ಜ.14ರಂದು 220/66/11KV KIADB ಉಪ ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಬೆವಿಕಂ ದೊಡ್ಡಬಳ್ಳಾಪುರ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಕಬ್ಬಿಣದ ಕಂಬಗಳನ್ನ ಬದಲಾಯಿಸುವ ಕಾಮಗಾರಿಯನ್ನ ಕೈಗೊಳ್ಳುವುದರಿಂದ KIADB ಕೈಗಾರಿಕಾ ಪ್ರದೇಶ, ವೀರಾಪುರ, ತಿಪ್ಪಾಪುರ, ದೊಡ್ಡಬಳ್ಳಾಪುರ ನಗರದ ಭುವನೇಶ್ವರಿ ನಗರ, ತೇರಿನ ಬೀದಿ, ರಂಗಪ್ಪ ಸರ್ಕಲ್, ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ರಸ್ತೆ, ಸಂಜಯನಗರ, ಚೈತನ್ಯ ನಗರ, ಕೆಸಿಪಿ ಸರ್ಕಲ್, ವಿದ್ಯಾನಗರ, ವೀರಭದ್ರನಪಾಳ್ಯ, ತೂಬಗೆರೆಪೇಟೆ, ಗಾಂಧಿನಗರ, ಕೆರೆ ಬಾಗಿಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗುವುದರಿಂದ ಬೆಸ್ಕಾಂ ಗ್ರಾಹಕರು ಸಹಕರಿಸಬೇಕೆಂದು ಬೆವಿಕಂ ನಗರ ಉಪ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.