ಪ್ರಥಮ್ ಜೀವ ಬೆದರಿಕೆ ಪ್ರಕರಣ: ವಿಚಾರಣೆ ಬಳಿಕ ರಕ್ಷಕ್ ಬುಲೆಟ್ ಫಸ್ಟ್ ರಿಯಾಕ್ಟ್

ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನ್ನು ರಕ್ಷಕ್ ಬುಲೆಟ್ ಗೆ ನೀಡಲಾಗುತ್ತು. ಆದ್ದರಿಂದ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿದ ರಕ್ಷಕ್ ಬುಲೆಟ್, ಪೊಲೀಸರ ವಿಚಾರಣೆಗೆ ಸಹಕರಿಸಿದರು. ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಕ್ ಬುಲೆಟ್, ಘಟನೆ‌ ಕುರಿತು ಈಗಾಗಲೇ ಪೋಲೀಸರಿಗೆ ಮಾಹಿತಿ ನೀಡಿದ್ದೇನೆ. ಘಟನೆ ನಡೆದ ದಿನ ಯಶಸ್ವಿನಿ, ದಾಸ  ಸೇರಿ ಕೆಲವೇ ಕೆಲವು ಜನ ಮಾತ್ರ ಇದ್ದೆವು. ಅಲ್ಲಿ ನಡೆದ ಘಟನೆ ಕುರಿತು ಈಗಾಗಲೇ ಮಾತನಾಡಿದ್ದೇನೆ. ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಿದ್ದೇನೆ. ನಾವು ಕಲಾವಿದರ ಮನೆಯಿಂದ ಬಂದವರು. ಗೂಂಡಾಗಿರಿ ಮಾಡೋಕೆ ಬಂದಿಲ್ಲ. ನಾವು ಇನ್ನೂ ಬೆಳೆಯಬೇಕು ಎಂದರು.

ಬೇರೆಯವರ ಬಗ್ಗೆ ಚೀಪಾಗಿ ಮಾತಾಡೋದು ನನ್ನ ಕ್ಯಾರೆಕ್ಟರ್ ಅಲ್ಲ. ಘಟನೆ ಬಗ್ಗೆ ಎಷ್ಟೇ ಮಾತನಾಡಿದ್ರು ಡಿಸ್ಟಬೆನ್ಸ್ ಆಗ್ತಿರ್ತೀವಿ ಎಂದು ಹೇಳಿದರು.

ನಾವಿಲ್ಲಿ ಆ್ಯಕ್ಟ್ ಮಾಡೋಕೆ ಬಂದಿದ್ದೇವೆ.. ನಮ್ಮ ತಂದೆ ದೊಡ್ಡ ಕಲಾವಿದರು. ನಾವಿಲ್ಲಿ ಧಮ್ಕಿ ಹಾಕೋಕೆ.. ರೌಡಿಸಂ ಮಾಡೋಕೆ… ಸುಫಾರಿ ಕೊಡೋಕೆ ಬಂದಿಲ್ಲ. ಆವತ್ತಿಂದ ಇವತ್ತಿನವರೆಗೂ ನನ್ನದೊಂದು ಬ್ಲಾಕ್ ಮಾರ್ಕಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!