ಕುಡಿಯಲು ನೀರು ಕೇಳುವ ನೆಪದಲ್ಲಿ ಸರಗಳ್ಳತನ ಪ್ರಕರಣ- ಮೂವರು ಆರೋಪಿಗಳ ಬಂಧನ, 7,11,000 ರೂ. ಮೌಲ್ಯದ 59.3 ಗ್ರಾಂ ಚಿನ್ನದ ಒಡವೆ ವಶ

2025ರ ಸೆ.25 ರಂದು ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂನಮುದ್ದನಹಳ್ಳಿ  ಗ್ರಾಮದಲ್ಲಿ, ಮನೆಯಲ್ಲಿದ್ದ  ವೃದ್ದೆಯ ಬಳಿ ಬಂದು ಕುಡಿಯಲು ನೀರು ಕೇಳುವ ನೆಪದಲ್ಲಿ , ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದರು…

ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಮಾಹಿತಿ ಸಂಗ್ರಹಿಸಿ, ಸರಗಳ್ಳತನದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳು ಮಾಯಗಾನಹಳ್ಳಿ ಗ್ರಾಮದಲ್ಲಿ ನಡೆದಿದ್ದ  ಸರಗಳ್ಳತನ ಪ್ರಕರಣವಾದ ಠಾಣಾ ಮೊ.ಸಂ:116/2025 ಕಲಂ: 309(4) ರೀತ್ಯಾ ಪ್ರಕರಣದಲ್ಲಿಯು ಸಹ ಭಾಗಿಯಾಗಿರುವುದಾಗಿ ವಿಚಾರಣಾ ಸಮಯದಲ್ಲಿ ತಿಳಿದುಬಂದಿರುತ್ತದೆ.

ಸದರಿ ಎರಡು ಪ್ರಕರಣಗಳಲ್ಲಿ ಒಟ್ಟು ಸುಮಾರು 7,11,000/- ರೂ ಮೌಲ್ಯದ 59.300 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಅಮಾನತು ಪಡಿಸಿಕೊಂಡು, ಒಟ್ಟು 2  ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯ ಅಧಿಕಾರಿಗಳಾದ, ಟಿ. ಮುರಳಿ, ಮಹಮದ್‌ ಅಲ್ಲಾವುದೀನ್‌, ನರಸಿಂಹ ಮೂರ್ತಿ, ಸಿದ್ದರಾಜು ಮತ್ತು ಸಿಬ್ಬಂದಿ ಮಹೇಶ್‌, ಲೋಕೇಶ್‌, ಸುಜಾತ, ಸಮೀವುಲ್ಲ, ಹೆಚ್.‌ ಎನ್‌ ರವಿ, ರವಿಚಂದ್ರ, ಆಸೀಫ್‌, ರಮೇಶ್‌, ನರೇಶ್‌, ಯಾಸಿನ್‌ ಸಾಬ್‌ ನದಾಪ್‌, ಕುಮಾರ್‌ & ಶಾರದಮ್ಮ ತಂಡವು ಯಶಸ್ವಿಯಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!