ಕಡಿತಗೊಂಡ ಸೇವಾ ಸಿಂಧು ಆನ್ ಲೈನ್ ಸೇವೆಗಳು: ಸಂಕಷ್ಟದಲ್ಲಿ CSC ಸೇವಾ ಸಿಂಧು ಆಪರೇಟರ್ಸ್…!

ಸರ್ಕಾರ ಜಾರಿಗೆ ತರುವ ಯೋಜನಾ ಸವಲತ್ತುಗಳನ್ನು ಪಡೆಯಲು ಆನ್ ಲೈನ್ ಮುಖಾಂತರ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ಸಿ ಎಸ್ ಸಿ ಸೇವಾಸಿಂಧು, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ವಿವಿಧ ಪೋರ್ಟ್ ಲ್ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಮೊದಲು ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಸೇವಾ ಸಿಂಧು ಪೋರ್ಟ್ ಲ್ ಮೂಲಕ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿತ್ತು. ಈಗ ದಿಢೀರನೆ ಸೇವಾ ಸಿಂಧು ಪೋರ್ಟ್ ಲನ್ನು ಪ್ರತ್ಯೇಕಿಸಿ ಕೇವಲ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಗೆ ನೀಡಿರುವುದು ಸೇವಾ ಸಿಂಧು ಮುಖೇನ ಅರ್ಜಿ ಸಲ್ಲಿಸುವ ಹಾಗು ಸಿ ಎಸ್ ಸಿ ಸೆಂಟರ್ ನಡೆಸುವ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ಈ ಕುರಿತು ಬಿಎಸ್ ಎನ್ ಎಲ್ ಕಚೇರಿ ಸಮೀಪವಿರುವ ಸೈಬರ್ ಸೆಂಟರ್ ಮಾಲೀಕ‌ ಹಾಗೂ ಸಿಎಸ್ ಸಿ ಸೇವಾ ಸಿಂಧು ಆಪರೇಟರ್ ರವಿಚಂದ್ರ ಮಾತನಾಡಿ, ಕಳೆದ 10 ವರ್ಷಗಳಿಂದ ಕಾಮನ್ ಸರ್ವಿಸಸ್ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದೇವೆ. ಆಧಾರ್ ತಿದ್ದುಪಡಿ, ಪಡಿತರ ತಿದ್ದುಪಡಿ, ವೋಟರ್ ಐಡಿ ತಿದ್ದುಪಡಿ, ಬ್ಯಾಂಕ್ ಅಕೌಂಟ್, ಉದ್ಯಮ್ ನೋಂದಣಿ, ಪವರ್ ಲೂಮ್ ಸಬ್ಸಿಡಿ, ವಿದ್ಯಾರ್ಥಿ ವೇತನ, ಜಿಎಸ್ ಟಿ ನೋಂದಣಿ, ಎಲ್ ಎಲ್ ಮತ್ತು ಡಿಎಲ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪೊಲೀಸ್ ವೆರಿಫಿಕೇಶನ್ ಪ್ರಮಾಣ ಪತ್ರ, ಇ ಶ್ರಮ ಕಾರ್ಡ್, ವಿದ್ಯಾರ್ಥಿಗಳ ಬಸ್ ಪಾಸ್, ವಿದ್ಯಾರ್ಥಿ ವೇತನ ಹಾಗು ಹಾಗು ಹಲವು ಸರ್ಕಾರಿ ಸೌಲಭ್ಯಗಳ ಅರ್ಜಿಗಳನ್ನು ಸೇವಸಿಂಧು ಪೋರ್ಟಲ್ ನ ಮುಖಾಂತರ ಸಲ್ಲಿಸುತ್ತಿದ್ದೆವು ಆದರೆ ಇತ್ತೀಚಿನ ಕೆಲವು ಗ್ಯಾರೆಂಟಿ ಯೋಜನೆಗಳು ಒಂದೊಂದಾಗಿ ಪ್ರತ್ಯೇಕಿಸಿ ಆ ಯೋಜನೆಗಳ ಅರ್ಜಿಗಳನ್ನು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಗೆ ನೀಡಿರುವುದು, ಸಿ ಎಸ್ ಸಿ ಸೆಂಟರ್ ಗಳನ್ನು ನಡೆಸಿ ಇಷ್ಟು ವರ್ಷಗಳಿಂದ ಜನ ಸೇವೆ ನೀಡಿ ಅದನ್ನೇ ಬದುಕಿಗೆ ಆಧಾರವಾಗಿ ನಂಬಿದ ನಮಗೆ ತುಂಬಾ ನಷ್ಟವಾಗುತ್ತಿದೆ ಎಂದರಲ್ಲದೇ ನಾವು ಸರ್ಕಾರದ ಮಾನದಂಡಗಳನ್ನು ಅನುಸರಿಸಿಯೇ ಅನ್ ಲೈನ್ ಸೇವೆಗಳನ್ನ ಸಾರ್ವಜನಿಕರಿಗೆ ನೀಡುತ್ತಿದ್ದೇವೆ ಆದರೂ ಸೇವಾ ಸಿಂಧುವಿನ ಕೆಲವು ಸೇವೆಗಳನ್ನು ಕಡಿತಗೊಳಿಸಿರುವುದರಿಂದ ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡರು.

ನಾವು ಸೈಬರ್ ನಡೆಸಿ ಜೀವನ ಮಾಡಬೇಕು, ಸೇವಾ ಸಿಂಧು ಪೋರ್ಟ್ ಲ್ ಪ್ರತ್ಯೇಕಿಸಿರುವುದರಿಂದ ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ದಯಮಾಡಿ ಕರ್ನಾಟಕ, ಬೆಂಗಳೂರು, ಗ್ರಾಮ ಒನ್ ಗೆ ನೀಡಿರುವ ಆನ್ ಲೈನ್ ಸೇವೆಗಳನ್ನ ಸೇವಾ ಸಿಂಧು ಪೋರ್ಟ್ ಲ್ ಗೂ ನೀಡಿ ಎಂದು ಒತ್ತಾಯಿಸಿದರು.

Ramesh Babu

Journalist

View Comments

  • SIR I AM CSC CENTAR MAN NAU 4 VARSHAGALIND CSC NADESUTIDDENE SEVA SHINDU PORTALLINALLI BAHALA APPLEACATION TEGEDU HAKI NAMMA HOTTEMELE BARE HAKIDANTAGIDE ADDARIND ADHIKARIGALALLI KELIKOLLUVUDENENDARE GRAMA ONE, KARNATAKA ONE GE NIDID SAVALATTIU GALANNU CSC GU KODI ENDU ADIKARIGALLI KALAKALIEND KELIKOLLUTTENE

Recent Posts

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

4 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

6 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

9 hours ago

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

23 hours ago

ಕೃಷಿ ಹೊಂಡಗಳಲ್ಲಿ ಅನಾಹುತ ತಡೆಗೆ ಜಾಗೃತಿ ಸಭೆ: ಸುರಕ್ಷತೆಗೆ ಕಟ್ಟುನಿಟ್ಟಿನ ಸೂಚನೆ

ದೊಡ್ಡಬಳ್ಳಾಪುರ: ಜೂ.13ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು…

1 day ago

0% ಭ್ರಷ್ಟಾಚಾರ: ಯಾರು ಕೂಡ ಸರ್ಕಾರಿ ಕಚೇರಿಗಳಲ್ಲಿ 10 ರೂಪಾಯಿ ಕೂಡಾ ಲಂಚ ನೀಡಬಾರದು- ಸಿಎಂ‌ ಡಿಕೆಶಿ

ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳು, ಎಸ್‌ಪಿ, ಸಿಇಒ, ಡಿಎಫ್‌ಒ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ…

1 day ago