ರೆಸ್ ಮತ್ತು NDA ಕೂಟದ ಎರಡು ಕರಪತ್ರಗಳಲ್ಲಿ ಕಾಣಿಸಿಕೊಂಡ ಅಭ್ಯರ್ಥಿ: ಮತದಾರರಲ್ಲಿ ಗೊಂದಲ

ದೊಡ್ಡಬಳ್ಳಾಪುರ : ಶ್ರೀನಿವಾಸ್ ಮೂರ್ತಿ ಯಾವ ಪಕ್ಷದ ಅಭ್ಯರ್ಥಿ ಎಂಬುದೇ ಗೊಂದಲಮಾಯವಾಗಿದೆ. ಸ್ಥಳೀಯವಾಗಿ, ನವೆಂಬರ್ 2ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆಯ ‘ಎ’ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ.ಬಿ.ಎನ್ ಕಾಂಗ್ರೆಸ್ ಬೆಂಬಲಿತ ಮತ್ತು ಎನ್ ಡಿಎ ಕೂಟದ ಎರಡು ಕರಪತ್ರಗಳಲ್ಲಿ ಕಾಣಿಸಿಕೊಂಡಿರುವುದು ಮತದಾರರ ಗೊಂದಲಕ್ಕೆ ಕಾರಣವಾಗಿದೆ.

‘ಎ’ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಪರವಾಗಿ ಕಾಂಗ್ರೆಸ್ ಒಂದೆಡೆ ಪ್ರಚಾರ ಮಾಡಿದರೆ ಮತ್ತೊಂದೆಡೆ ಎನ್ ಡಿ ಎ ( ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ) ಪ್ರಚಾರ ಮಾಡುತ್ತಿದ್ದೆ. ಎರಡು ಪಕ್ಷಗಳು ಮತಯಾಚನೆ ಕರಪತ್ರದಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುದ್ರಿಸಿದ್ದು, ಎರಡು ಕರಪತ್ರಗಳಲ್ಲಿ ಗಂಟಿಗಾನಹಳ್ಳಿ ‘ಎ’ ತರಗತಿ ಸ್ಥಾನದ ಅಭ್ಯರ್ಥಿ ಶ್ರೀನಿವಾಸ್ ಮೂರ್ತಿ ಬಿ.ಎನ್ ಭಾವಚಿತ್ರವಿರುವುದು ಮತದಾರರಲ್ಲಿ ಗೊಂದಲ ಮೂಡಿಸಿದೆ. ಇದೆಂತಾ ಸರ್ವ ಪಕ್ಷಗಳ ಮೈತ್ರಿ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀನಿವಾಸಮೂರ್ತಿ.ಬಿ.ಎಸ್ ನಾನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದೇನೆ. ಅದರೆ ಎನ್ ಡಿಎ ಕೂಟದ ಕರಪತ್ರದಲ್ಲಿ ನನ್ನ ಹೆಸರಿರುವುದು ನನಗೆ ಗೊತ್ತಿಲ್ಲ, ನನ್ನ ಗಮನಕ್ಕೆ ತರದೆ ಕರಪತ್ರದಲ್ಲಿ ನನ್ನ ಹೆಸರು ಹಾಕಿಕೊಂಡಿದ್ದಾರೆ ಎಂದರು.

Ramesh Babu

Journalist

Recent Posts

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎನ್ ದುರ್ಗಶ್ರೀ ವರ್ಗಾವಣೆ: ಹೊಸ ಎಸಿ ಯಾರು ಗೊತ್ತಾ…?

ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎನ್ ದುರ್ಗಶ್ರೀ ಅವರನ್ನು ವರ್ಗಾವಣೆ ಮಾಡಲಾಗಿದೆ. ನೂತನ ಎಸಿಯಾಗಿ ಮಂಜುನಾಥ್ ಟಿ.ಆರ್ ಅವರನ್ನು ನೇಮಕ ಮಾಡಲಾಗಿದೆ...

24 minutes ago

ಎಪಿಎಂಸಿ ಗೇಟ್ ಮುಂಭಾಗ ಸರಣಿ ಅಪಘಾತ

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಗೇಟ್ ಮುಂಭಾಗ ಸರಣಿ ಅಪಘಾತ ನಡೆದಿದೆ.‌ ಘಟನೆಯಲ್ಲಿ ಬಸ್, ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಡ್ಡಬಂದ…

53 minutes ago

ಜಾತ್ರೆ ನಡೆದ ಮರು ದಿನವೇ ದೇವಾಲಯದಲ್ಲಿ ಕಳ್ಳತನ: 9 ತಾಳಿ, ಬೆಳ್ಳಿ ಕಿರೀಟ, ಹುಂಡಿ ಕಳವು

ಜಾತ್ರೆ ನಡೆದ ಮರು ದಿನವೇ ಲಕ್ಷ್ಮೀ ದೇವಾಲಯದಲ್ಲಿ ಕಳ್ಳತನ ನಡೆದಿರುವ ಘಟನೆ ದೊಡ್ಡಬಳ್ಳಾಪುರದ ಹಾದ್ರೀಪುರ ಗ್ರಾಮದಲ್ಲಿ ನಡೆದಿದೆ... ದೇವಾಲಯದ ಬಾಗಿಲು…

2 hours ago

ಅಫಿಡವಿಟ್ ಆಧಾರಿತ ಭೂಪರಿವರ್ತನೆ ಅರ್ಜಿಗಳ ತ್ವರಿತ ವಿಲೇವಾರಿ ಕುರಿತಂತೆ ಕಂದಾಯ ಆಯುಕ್ತರ ಹೊಸ ಆದೇಶ

ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸುವ ಉದ್ದೇಶದಿಂದ ಅಫಿಡವಿಟ್ ಆಧಾರಿತ ಭೂಪರಿವರ್ತನೆ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ…

4 hours ago

ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ…..?

ಪಟಾಕಿ ದುರಂತಕ್ಕೆ ಯಾರು ಹೊಣೆ.... ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ..... ಲೇಸರ್…

12 hours ago

ನಾಳೆ (ಏ.23ರಂದು) ವಿವಿಧ ಊರುಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.23 ರಂದು 66/11ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ F09-Rajaghatta, F03-Thalagavara, F12-Heggadihalli, F17- Nandi…

12 hours ago