PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು ಪರೀಕ್ಷೆ ಮುಗಿದ ಬೆನ್ನಲ್ಲೇ ಹೆತ್ತ ತಾಯಿಯನ್ನೇ ಕಳೆದುಕೊಂಡ ಈ ಯುವತಿಯ ಛಲ ಕಲ್ಲು ಹೃದಯವನ್ನೂ ಕರಗಿಸುವಂತಿದೆ..

ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ  ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಈಕೆಯ ಈ ಸಾಧನೆಯನ್ನು ನೋಡಿ ಇಡೀ ನಾಡು ಸಂಭ್ರಮಿಸುತ್ತಿದೆ. ಆದರೆ, ಈ ನಗುವಿನ ಮುಖದ ಹಿಂದೆ ಯಾರೂ ಊಹಿಸಲಾಗದಷ್ಟು ದೊಡ್ಡ ಶೋಕವೊಂದಿದೆ. ಈಕೆಯ ಸಾಧನೆಯ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ.

ಮುಕ್ಕೋಟಿ ದೇವರು ಒಂದಾಗಿ ಬಂದರೂ ಹೆತ್ತವ್ವನ ಪಾದದ ಧೂಳಿಗೂ ಸಮವಿಲ್ಲ ಅನ್ನೋದು ಅಕ್ಷರಶಃ ಸತ್ಯ. ಅಮ್ಮ ಅಂದ್ರೆ ಬರೀ ಪದವಲ್ಲ, ಅದೊಂದು ಜೀವದ ಮಿಡಿತ, ಪ್ರತಿಯೊಬ್ಬರ ಹೃದಯದ ಬಡಿತ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆತ್ತಮ್ಮನನ್ನು ಕಳೆದುಕೊಳ್ಳುವ ಆ ಘನಘೋರ ನೋವು ಜಗತ್ತಿನಲ್ಲಿ ಯಾವ ಶತ್ರುವಿಗೂ ಬರಬಾರದು.

ದಿಶಾ ಪಾಲಿಗೆ ವಿಧಿ ಎಷ್ಟೊಂದು ಕ್ರೂರವಾಗಿತ್ತು ಅಂದರೆ, “ಎಕ್ಸಾಮ್ ಚೆನ್ನಾಗಿ ಬರಿ ಮಗಳೇ” ಅಂತ ತಲೆ ಸವರಿ, ಹರಸಿ ಕಳಿಸಿದ ಅಮ್ಮ, ಆಕೆ ಮೂರನೇ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಶಾಶ್ವತವಾಗಿ ಕಣ್ಮುಚ್ಚಿದ್ದಳು. ಪರೀಕ್ಷೆ ಮುಗಿದ ಖುಷಿಯಲ್ಲಿ ಅಮ್ಮನ ಮುಖ ನೋಡಲು ಓಡಿಬಂದ ಆ ಯುವತಿಗೆ ಮನೆಯಲ್ಲಿ ಅಮ್ಮನಿರಲಿಲ್ಲ, ಬದಲಿಗೆ ಆಕೆಯ ಮೃತದೇಹ ಹಾಗೂ ಎಂದೆಂದಿಗೂ ಮರೆಯಲಾಗದ ಕಣ್ಣೀರ ನೆನಪುಗಳಷ್ಟೇ ಅನಾಥವಾಗಿ ಬಿದ್ದಿದ್ದವು.

ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ದಿಶಾ ಬಹಳ ಹುಮ್ಮಸ್ಸಿನಿಂದ ಹಾಗೂ ಅಷ್ಟೇ ಶ್ರದ್ಧೆಯಿಂದ ತನ್ನ ಮೊದಲ ಮೂರು ಪರೀಕ್ಷೆಗಳನ್ನು ಬರೆದು ಮುಗಿಸಿದ್ದಳು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಮೂರು ಪರೀಕ್ಷೆಗಳು ಮುಗಿಯುತ್ತಿದ್ದಂತೆ ದಿಶಾ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆತ್ತ ತಾಯಿಯನ್ನು ಕಳೆದುಕೊಂಡಳು. ಅಮ್ಮನಿಲ್ಲದ ಆ ಘೋರ ಕ್ಷಣ ಆಕೆಯ ಪಾಲಿಗೆ ಅಕ್ಷರಶಃ ಸಿಡಿಲು ಬಡಿದಂತಿತ್ತು.

ತನ್ನನ್ನು ಹೆತ್ತು ಹೊತ್ತು ಬೆಳೆಸಿದ ತಾಯಿಯ ಮೃತದೇಹದ ಮುಂದೆ ನಿಂತು ರೋಧಿಸುತ್ತಿದ್ದ ಆ ಕಂದಮ್ಮನ ಕಣ್ಣೀರು ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ತಾಯಿಯ ಅಗಲಿಕೆಯ ಆ ಭೀಕರ ನೋವನ್ನು ಎದೆಗವಚಿಕೊಂಡು, ಉಕ್ಕಿ ಬರುವ ಕಣ್ಣೀರನ್ನು ತಡೆಯುತ್ತಲೇ ಆಕೆ ತನ್ನ ಉಳಿದ ಪರೀಕ್ಷೆಗಳನ್ನು ಬರೆಯಲು ಮುಂದಾದಳು. ಎದೆ ಸೀಳುವಂತಹ ನೋವಿದ್ದರೂ, ತನ್ನ ಅಮ್ಮನ ಕನಸನ್ನು ನನಸು ಮಾಡಬೇಕೆಂಬ ಆಕೆಯ ಛಲ ಮಾತ್ರ ಒಂದು ಚೂರು ಕಡಿಮೆಯಾಗಲಿಲ್ಲ.

ಫಲಿತಾಂಶ ಬಂದಾಗ ತನಗೆ 600ಕ್ಕೆ 600 ಅಂಕ ಬಂದಿದೆ ಎಂದು ತಿಳಿಯುತ್ತಿದ್ದಂತೆ ದಿಶಾ ಗಟ್ಟಿಯಾಗಿ ಕೂಗಿದಳು. “ಅಮ್ಮಾ.. ನಾನು ಮಾಡಿಬಿಟ್ಟೆ, ನಿನ್ನ ಆಸೆಯಂತೆ ನಾನು ಓದಿ ಸ್ಟೇಟ್‌ಗೆ ಫಸ್ಟ್ ಬಂದೆ” ಎಂದು ಹೇಳಿದಳು. ತನ್ನ ಗೆಲುವನ್ನು ಅಪ್ಪಿಕೊಂಡು ಸಂಭ್ರಮಿಸಲು ಇಂದು ತನ್ನ ಹೆತ್ತವ್ವನೇ ಇಲ್ಲವಲ್ಲ ಎಂಬ ನೋವು ಅವಳ ಕಣ್ಣೀನಲ್ಲಿ ಕಾಣುತ್ತಿತ್ತು.

“ನಾನು ಚೆನ್ನಾಗಿ ಓದಬೇಕು, ದೊಡ್ಡ ಸಾಧನೆ ಮಾಡಬೇಕು ಎಂದು ಅಮ್ಮ ಸದಾ ಹೇಳುತ್ತಿದ್ದಳು. ಅವಳು ಇದ್ದಾಗ ನನಗೆ ಸಿಕ್ಕಾಪಟ್ಟೆ ಸಹಾಯ ಮಾಡುತ್ತಿದ್ದಳು. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆಯ ಪ್ರೀತಿಯಿತ್ತು. ಇಂದು ಈ ರಿಸಲ್ಟ್ ನೋಡಲು ಅವಳಿದ್ದಿದ್ದರೆ ಎಷ್ಟೊಂದು ಸಂತೋಷ ಪಡುತ್ತಿದ್ದಳೋ.. ಈಗಲೂ ಮೇಲಿಂದ ನೋಡಿ ಅಮ್ಮ ಖಂಡಿತ ಸಂತೋಷ ಪಡುತ್ತಿದ್ದಾಳೆ ಅಂತ ನನಗೆ ಗೊತ್ತು” ಎಂದು ಗದ್ಗದಿತಳಾಗಿ ದಿಶಾ ನುಡಿದಿದ್ದಾಳೆ.

ಮನೆಯಲ್ಲಿ ತಾಯಿಯಿಲ್ಲದ ಶೂನ್ಯತೆ ಕಾಡುತ್ತಿದ್ದರೆ, ಇತ್ತ ಪರೀಕ್ಷಾ ಕೇಂದ್ರದಲ್ಲಿ ದಿಶಾಳ ಕಣ್ಣುಗಳಿಂದ ಅಶ್ರುಧಾರೆ ಹರಿಯುತ್ತಲೇ ಇತ್ತು. ಪ್ರತಿ ಬಾರಿ ಉತ್ತರ ಬರೆಯುವಾಗಲೂ ಅಮ್ಮನ ನೆನಪುಗಳು ಆಕೆಯನ್ನು ಕಾಡುತ್ತಿದ್ದವು. ಆದರೂ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ತನ್ನ ತಾಯಿಯ ಮೇಲಿದ್ದ ಅಪಾರ ಪ್ರೀತಿಯನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಳು. ಅಮ್ಮನ ಕನಸಿಗೆ ಎಂದಿಗೂ ದ್ರೋಹ ಬಗೆಯಬಾರದು ಎಂಬ ದೃಢ ಸಂಕಲ್ಪವೇ ಆಕೆಯನ್ನು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡಿತು.

ತಾಯಿಯ ಸಾವಿನಂತಹ ದೊಡ್ಡ ಆಘಾತ ಬಂದರೂ ದಿಶಾ ಮಾಡಿದ ಸಾಧನೆ ನಿಜವಾಗಿಯೂ ಅದ್ವಿತೀಯ. ಬೆಟ್ಟದಷ್ಟು ದುಃಖ ಇದ್ದರೂ ಗುರಿಯ ಮೇಲೆ ಗಮನ ಕಳೆದುಕೊಳ್ಳದ ಆಕೆಯ ಮನೋಬಲ ಇಂದಿನ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ.

ರಾಜ್ಯಕ್ಕೆ ಮೊದಲ ಸ್ಥಾನ ಬಂದರೂ ಅಮ್ಮನಿಲ್ಲದ ಖಾಲಿತನ ದಿಶಾಳನ್ನು ಕಾಡುತ್ತಿದೆ. ದಿಶಾಳ ಕಣ್ಣೀರನ್ನು ನೋಡಿ ಇಡೀ ಕರುನಾಡು ಕರಗಿದ್ದು, ಆಕೆಯ ಭವಿಷ್ಯ ಬಂಗಾರವಾಗಲಿ ಎಂದು ಹಾರೈಸುತ್ತಿದೆ.

Ramesh Babu

Journalist

Recent Posts

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

6 hours ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

7 hours ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

22 hours ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: 15,721 ಮೃತರ ಹೆಸರು ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…

2 days ago

ದೇವಾಲಯಗಳ ಹುಂಡಿ ಭದ್ರತೆಗೆ ಸಿಸಿಟಿವಿ ಕಣ್ಗಾವಲು- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ದೇವಾಲಯಗಳ ಹುಂಡಿ ಭದ್ರತೆ ಸೇರಿದಂತೆ ಎಣಿಕೆ ಕಾರ್ಯ,…

2 days ago