ಇತ್ತೀಚಿನ ದಿನಗಳಲ್ಲಿ ಎಟಿಎಂ ಕಳ್ಳತನ, ಬ್ಯಾಂಕ್ ಫ್ರಾಡ್, ಸೈಬರ್ ಸೆಕ್ಯೂರಿಟಿ ಮತ್ತು ಬ್ಯಾಂಕ್ ಕಳ್ಳತನ ಸೇರಿದಂತೆ ಇನ್ನಿತರ ಹಣದ ವಿಚಾರಕ್ಕೆ ಹೆಚ್ಚು ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಈ ಹಿನ್ನೆಲೆ ನಗರದ ನಾಗರಿಕರು ಈ ಕುರಿತು ಹೇಗೆ ಎಚ್ಚರದಿಂದ ಇರಬೇಕು ಎಂಬುದರ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಅವರ ನೇತೃತ್ವದಲ್ಲಿ ಅರಿವು ಮೂಡಿಸಲಾಯಿತು.
ಇಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ, ಸೌಂದರ್ಯ ಮಹಲ್ ವೃತ್ತದಲ್ಲಿ ಬ್ಯಾಂಕ್ ಮತ್ತು ಎಟಿಎಂಗಳಿಗೆ ಬರುವ ಹಿರಿಯ ನಾಗರೀಕರಿಗೆ ಮತ್ತು ಜನಸಾಮಾನ್ಯರಿಗೆ ಹೆಚ್ಚುತ್ತಿರುವ ಅಪರಾಧಗಳನ್ನು ಕಡಿವಾಣ ಹಾಕಲು ಜಾಗ್ರತೆಯಿಂದ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲಾಯಿತು.
ಅದೇರೀತಿ ಇತ್ತೀಚೆಗೆ ಬೀದರ್ ನಲ್ಲಿ ಎಟಿಎಂ ತುಂಬುವ ವಾಹನವನ್ನು ಲೂಟಿ ಹಾಗೂ ಮಂಗಳೂರಿನಲ್ಲಿ ಬ್ಯಾಂಕಿನಲ್ಲಿದ್ದ ಹಣವನ್ನೇ ಡಕಾಯಿತಿ ಮಾಡಲಾಗಿತ್ತು. ಈ ಹಿನ್ನೆಲೆ ಬ್ಯಾಂಕ್ ನ ದರೋಡೆ ಪ್ರಕರಣಗಳು ಮರುಕಳಿಸದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಗರದಲ್ಲಿರುವ ಎಲ್ಲಾ ಬ್ಯಾಂಕುಗಳ ಮ್ಯಾನೇಜರ್ ಗಳು ಮತ್ತು ಎಟಿಎಂ ಗಳಿಗೆ ಹಣ ತುಂಬುವ ಸಿಎಂಎಸ್ ನವರೊಂದಿಗೆ ಚರ್ಚೆ ಮಾಡಲಾಯಿತು.