ಹೈಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಅಧಿಕಾರಿಗಳಿಂದ ಖಾತೆ ಬದಲಾವಣೆ: ಭೂಗಳ್ಳರ ಕುತಂತ್ರಕ್ಕೆ ಅನ್ಯೋನ್ಯವಾಗಿದ್ದ ಎರಡು ಕುಟುಂಬಗಳ ನಡುವೆ ಕಲಹ

ಯಲಹಂಕ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೋಟಿ ಕೋಟಿ ಬೆಲೆ ಬಾಳುವ ಜಮೀನು, ಇಂತಹ ಜಮೀನಿನ ಮೇಲೆ ಭೂಗಳ್ಳರ ವಕ್ರದೃಷ್ಟಿ ಬಿದ್ದಿದೆ, ಕೋರ್ಟ್ ನಲ್ಲಿ ದಾಯಾದಿಗಳ ಭಾಗಾಂಶದ ಬಗ್ಗೆ ಕೇಸ್ ನಡೆಯುತ್ತಿದ್ದರೂ, ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ನ ತಡೆಯಾಜ್ಞೆ ಆದೇಶ ಇದ್ದರೂ, ಆದೇಶ ಉಲ್ಲಂಘನೆ ಮಾಡಿ ಬೇರೆಯವರಿಗೆ ಖಾತೆ ಮಾಡಿರೋ ಯಲಹಂಕ ಕಂದಾಯ ಇಲಾಖೆಯ ಅಧಿಕಾರಿಗಳು.

ಯಲಹಂಕ ತಾಲೂಕು ಜಾಲ ಹೋಬಳಿಯ ಕಾಡಯರಪ್ಪನಹಳ್ಳಿಯ ನಿವಾಸಿ ಕೆ.ಗೋವಿಂದರಾಜು ಪೂರ್ವಜರಿಂದ ಬಂದ ಜಮೀನು ಉಳಿಸಿಕೊಳ್ಳಲು ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ, ಇವರ ಮೂವರು ತಾತಂದಿರು ಒಟ್ಟಿಗೆ 1953ರಲ್ಲಿ ಪಕ್ಕದ ಹುಣಸೂರು ಗ್ರಾಮದಲ್ಲಿ ಜಮೀನು ಖರೀದಿ ಮಾಡಿದ್ದರು, ತಾತನ ನಂತರ ಜಮೀನುಗಳು ಗೋವಿಂದರಾಜುರವರ ದೊಡ್ಡಪ್ಪನವರಾದ ಮುನಿವೆಂಕಟ್ಟನವರ ಹೆಸರಿಗೆ ಖಾತೆಯಾಗಿರುತ್ತೆ, ಇದಕ್ಕೆ ಕುಟುಂಬದವರ ಸಮ್ಮತಿ ಇದ್ದು ಹೊಂದಾಣಿಕೆಯಿಂದ ಜಮೀನುಗಳಲ್ಲಿ ಕೃಷಿ ಮಾಡುತ್ತಿರುತ್ತಾರೆ, ಮುನಿವೆಂಕಟಪ್ಪನವರ ನಿಧನದ ನಂತರ ಅವರ ಇಬ್ಬರು ಪತ್ನಿಯರಾದ ಲಕ್ಷಮ್ಮ ಮತ್ತು ನಾಗಲಕ್ಷಮ್ಮನವರಿಗೆ ಹೆಸರುಗಳಿಗೆ ಜಂಟಿ ಖಾತೆ ಮಾಡಲಾಗುತ್ತದೆ. ಸರ್ವೆ ನಂಬರ್ 57ರ 2 ಎಕರೆ 18 ಗುಂಟೆ ಜಾಗದಲ್ಲಿ ಲಕ್ಷಮ್ಮ ಮತ್ತು ನಾಗಲಕ್ಷಮ್ಮ ಸ್ವಾಧೀನದಲ್ಲಿದ್ದು, ಈ ಜಮೀನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದರಿಂದ, 2006ರಲ್ಲಿ ಪರಿಹಾರವಾಗಿ 50 ಲಕ್ಷವನ್ನ ಪಡೆದು ಕೊಂಡಿದ್ದರು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಗೋವಿಂದರಾಜು ಸದ್ಯ ತಮ್ಮ ತಂದೆ ಕೃಷ್ಣಪ್ಪ ಸಾಗುವಳಿ ಮಾಡುತ್ತಿದ್ದ ಸರ್ವೆ ನಂಬರ್ 95ರ 2 ಎಕರೆ 36 ಗುಂಟೆ ಜಾಗದಲ್ಲಿ ಕೃಷಿ ಮಾಡುತಿದ್ದಾರೆ, ಆದರೆ ಈ ಜಾಗದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಸಾತನೂರು ದಾನೇಗೌಡನ ಕಣ್ಣು ಬಿದ್ದಿದೆ, ಇದೇ ದಾನೇನೇಗೌಡ ಅನಕ್ಷರಸ್ಥರು ಮತ್ತು ಕೋರ್ಟ್ ಕಚೇರಿಯ ತಿಳುವಳಿಕೆ ಇಲ್ಲದ ಲಕ್ಷಮ್ಮ ಮತ್ತು ನಾಗಲಕ್ಷಮ್ಮನವರ ತಲೆಕೆಡೆಸಿ ಈ ಜಾಗವನ್ನ ಆನಂದ ಎಂಬುವರ ಹೆಸರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ, ಜಮೀನು ಮಾರಾಟದ ಹಣವನ್ನು ಲಕ್ಷಮ್ಮ ಮತ್ತು ನಾಗಲಕ್ಷಮ್ಮರಿಗೆ ಕೊಟ್ಟಿಲ್ಲ ಎಂದು ಗೋವಿಂದರಾಜುರವರ ಆರೋಪವಾಗಿದೆ.

ಗೋವಿಂದರಾಜುವರ ಪೂರ್ವಜನ ಜಮೀನುಗಳ ಭಾಗಾಂಶಕ್ಕಾಗಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಮತ್ತು ಗೋವಿಂದರಾಜು ತಾವು ಸ್ವಾಧೀನದಲ್ಲಿ ಜಮೀನು ನೋಂದಣಿ ಮಾಡದಂತೆ ಚಿಕ್ಕಜಾಲದ ಸಬ್ ರಿಜಿಸ್ಟರ್ ಕಛೇರಿಗೆ ದೂರು ನೀಡಿದ್ದಾರೆ, ಆದರೂ ಸಬ್ ರಿಜಿಸ್ಟರ್ ಸ್ವರ್ಣಲತಾ ನೋಂದಣಿ ಮಾಡಿದ್ದಾರೆ, ಇದರ ಜೊತೆಗೆ ಹೈಕೋರ್ಟ್ ನಲ್ಲಿ ಖಾತೆ ಬದಲಾವಣೆ ಮಾಡದಂತೆ ಕೇಸ್ ಹಾಕಿದ್ದರು, ಹೈಕೋರ್ಟ್ ಜುಲೈ 31ರಂದು ಯಥಾಸ್ಥಿತಿ ಕಾಪಾಡುವಂತೆ ತಡೆಯಾಜ್ಞೆ ಆದೇಶ ನೀಡಿತ್ತು.

ತಡೆಯಾಜ್ಞೆಯ ಆದೇಶವನ್ನ ಕಂದಾಯ ಅಧಿಕಾರಿಗಳಿಗೆ ತಲುಪಿಸಿದ್ದಾರೆ ಗೋವಿಂದರಾಜು, ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಕಂದಾಯ ಇಲಾಖೆಯ ಅಧಿಕಾರಿಗಳಾದ ಯಲಹಂಕದ ವಿಶೇಷ ತಹಶೀಲ್ದಾರ್ ಶಿವಕುಮಾರ್, ಶಿರಸ್ತೇದಾರರಾದ ರಾಜು, ರೆವಿನ್ಯೂ ಇನ್ಸ್ ಪೆಕ್ಟರ್ ಪ್ರಕಾಶ್ ಸೇರಿಕೊಂಡು ಆಗಸ್ಟ್ 7ರಂದು ಜಮೀನನ್ನು ಆನಂದ ಎಂಬುವರ ಹೆಸರಿಗೆ ಖಾತೆ ಮಾಡುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿರುವ ಬಗ್ಗೆ ಗೋವಿಂದರಾಜು ಆರೋಪ ಮಾಡಿದ್ದಾರೆ.

Ramesh Babu

Journalist

Recent Posts

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

4 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

18 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

19 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

20 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

20 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

1 day ago