ಖಾಸಗಿ ವಾಹಿನಿ ಪ್ರತಿಷ್ಠಿತ ಕರ್ನಾಟಕ ಐಡೆಲ್ -2025 ಪ್ರಶಸ್ತಿ ಭಾಜನರಾದ ಶ್ರೀ ತ್ಯಾಗರಾಜ ಸ್ವಾಮೀಜಿರವರೆಗೆ ಅಭಿನಂದನೆ…

ದೇವನಹಳ್ಳಿ :ಖಾಸಗಿ ವಾಹಿನಿಯ ಪ್ರತಿಷ್ಠಿತ ಕರ್ನಾಟಕ ಐಡೆಲ್ -2025 ಪ್ರಶಸ್ತಿ ಭಾಜನರಾದ ಶ್ರೀ ತ್ಯಾಗರಾಜ ಸ್ವಾಮೀಜಿರವರೆಗೆ ಸಮಾಜಸೇವಕರಾದ ಎಂ .ಪಿ ಗಿರೀಶ್ ಮತ್ತು ಸಂಗಡಿಗರ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಈ ವೇಳೆಯಲ್ಲಿ ಸಮಾಜ ಸೇವಕರಾದ ಎಂಪಿ ಗಿರೀಶ್ ಮಾತನಾಡಿ ಚಿಕ್ಕಹೊಸಳ್ಳಿಯಲ್ಲಿ ಗ್ರಾಮದ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಆಧ್ಯಾತ್ಮಿಕ ಚಿಂತಕರಾಗಿದ್ದು, ಯಲಿಯೂರು ಗ್ರಾಮದ  ನವಚೇತನ ಆಶ್ರಮದ ಸೇವಾಕರ್ತರಾಗಿದ್ದಾರೆ, ಆಶ್ರಮದಲ್ಲಿ  80ಜನ ಬಡ ಮತ್ತು ಅನಾಥ ಮಕ್ಕಳ ಪೋಷಣೆ ಮಾಡುತ್ತಿದ್ದು, ಗೋಶಾಲೆಯನ್ನು ಸಹ ನಡೆಸುತ್ತಿದ್ದಾರೆ ಅವರ ಇಂತಹ ಹಲವಾರು ಸಾಮಾಜಿಕ ಕಾರ್ಯಗಳನ್ನು ಗುರುತಿಸಿ  ಖಾಸಗಿ ವಾಹಿನಿ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮನು ಸಿದ್ದಾರ್ಥ ಗುರೂಜಿ ಮತ್ತು ದೀಪಾ.ವಿ, ಎಂ.ಪಿ.ಗಿರೀಶ್, ಬೂದಿಗೆರೆ ಗ್ರಾಮ ಪಂಚಾಯತಿ ಸದಸ್ಯರು ವೆಂಕಟೇಶ್.ಸಮಾಜ ಸೇವಕರು ಚಂದ್ರು ಬೂದಿಗೆರೆ   . ಕರ್ನಾಟಕ ರಕ್ಷಣಾ ವೇದಿಕೆ ಶಿಡ್ಲಘಟ್ಟ ಅಧ್ಯಕ್ಷರು ಮುನಿರಾಜ್( ಕುಟ್ಟಿ )  ಯುವ ಮುಖಂಡರ  ದೇವನಹಳ್ಳಿ.ಶಿವಕುಮಾರ್.ಪೃಥ್ವಿ ಧನಂಜಯ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!