ಇನ್ಸ್ಯೂರೆನ್ಸ್ ಕ್ಲೈಮ್ ಗಾಗಿ ಜ್ಯುವೆಲೆರಿ ಶಾಪ್ ಮಾಲೀಕನ ಕಳ್ಳಾಟ ಬಯಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾ ಸ್ಟೈಲ್ ನಲ್ಲಿ ಸಿಟಿ ಮಾರ್ಕೆಟ್ ಫ್ಲೈ ಓವರ್ ಬಳಿ 2.7ಕೆಜಿ ಚಿನ್ನ ಎಸ್ಕೇಪ್ ಮಾಡಿ ತಾನೇ ಖುದ್ದಾಗಿ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದ್ದ ಆಸಾಮಿ.
ಬೆಂಗಳೂರಿನ ನಗರತಪೇಟೆಯಲ್ಲಿ ಕೈಲಾಶ್ ಜ್ಯುವೆಲರಿ ಅಂಗಡಿ ಹೊಂದಿದ್ದ ರಾಜ್ ಜೈನ್. ಇನ್ಸ್ಯೂರೆನ್ಸ್ ಕ್ಲೈಮ್ ಗಾಗಿ ತನ್ನ ಶಾಪ್ ನಲ್ಲಿದ್ದ ಚಿನ್ನವನ್ನ ಹೈದರಾಬಾದ್ ಗೆ ತನ್ನ ಕೆಲಸಗಾರರ ಮೂಲಕ ಸಾಗಾಟ ಮಾಡುತ್ತಿದ್ದ. ಅಂಗಡಿ ಮಾಲೀಕ ರಾಜ್ ಜೈನ್ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಕಾಟನ್ ಪೇಟೆ ಪೊಲೀಸರು. ವಿಚಾರಣೆ ವೇಳೆ ದೂರು ನೀಡಿದ್ದ ರಾಜ್ ಜೈನ್ ಕೈವಾಡ ಇರುವುದು ಪತ್ತೆಯಾಗಿದೆ.
ಅಂಗಡಿ ಮಾಲೀಕನ ಬಂಧನ ಮಾಡಿ ವಿಚಾರಣೆ ನಡೆಸಿ, 2.7ಕೆಜಿ ಚಿನ್ನವನ್ನ ವಶಕ್ಕೆ ಪಡೆದಿರುವ ಪೊಲೀಸರು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.