ಹೈಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಅಧಿಕಾರಿಗಳಿಂದ ಖಾತೆ ಬದಲಾವಣೆ: ಭೂಗಳ್ಳರ ಕುತಂತ್ರಕ್ಕೆ ಅನ್ಯೋನ್ಯವಾಗಿದ್ದ ಎರಡು ಕುಟುಂಬಗಳ ನಡುವೆ ಕಲಹ

ಯಲಹಂಕ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೋಟಿ ಕೋಟಿ ಬೆಲೆ ಬಾಳುವ ಜಮೀನು, ಇಂತಹ ಜಮೀನಿನ ಮೇಲೆ ಭೂಗಳ್ಳರ ವಕ್ರದೃಷ್ಟಿ ಬಿದ್ದಿದೆ, ಕೋರ್ಟ್ ನಲ್ಲಿ ದಾಯಾದಿಗಳ ಭಾಗಾಂಶದ ಬಗ್ಗೆ ಕೇಸ್ ನಡೆಯುತ್ತಿದ್ದರೂ, ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ನ ತಡೆಯಾಜ್ಞೆ ಆದೇಶ ಇದ್ದರೂ, ಆದೇಶ ಉಲ್ಲಂಘನೆ ಮಾಡಿ ಬೇರೆಯವರಿಗೆ ಖಾತೆ ಮಾಡಿರೋ ಯಲಹಂಕ ಕಂದಾಯ ಇಲಾಖೆಯ ಅಧಿಕಾರಿಗಳು.

ಯಲಹಂಕ ತಾಲೂಕು ಜಾಲ ಹೋಬಳಿಯ ಕಾಡಯರಪ್ಪನಹಳ್ಳಿಯ ನಿವಾಸಿ ಕೆ.ಗೋವಿಂದರಾಜು ಪೂರ್ವಜರಿಂದ ಬಂದ ಜಮೀನು ಉಳಿಸಿಕೊಳ್ಳಲು ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ, ಇವರ ಮೂವರು ತಾತಂದಿರು ಒಟ್ಟಿಗೆ 1953ರಲ್ಲಿ ಪಕ್ಕದ ಹುಣಸೂರು ಗ್ರಾಮದಲ್ಲಿ ಜಮೀನು ಖರೀದಿ ಮಾಡಿದ್ದರು, ತಾತನ ನಂತರ ಜಮೀನುಗಳು ಗೋವಿಂದರಾಜುರವರ ದೊಡ್ಡಪ್ಪನವರಾದ ಮುನಿವೆಂಕಟ್ಟನವರ ಹೆಸರಿಗೆ ಖಾತೆಯಾಗಿರುತ್ತೆ, ಇದಕ್ಕೆ ಕುಟುಂಬದವರ ಸಮ್ಮತಿ ಇದ್ದು ಹೊಂದಾಣಿಕೆಯಿಂದ ಜಮೀನುಗಳಲ್ಲಿ ಕೃಷಿ ಮಾಡುತ್ತಿರುತ್ತಾರೆ, ಮುನಿವೆಂಕಟಪ್ಪನವರ ನಿಧನದ ನಂತರ ಅವರ ಇಬ್ಬರು ಪತ್ನಿಯರಾದ ಲಕ್ಷಮ್ಮ ಮತ್ತು ನಾಗಲಕ್ಷಮ್ಮನವರಿಗೆ ಹೆಸರುಗಳಿಗೆ ಜಂಟಿ ಖಾತೆ ಮಾಡಲಾಗುತ್ತದೆ. ಸರ್ವೆ ನಂಬರ್ 57ರ 2 ಎಕರೆ 18 ಗುಂಟೆ ಜಾಗದಲ್ಲಿ ಲಕ್ಷಮ್ಮ ಮತ್ತು ನಾಗಲಕ್ಷಮ್ಮ ಸ್ವಾಧೀನದಲ್ಲಿದ್ದು, ಈ ಜಮೀನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದರಿಂದ, 2006ರಲ್ಲಿ ಪರಿಹಾರವಾಗಿ 50 ಲಕ್ಷವನ್ನ ಪಡೆದು ಕೊಂಡಿದ್ದರು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಗೋವಿಂದರಾಜು ಸದ್ಯ ತಮ್ಮ ತಂದೆ ಕೃಷ್ಣಪ್ಪ ಸಾಗುವಳಿ ಮಾಡುತ್ತಿದ್ದ ಸರ್ವೆ ನಂಬರ್ 95ರ 2 ಎಕರೆ 36 ಗುಂಟೆ ಜಾಗದಲ್ಲಿ ಕೃಷಿ ಮಾಡುತಿದ್ದಾರೆ, ಆದರೆ ಈ ಜಾಗದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಸಾತನೂರು ದಾನೇಗೌಡನ ಕಣ್ಣು ಬಿದ್ದಿದೆ, ಇದೇ ದಾನೇನೇಗೌಡ ಅನಕ್ಷರಸ್ಥರು ಮತ್ತು ಕೋರ್ಟ್ ಕಚೇರಿಯ ತಿಳುವಳಿಕೆ ಇಲ್ಲದ ಲಕ್ಷಮ್ಮ ಮತ್ತು ನಾಗಲಕ್ಷಮ್ಮನವರ ತಲೆಕೆಡೆಸಿ ಈ ಜಾಗವನ್ನ ಆನಂದ ಎಂಬುವರ ಹೆಸರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ, ಜಮೀನು ಮಾರಾಟದ ಹಣವನ್ನು ಲಕ್ಷಮ್ಮ ಮತ್ತು ನಾಗಲಕ್ಷಮ್ಮರಿಗೆ ಕೊಟ್ಟಿಲ್ಲ ಎಂದು ಗೋವಿಂದರಾಜುರವರ ಆರೋಪವಾಗಿದೆ.

ಗೋವಿಂದರಾಜುವರ ಪೂರ್ವಜನ ಜಮೀನುಗಳ ಭಾಗಾಂಶಕ್ಕಾಗಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಮತ್ತು ಗೋವಿಂದರಾಜು ತಾವು ಸ್ವಾಧೀನದಲ್ಲಿ ಜಮೀನು ನೋಂದಣಿ ಮಾಡದಂತೆ ಚಿಕ್ಕಜಾಲದ ಸಬ್ ರಿಜಿಸ್ಟರ್ ಕಛೇರಿಗೆ ದೂರು ನೀಡಿದ್ದಾರೆ, ಆದರೂ ಸಬ್ ರಿಜಿಸ್ಟರ್ ಸ್ವರ್ಣಲತಾ ನೋಂದಣಿ ಮಾಡಿದ್ದಾರೆ, ಇದರ ಜೊತೆಗೆ ಹೈಕೋರ್ಟ್ ನಲ್ಲಿ ಖಾತೆ ಬದಲಾವಣೆ ಮಾಡದಂತೆ ಕೇಸ್ ಹಾಕಿದ್ದರು, ಹೈಕೋರ್ಟ್ ಜುಲೈ 31ರಂದು ಯಥಾಸ್ಥಿತಿ ಕಾಪಾಡುವಂತೆ ತಡೆಯಾಜ್ಞೆ ಆದೇಶ ನೀಡಿತ್ತು.

ತಡೆಯಾಜ್ಞೆಯ ಆದೇಶವನ್ನ ಕಂದಾಯ ಅಧಿಕಾರಿಗಳಿಗೆ ತಲುಪಿಸಿದ್ದಾರೆ ಗೋವಿಂದರಾಜು, ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಕಂದಾಯ ಇಲಾಖೆಯ ಅಧಿಕಾರಿಗಳಾದ ಯಲಹಂಕದ ವಿಶೇಷ ತಹಶೀಲ್ದಾರ್ ಶಿವಕುಮಾರ್, ಶಿರಸ್ತೇದಾರರಾದ ರಾಜು, ರೆವಿನ್ಯೂ ಇನ್ಸ್ ಪೆಕ್ಟರ್ ಪ್ರಕಾಶ್ ಸೇರಿಕೊಂಡು ಆಗಸ್ಟ್ 7ರಂದು ಜಮೀನನ್ನು ಆನಂದ ಎಂಬುವರ ಹೆಸರಿಗೆ ಖಾತೆ ಮಾಡುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿರುವ ಬಗ್ಗೆ ಗೋವಿಂದರಾಜು ಆರೋಪ ಮಾಡಿದ್ದಾರೆ.

Ramesh Babu

Journalist

Recent Posts

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

2 hours ago

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

1 day ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

1 day ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

2 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

3 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

3 days ago