ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಕುಮಾರ ಷಷ್ಠಿ ಸಂಭ್ರಮ

ಇಂದು ನಾಡಿನೆಲ್ಲೆಡೆ ಶುಕ್ಲ ಶುದ್ಧ ಕುಮಾರ ಷಷ್ಠಿಯ ಸಂಭ್ರಮ ಮನೆ ಮಾಡಿದ್ದು, ಮುಂಜಾನೆಯಿಂದಲೆ ದೇವಸ್ಥಾನಗಳತ್ತ ಭಕ್ತರು ಹೋಗಿ ಪೂಜೆ ಸಲ್ಲಿಸಿದ್ದಾರೆ.

ಇತ್ತ ನಾಗಾರಾಧನೆಗೆ ಸುಪ್ರಸಿದ್ಧವಾಗಿರುವ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಕುಮಾರ ಷಷ್ಠಿ ಹಿನ್ನೆಲೆ ಭಕ್ತಗಣ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದು ಪುನೀತರಾದರು.

ವಿಶೇಷವಾಗಿ ಅಲಂಕಾರಗೊಂಡಿರೋ ನರಸಿಂಹಸ್ವಾಮಿ ಸಮೇತ ಸುಬ್ರಹ್ಮಣ್ಯ ಸ್ವಾಮಿಗೆ ಬೆಳಗ್ಗೆಯೇ ಅಭಿಷೇಕ ನೇರವೇರಿದ್ದು, ದೇವರ ದರ್ಶನ ಪಡೆದ ಭಕ್ತರು ದೇವಾಲಯ ಪಕ್ಕದ ನಾಗರ ಕಲ್ಲು ಹಾಗೂ ಹುತ್ತಗಳಿಗೆ ಹಾಲೇರಿದು ತಮ್ಮ ಇಷ್ಟಾರ್ಥಗಳನ್ನ ನೆನೆದಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *