ಚಿನ್ನಾಭರಣ ಕಳವು ನಡೆಸಿದ ಚೆಸ್ಕಾಂ ಲೈನ್ ಮ್ಯಾನ್ ಬಂಧನ

ಶನಿವಾರ ಸಂತೆ ವ್ಯಾಪ್ತಿಯ ಗೌಡಳ್ಳಿ ಗ್ರಾಮದಲ್ಲಿ ನಡೆದ ಚಿನ್ನಾಭರಣಗಳ ಕಳವು ಪ್ರಕರಣ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಶನಿವಾರ ಸಂತೆಯ ಚೆಸ್ಕಾಂ ನ ಲೈನ್ ಮ್ಯಾನ್ ಹೊಳೆನರಸೀಪುರ ಮೂಲದ ಸಂದೀಪ್ ಆರ್(27 ) ಎಂಬುವನಿಂದ 27 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಜುಲೈ 28ರಂದು ಗೌಡಳ್ಳಿ ಗ್ರಾಮದ ನಿವಾಸಿ ಅಣ್ಣಯ್ಯ ಮೇಲಿದ್ದ ಸಂದರ್ಭ ರಾತ್ರಿ 8:30 ಸಮಯದಲ್ಲಿ ಅಪರಿಚಿತ ವ್ಯಕ್ತಿ ಒಬ್ಬ ನುಗ್ಗಿ ಅಣ್ಣಯ್ಯ ಅವರು ಧರಿಸಿದ್ದ ಮಂಕಿ ಕ್ಯಾಪ್ ಅನ್ನು ಕಣ್ಮುಚ್ಚುವಂತೆ ಎಳೆದು ಕುತ್ತಿಗೆಯಲ್ಲಿದ್ದ 27 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿ ಆಗಿರುವ ಕುರಿತು ಶನಿವಾರ ಸಂತೆ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ದೂರು ದಾಖಲೆ ಮಾಡಿಕೊಂಡು ಸೋಮವಾರಪೇಟೆ ತಾಲೂಕು ಡಿ ವೈ ಎಸ್ ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಪ್ರೀತಮ್ ಡಿ ಶ್ರೇಯಕ್ಕರ್ ಹಾಗೂ ಠಾಣಾಧಿಕಾರಿ ಗೋವಿಂದ್ ರಾಜು ಹಾಗೂ ಸಿಬ್ಬಂದಿ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಶೀಘ್ರದಲ್ಲಿ ಕಳ್ಳನನ್ನು ಬಂಧಿಸಿದ್ದನ್ನು ಶನಿವಾರ ಸಂತೆಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಶ್ಲಾಘಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *