ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯ ಹತ್ಯೆ

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ, ಅವನ ಜೊತೆಯಲ್ಲಿದ್ದವರೇ ಹಲ್ಲೆ ಮಾಡಿದ್ದಾರೆ ಎಂದು ಮೃತನ ಅಜ್ಜ ಹನುಮಂತಪ್ಪ ಆರೋಪಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.

ಬೆಳಗ್ಗೆ ಪೂಜೆ ಮಾಡ್ತಿದ್ದಾಗ ಮೊಮ್ಮಗ ಬಂದು ಕೈಮುಗಿದು ಹೋಗಿದ್ದನು. ರಾತ್ರಿ 9 ಆದರೂ ರಸ್ತೆಯಲ್ಲಿ ಕಾಯ್ತಿದ್ರು. ಯಾರಿಗೆ ಕಾಯ್ತಾ ಇದ್ದೀಯಾ ಅಂದೆ, ಮೊಮ್ಮಗ ಬಂದಿಲ್ಲ ಅಂದ್ರು. ನನ್ನ ಮೊಮ್ಮಗ ಯಾರ ತಂಟೆಗೂ ಹೋಗಲ್ಲ. ಜೊತೆಲಿಯದ್ದವರೂ ಹೊಡೆದಿದ್ದಾರೆ ತನಿಖೆ ನಡೆಯಲಿ ಎಂದು ಮೃತ ಸಂಕೇತ್ ಅಜ್ಜ ಹನುಮಂತಪ್ಪ ಹೇಳಿದ್ದಾರೆ.

#ಸ್ಪೆಷಲ್ #ಕ್ಲಾಸ್

ಶಾಲೆಯಿಂದ ಹತ್ತಿರದಲ್ಲೇ ಮನೆ ಇರೋದರಿಂದ ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಅವರೇ ಬರುತ್ತಿದ್ದರು. ನನ್ನ ಮೊಮ್ಮಗ ಯಾರಿಗೂ ತೊಂದರೆ ಮಾಡಲ್ಲ. ಶಾಲೆಗೆ ಹೋದವನು ಅರ್ಧ ಗಂಟೆ ಹೆಚ್ಚು-ಕಡಿಮೆ ಬರಬಹುದು ಎಂದುಕೊಂಡಿದ್ದೀವಿ. ರಾತ್ರಿ 9ರ ವೇಳೆ ಕೆಲವರು ಬಂದು ನಿಮ್ಮ ಮೊಮ್ಮಗನಿಗೆ ಹೊಡೆದಿದ್ದಾರೆ ಬನ್ನಿ ಎಂದು ಕರೆದುಕೊಂಡು ಹೋದರು. ಪ್ರಕರಣದ ಸಂಪೂರ್ಣ ತನಿಖೆ ಆಗ್ಬೇಕು ನಮಗೆ ನ್ಯಾಯ ಸಿಗಬೇಕು ಎಂದು ಹನುಮಂತಪ್ಪ ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಗಾಂಜಾ ಹೊಡಿಯೋರು ಜಾಸ್ತಿ ಇದ್ದಾರೆ ಕಂಟ್ರೋಲ್ ಯಾರು ಮಾಡಬೇಕು ನಾವು ಮಾಡಲಿಕ್ಕೆ ಬರುತ್ತಾ ಎಂದು ಪ್ರಶ್ನೆ ಮಾಡಿದ ಹನುಮಂತಪ್ಪ, ಎಣ್ಣೆ ಹಾವಳಿ ಹೆಚ್ಚಾಗಿದೆ ಕೇಳಲಿಕ್ಕೆ ಹೋದರೆ ಯಾರು ಬರಲ್ಲ . ಸಣ್ಣ ಮಕ್ಕಳು ಯಾರು ತಂಟೆಗೂ ಹೋಗುವುದಿಲ್ಲ. ಈ ಭಾಗದಲ್ಲಿ ಎರಡು ಗಂಟೆ ರಾತ್ರಿಯಾದರೂ ಗಾಂಜಾ ಇಸ್ಪೀಟು ಎಣ್ಣೆ ಎಲ್ಲವೂ ಇದೆ.

ನನ್ನ ಮೊಮ್ಮಗನ ಮೇಲೆ ಜೊತೆಯಲ್ಲಿರುವ ಹುಡುಗರೇ ಅಟ್ಯಾಕ್ ಮಾಡಿದ್ದಾರೆ. ಮಕ್ಕಳ ನಡುವೆ ಸಣ್ಣಪುಟ್ಟ ಕಿರಿಕ್ ನಡೆಯುತ್ತವೆ ಅವುಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಚೆನ್ನಾಗಿ ಮಾರ್ಕ್ಸ್ ತೆಗೆದ್ರೆ ಬೈಕ್ ಕೊಡಸ್ತೀನಿ ಎಂದಿದ್ದೆ. ಇತರ ಮಾಡಿಬಿಟ್ಟರೆ ಎಷ್ಟು ಹೊಟ್ಟೆ ಉರಿಯುತ್ತೆ ನೋಡಿ ಎಂದು ಹನುಮಂತಪ್ಪ ಕಣ್ಣೀರು ಹಾಕಿದರು.

ಸಂಕೇತ್ ತಂದೆ ಕುಮಾರ್ ಪ್ರತಿಕ್ರಿಯಿಸಿ, 9 ಗಂಟೆವರೆಗೂ ಸ್ಕೂಲ್ ಇದೆ ಎಂದು ಮನೆಯಿಂದ ಹೋಗಿದ್ದ. ಯಾರೋ ಮುಸ್ಲಿಂ ಹುಡುಗರು ಹೊಡೆದಿದ್ದಾರೆ ಎಂದು ಜನರು ಹೇಳಿದರು. ಅಲ್ಲಿಗೆ ಹೋಗುವಷ್ಟರಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ನನ್ನ ಮಗನನ್ನು ಕೊಂದದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗಿದ್ದ
ಒಂಬತ್ತು ಗಂಟೆ ಅವರಿಗೂ ಸ್ಪೆಷಲ್ ಕ್ಲಾಸ್ ಇತ್ತು ಆ ಸಂದರ್ಭದಲ್ಲಿ ನಡೆದಿದೆ. ಬೆಳಗ್ಗೆ 8:30 ಕ್ಕೆ ಶಾಲೆಗೆ ಹೋಗಿದ್ದ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗಿದ್ದ ಅಷ್ಟ. ಅಶೋಕ್ ಎಂಬುವರ ಮಗ ಗಿರೀಶ್ ಮೇಲೆಯೂ ಹಲ್ಲೆ ಮಾಡಿದ್ದಾರೆ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಮ್ಮ ಹುಡುಗ ಜಗಳ ಮಾಡುವ ಅಲ್ಲ ಆತ ತುಂಬಾ ಸೈಲೆಂಟ್. ಶಾಲೆ ಮತ್ತು ಮನೆ ಆಯ್ತು. ಮನೆಯಿಂದ ಎಲ್ಲಿಯೂ ಹೊರಗೆ ಹೋಗಲ್ಲ ಎಂದು ಹೇಳಿದರು.

Ramesh Babu

Journalist

Recent Posts

ದೊಡ್ಡಬಳ್ಳಾಪುರದಲ್ಲಿ ಕಾರ್ಮಿಕ–ರೈತರ ಆಕ್ರೋಶ; ಎಸಿ ಕಚೇರಿಗೆ ಮುತ್ತಿಗೆ: ನಾಲ್ಕು ಕಾರ್ಮಿಕ ಸಂಹಿತೆ ರದ್ದು, ವಿದ್ಯುತ್ ಖಾಸಗೀಕರಣ ಕೈಬಿಡಲು ಆಗ್ರಹ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ವಿದ್ಯುತ್ ಖಾಸಗೀಕರಣ ಕೈಬಿಡಬೇಕು ಸೇರಿದಂತೆ ವಿವಿಧ…

2 hours ago

ಕಾರು–ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದಾಬಸ್‌ಪೇಟೆ–ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ…

2 hours ago

ಕೆಐಎಎಲ್ ಏರ್‌ಪೋರ್ಟ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ:

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಇಬ್ಬರು ಬಾಲಕಿಯರು ಶಂಕಾಸ್ಪದವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ…

14 hours ago

ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಿಸಿ ಅರ್ಜುನ್ ವಿರಾಟ್ ಜನ್ಮದಿನ ಆಚರಣೆ

ದೊಡ್ಡಬಳ್ಳಾಪುರ: ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಅರ್ಜುನ್ ವಿರಾಟ್ ಅವರ ಜನ್ಮದಿನದ ಹಿನ್ನೆಲೆ, ಅವರ ಸ್ನೇಹಿತರು ಹಾಗೂ ಒಡನಾಡಿಗಳು…

19 hours ago

ಸೈಕಲ್ ಗೋಡಾನ್ ಗೆ ಆಕಸ್ಮಿಕ ಬೆಂಕಿ; ಬೆಲೆಬಾಳುವ ಸೈಕಲ್‌ಗಳು ಸುಟ್ಟು ಕರಕಲು

ದೊಡ್ಡಬಳ್ಳಾಪುರ: ನಗರದ ಸೈಕಲ್ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಗೋಡೌನ್‌ನಲ್ಲಿದ್ದ ಅಪಾರ ಪ್ರಮಾಣದ ಬೆಲೆಬಾಳುವ ಸೈಕಲ್‌ಗಳು ಸುಟ್ಟು ಕರಕಲಾದ…

20 hours ago

ಲಾರಿ–ಕಾರು ನಡುವೆ ಅಪಘಾತ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಮಧುರೆ ಹೋಬಳಿಯ ಚೆನ್ನದೇವಿ ಅಗ್ರಹಾರದ ಪೆಟ್ರೋಲ್ ಬಂಕ್ ಬಳಿ ಲಾರಿ ಹಾಗೂ ಕಾರು ನಡುವೆ…

1 day ago