ಗೌರಿಬಿದನೂರು:- ಚಿಕ್ಕ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚೆನ್ನಬೈರೇನಹಳ್ಳಿ ಗ್ರಾಮದ ನಿವಾಸಿ ಸತ್ಯನಾರಾಯಣ (45) ಲೇಟ್ ವೆಂಕಟರಮಣಪ್ಪ ಇವರು ನಗರದ ಕಲ್ಲುಡಿ ಗ್ರಾಮದಲ್ಲಿರುವ ಸಿ.ಬಿ ಮೋಟಾರ್ ಸರ್ವಿಸ್ ಸ್ಟೇಷನ್ ನಲ್ಲಿ ತಮ್ಮ ಬೈಕ್ ಅನ್ನು ರಿಪೇರಿಗೆ ಬಿಟ್ಟಿದ್ದು ಬೈಕ್ ರಿಪೇರಿ ಆದ ಬಳಿಕ ಮೆಕಾನಿಕ್ ಚೇತನ್ ಎಲ್ (21) ಬಿನ್ ಲಕ್ಷ್ಮೀನಾರಾಯಣಪ್ಪ ಎಂಬ ಹುಡುಗ ರಿಪೇರಿಯ ಹಣವನ್ನು ಕೇಳುವ ಸಮಯದಲ್ಲಿ ಚೇತನ್ ಮತ್ತು ಸತ್ಯನಾರಾಯಣ್ ನಡುವೆ ಮಾತಿನ ಚಕಮಕಿ ಮತ್ತು ಗಲಾಟೆ ನಡೆದಿದೆ.
ಕಳೆದ ಅ.25ರ ಬುಧವಾರದಂದು ಚೇತನ್ ಆತನ ಸ್ನೇಹಿತರಾದ ಚೆನ್ನಬೈರೇನಹಳ್ಳಿ ಗ್ರಾಮದ ನಿವಾಸಿ ಜ್ವಾಲೆಂದ್ರ ಬಿನ್ ಅಶ್ವತಪ್ಪ (22) ಮತ್ತು ಚೇತನ್ ಕೆ.ಹೆಚ್ ಬಿನ್ ಹನುಮಂತರಾಯಪ್ಪ (23) ಎಂಬ ಇಬ್ಬರು ಸ್ನೇಹಿತರಿಗೆ ಹಣದ ವಿಷಯ ತಿಳಿಸಿರುತ್ತಾನೆ.
ರಕ್ತಸ್ರಾವದಿಂದ ನರಳಾಡುತ್ತಿದ್ದ ಸತ್ಯನಾರಾಯಣನನ್ನ ಕಂಡ ಸ್ಥಳೀಯರು ಪ್ರಥಮ ಚಿಕಿತ್ಸೆಗಾಗಿ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಬೆಂಗಳೂರಿನ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಸತ್ಯನಾರಾಯಣ ಸಾವನಪ್ಪಿದ್ದಾರೆ.
ಅದೇ ಗ್ರಾಮದ ನಿವಾಸಿ ಬೈಕ್ ಮೆಕಾನಿಕ್ ಚೇತನ್ ಸ್ನೇಹಿತನಾದ ಜ್ವಾಲೆಂದ್ರ, ಮತ್ತು ಮೃತ ಸತ್ಯನಾರಾಯಣ ಎಂಬುವರಿಗೆ ಖಾಲಿ ನಿವೇಶನದ ವಿಚಾರವಾಗಿ ಈ ಹಿಂದೆ ಗಲಾಟೆಯು ಸಹ ನಡೆದಿತ್ತು. ಹಳೆ ದ್ವೇಷ ಮತ್ತು ಹಣದ ವಿಚಾರಕ್ಕೆ ಮನೆಯ ಬಳಿ ಬಂದು ಗಲಾಟೆ ತೆಗೆದಿದ್ದಾರೆ ಎಂದು ಸತ್ಯನಾರಾಯಣ್ ರವರ ಸಂಬಂಧಿಕರಾದ ಗಂಗಾಧರಪ್ಪ ತಿಳಿಸಿದ್ದಾರೆ.
ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…
ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…
ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…