ಡಾಬಾ ಬಳಿ ಫೋಟೋ ಶೂಟ್ ವೇಳೆ ಕಿಡಿಗೇಡಿಗಳಿಂದ ಕಿರಿಕ್: ಕಿರಿಕ್ ಕೊಲೆಯಲ್ಲಿ ಅಂತ್ಯ

ತಾಲೂಕಿನ ಕೂಗೇನಹಳ್ಳಿ ಸಮೀಪದ ಖಾಸಗಿ ಡಾಬಾ ಬಳಿ ತನ್ನ ಪಾಡಿಗೆ ತಾನು ಫೋಟೋ ಶೂಟ್ ಮಾಡುವ ವೇಳೆ ಯುವಕನೊಂದಿಗೆ ಕಿರಿಕ್ ತೆಗೆದ ಕಿಡಿಗೇಡಿಗಳು, ಈ ಕಿರಿಕ್ ತಾರಕಕ್ಕೇರಿ ಕೊಲೆಯಲ್ಲಿ ಸಮಾಪ್ತಿಗೊಂಡಿದೆ.

ನಗರದ ಕಚೇರಿಪಾಳ್ಯದ ನಿವಾಸಿ ಸೂರ್ಯ(22), ಕೊಲೆಗೀಡಾದ ಯುವಕ.

ದೀಪಾವಳಿ ವಿಶೇಷ, ರಾಮೇಶ್ವರ ಬಳಿಯ ಖಾಸಗಿ ಡಾಬದ ಮುಂಭಾಗ ಅಲಂಕರಿಸಲಾಗಿದ್ದ ಸೀನರಿ ಬಳಿ ಮೃತ ಸೂರ್ಯ ಜೊತೆ ತೆರಳಿದ್ದ ನಾಲ್ವರು ಯುವಕರು ನಡೆಸುತ್ತಿದ್ದ ಫೋಟೋ ಶೂಟ್ ಮಾಡಿಕೊಳ್ಳುತ್ತಿರುತ್ತಾರೆ. ಅಲ್ಲಿಗೆ ಬಂದ ಅಪರಿಚಿತ ಗುಂಪೊಂದು ನಮ್ಮದು ಫೋಟೋ ತೆಗೆಯುವಂತೆ ಸುಖಾಸುಮ್ಮನೆ ಕಿರಿಕ್ ತೆಗೆದಿದ್ದಾರೆ.

ಈ ವೇಳೆ ಫೋಟೋ ಯುವಕರು ತೆಗೆಯುತ್ತಾರೆ. ಅಲ್ಲಿಗೆ ಸುಮ್ಮನಾಗದ ಕಿರಿಕ್ ಗುಂಪು ಯುವಕರಿಂದ ಕ್ಯಾಮೆರಾ ಕಬಳಿಸಿ ಹಲ್ಲೆ ಮಾಡಿದ್ದಲ್ಲದೆ, ಸೂರ್ಯ ಎದೆಯ ಭಾಗಕ್ಕೆ ಕೀ ಚೈನ್ ನಿಂದ ಚುಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಲವಾದ ಪೆಟ್ಟು ಬಿದ್ದಿದ್ದರಿಂದ ಸೂರ್ಯ ಅಲ್ಲೇ ಕುಸಿದು ನಿತ್ರಾಣನಾಗಿದ್ದರಿಂದ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ. ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಸಾವನ್ನಪ್ಪುತ್ತಾನೆ ಎಂದು ತಿಳಿದು ಬಂದಿದೆ. ಆಸ್ಪತ್ರೆ ಬಳಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *