ಬೇಸಿಗೆ ಬಿಸಿಲು: ನಮ್ಮ ರಾಜ್ಯ ಮತ್ತು ದೇಶ ಅಕ್ಷರಶಃ ಬೆಂಕಿಯಂತೆ ಸುಡುತ್ತಿದೆ – ಸಚಿವ ಪ್ರಿಯಾಂಕ್ ಖರ್ಗೆ 

ಇದು ಈಗ “ಬೇಸಿಗೆ ಬಿಸಿಲು” ಮಾತ್ರವಲ್ಲ; ಇದು ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಾಗಿ ರೂಪಾಂತರಗೊಳ್ಳುವ ಮುನ್ಸೂಚನೆ ನೀಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ತುರ್ತಾಗಿ ಉತ್ತಮ ಗ್ರಾಮೀಣ ಮತ್ತು ನಗರ ಹೀಟ್ ಆಕ್ಷನ್ ಪ್ಲಾನ್‌ಗಳು ಹಾಗೂ ತ್ವರಿತ ಹಸಿರೀಕರಣದ ಅಗತ್ಯವಿದೆ. ಪಂಚಾಯತ್ ರಾಜ್ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಈ ಯೋಜನೆಯನ್ನು ಜಾರಿಗೆ ತರಲು ಸೂಕ್ತ ನೀತಿ ಚೌಕಟ್ಟನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಲಿವೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಆಡಳಿತ, ಸಮುದಾಯ ಭಾಗವಹಿಸುವಿಕೆ ಮತ್ತು ಪರಿಸರ ಮರುಸ್ಥಾಪನೆಯನ್ನು ಒಟ್ಟುಗೂಡಿಸುವ ಪ್ರಾಯೋಗಿಕ, ಸುಸ್ಥಿರ ಹಾಗೂ ಇನ್ನಷ್ಟು ವಿಸ್ತರಿಸಬಹುದಾದ ಮಾದರಿಯನ್ನು ರಚಿಸುವುದು ಇದರ ಉದ್ದೇಶವಾಗಿರುತ್ತದೆ. ಈ ಧಗೆ ಕೇವಲ ಹವಾಮಾನ ಸುದ್ದಿಯಷ್ಟೇ ಅಲ್ಲ. ಇದು ಒಂದು ಎಚ್ಚರಿಕೆ ಎಂದು ಹೇಳಿದ್ದಾರೆ..

Leave a Reply

Your email address will not be published. Required fields are marked *

error: Content is protected !!