ಹೊಸಕೋಟೆ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮಹಿಳೆ ಧಾರುಣ‌ ಸಾವು

ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಗುಟ್ಟಹಳ್ಳಿ ಗೇಟ್ ಬಳಿ ನಡೆದಿದೆ…

ಪೂಜೆನ ಅಗ್ರಹಾರ ಗ್ರಾಮದ ಅನಿತಾ (28) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.

ಲಾರಿ ಹಾಗೂ ದ್ವಿಚಕ್ರ  ವಾಹನದ ನಡುವೆ ಅಪಘಾತ ಸಂಭವಿಸಿದೆ.‌ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ರಸ್ತೆಗೆ ಉರುಳಿ ಬಿದ್ದ‌ ಪರಿಣಾಮ ಮಹಿಳೆ ತಲೆ ಮೇಲೆ ಲಾರಿ ಚಕ್ರ ಹರಿದಿದೆ…

ತೀವ್ರ ರಕ್ತ ಸ್ರಾವದಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ತಿರುಮ ಶೆಟ್ಟಹಳ್ಳಿ ಪೊಲೀಸರು ಭೇಟಿ ನೀಡಿ  ಪ್ರಕರಣ ದಾಖಲು‌ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *