ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಎಣಿಕೆ: ಹುಂಡಿಯಲ್ಲಿ ಒಟ್ಟು 66,83,320 ರೂ., 2ಕೆ.ಜಿ 280 ಗ್ರಾಂ ಬೆಳ್ಳಿ, 2 ಗ್ರಾಂ 700ಮಿಲಿ ಚಿನ್ನ ಸಂಗ್ರಹ

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಂದು ಹುಂಡಿ ಎಣಿಕೆ ಮಾಡಲಾಯಿತು.

ದೇವಾಲಯದ ಹುಂಡಿಯಲ್ಲಿ ಒಟ್ಟು 66,83,320 ರೂ., 2ಕೆ.ಜಿ 280 ಗ್ರಾಂ ಬೆಳ್ಳಿ, 2 ಗ್ರಾಂ 700ಮಿಲಿ ಚಿನ್ನ ಸಂಗ್ರಹವಾಗಿದೆ ಎನ್ನಲಾಗಿದೆ.

ಹುಂಡಿ ಎಣಿಕೆ ಕಾರ್ಯಕ್ರಮದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ ಮುಜರಾಯಿ ಇಲಾಖೆ ತಹಸಿಲ್ದಾರ್ ಜೆ‌.ಜೆ.ಹೇಮಾವತಿ, ಪ್ರಧಾನ ಅರ್ಚಕ ಆರ್.ಸುಬ್ರಹ್ಮಣ್ಯ, ಸಿಬ್ಬಂದಿ ನಂಜಪ್ಪ, ಕೆನರಾ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು

Leave a Reply

Your email address will not be published. Required fields are marked *