
ಹೆದ್ದಾರಿಯಲ್ಲಿ ಕಾರು ಚಾಲಕನಿಂದ ಹಾಡಹಗಲೇ ಹಿಟ್ ಅಂಡ್ ರನ್ ಆಗಿದೆ. ಹಿಟ್ ಅಂಡ್ ರನ್ ಗೆ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಹೆದ್ದಾರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದ ಘಟನೆ ನಡೆದಿದೆ.
ಹೊಸಕೋಟೆ ಯಿಂದ ದಾಬಸ್ ಪೇಟೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಘಟನೆ ನಡೆದಿದೆ.

ದೇವನಹಳ್ಳಿ ಕಡೆಯಿಂದ ದೊಡ್ಡಬಳ್ಳಾಪುರ ಕಡೆಗೆ ಬುಲೆಟ್ ಬೈಕ್ ನಲ್ಲಿ ಇಬ್ಬರು ಯುವಕರು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರು ನೋಡ ನೋಡ್ತಿದ್ದಂತೆ ಬುಲೆಟ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ನಂತರ ಕಾರು ನಿಲ್ಲಿಸದೇ 100 ಮೀಟರ್ ಗೂ ಅಧಿಕ ದೂರ ಬೈಕ್ ಸಮೇತ ತಳ್ಳಿಕೊಂಡು ಕಾರು ಚಾಲಕ ಹೋಗಿದ್ದಾನೆ.

ಈ ವೇಳೆ ಬೈಕ್ ಸೈಡಿಗೆ ಹೋಗ್ತಿದ್ದಂತೆ ಕಾರು ನಿಲ್ಲಿಸದೆ ವಾಹನ ಸಮೇತ ಚಾಲಕ ಎಸ್ಕೇಪ್ ಆಗಿದ್ದಾನೆ.
ಹೆಲ್ಮೆಟ್ ಹಾಕಿದ್ರು ಅಪಘಾತದ ರಭಸಕ್ಕೆ ಬೈಕ್ ನಲ್ಲಿದ್ದ ಆಂಧ್ರ ಮೂಲದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ಒನ್ ವೇ ನಲ್ಲಿ ಬರ್ತಿದ್ದ ಬೈಕ್ ಸವಾರ ಜಸ್ಟ್ ಮಿಸ್ ಆಗಿದ್ದಾನೆ.

ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.