ನಗರಸಭೆ ಪೌರಾಯುಕ್ತ ಕೆ.ಜಿ.ಶಿವಶಂಕರ್ ಎತ್ತಂಗಡಿ : ನೂತನ ಪೌರಾಯುಕ್ತರಾಗಿ ಕೆ.ಪರಮೇಶ್ ನೇಮಕ

 

ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತರಾಗಿದ್ದ ಕೆ.ಜಿ.ಶಿವಶಂಕರ್ ಅವರನ್ನು ಗೌರಿಬಿದನೂರು ನಗರಸಭೆ ಪರಿಸರ ಅಭಿಯಂತರರನ್ನಾಗಿ ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ಪೌರಾಯುಕ್ತ ಶಿವಶಂಕರ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚೆನ್ನಗಿರಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಕೆ.ಪರಮೇಶ್ ಅವರನ್ನು ದೊಡ್ಡಬಳ್ಳಾಪುರ ನೂತನ ಪೌರಾಯುಕ್ತರನ್ನಾಗಿ ನೇಮಿಸಲಾಗಿದೆ.

ಇಂದು ಒಂದೇ ದಿನ ಕರ್ನಾಟಕ ಪೌರಾಡಳಿತ ಸೇವೆಯ ವಿವಿಧ ಹುದ್ದೆಗಳ 20 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

Leave a Reply

Your email address will not be published. Required fields are marked *