ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯ ಹತ್ಯೆ

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ, ಅವನ ಜೊತೆಯಲ್ಲಿದ್ದವರೇ ಹಲ್ಲೆ ಮಾಡಿದ್ದಾರೆ ಎಂದು ಮೃತನ ಅಜ್ಜ ಹನುಮಂತಪ್ಪ ಆರೋಪಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.

ಬೆಳಗ್ಗೆ ಪೂಜೆ ಮಾಡ್ತಿದ್ದಾಗ ಮೊಮ್ಮಗ ಬಂದು ಕೈಮುಗಿದು ಹೋಗಿದ್ದನು. ರಾತ್ರಿ 9 ಆದರೂ ರಸ್ತೆಯಲ್ಲಿ ಕಾಯ್ತಿದ್ರು. ಯಾರಿಗೆ ಕಾಯ್ತಾ ಇದ್ದೀಯಾ ಅಂದೆ, ಮೊಮ್ಮಗ ಬಂದಿಲ್ಲ ಅಂದ್ರು. ನನ್ನ ಮೊಮ್ಮಗ ಯಾರ ತಂಟೆಗೂ ಹೋಗಲ್ಲ. ಜೊತೆಲಿಯದ್ದವರೂ ಹೊಡೆದಿದ್ದಾರೆ ತನಿಖೆ ನಡೆಯಲಿ ಎಂದು ಮೃತ ಸಂಕೇತ್ ಅಜ್ಜ ಹನುಮಂತಪ್ಪ ಹೇಳಿದ್ದಾರೆ.

#ಸ್ಪೆಷಲ್ #ಕ್ಲಾಸ್

ಶಾಲೆಯಿಂದ ಹತ್ತಿರದಲ್ಲೇ ಮನೆ ಇರೋದರಿಂದ ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಅವರೇ ಬರುತ್ತಿದ್ದರು. ನನ್ನ ಮೊಮ್ಮಗ ಯಾರಿಗೂ ತೊಂದರೆ ಮಾಡಲ್ಲ. ಶಾಲೆಗೆ ಹೋದವನು ಅರ್ಧ ಗಂಟೆ ಹೆಚ್ಚು-ಕಡಿಮೆ ಬರಬಹುದು ಎಂದುಕೊಂಡಿದ್ದೀವಿ. ರಾತ್ರಿ 9ರ ವೇಳೆ ಕೆಲವರು ಬಂದು ನಿಮ್ಮ ಮೊಮ್ಮಗನಿಗೆ ಹೊಡೆದಿದ್ದಾರೆ ಬನ್ನಿ ಎಂದು ಕರೆದುಕೊಂಡು ಹೋದರು. ಪ್ರಕರಣದ ಸಂಪೂರ್ಣ ತನಿಖೆ ಆಗ್ಬೇಕು ನಮಗೆ ನ್ಯಾಯ ಸಿಗಬೇಕು ಎಂದು ಹನುಮಂತಪ್ಪ ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಗಾಂಜಾ ಹೊಡಿಯೋರು ಜಾಸ್ತಿ ಇದ್ದಾರೆ ಕಂಟ್ರೋಲ್ ಯಾರು ಮಾಡಬೇಕು ನಾವು ಮಾಡಲಿಕ್ಕೆ ಬರುತ್ತಾ ಎಂದು ಪ್ರಶ್ನೆ ಮಾಡಿದ ಹನುಮಂತಪ್ಪ, ಎಣ್ಣೆ ಹಾವಳಿ ಹೆಚ್ಚಾಗಿದೆ ಕೇಳಲಿಕ್ಕೆ ಹೋದರೆ ಯಾರು ಬರಲ್ಲ . ಸಣ್ಣ ಮಕ್ಕಳು ಯಾರು ತಂಟೆಗೂ ಹೋಗುವುದಿಲ್ಲ. ಈ ಭಾಗದಲ್ಲಿ ಎರಡು ಗಂಟೆ ರಾತ್ರಿಯಾದರೂ ಗಾಂಜಾ ಇಸ್ಪೀಟು ಎಣ್ಣೆ ಎಲ್ಲವೂ ಇದೆ.

ನನ್ನ ಮೊಮ್ಮಗನ ಮೇಲೆ ಜೊತೆಯಲ್ಲಿರುವ ಹುಡುಗರೇ ಅಟ್ಯಾಕ್ ಮಾಡಿದ್ದಾರೆ. ಮಕ್ಕಳ ನಡುವೆ ಸಣ್ಣಪುಟ್ಟ ಕಿರಿಕ್ ನಡೆಯುತ್ತವೆ ಅವುಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಚೆನ್ನಾಗಿ ಮಾರ್ಕ್ಸ್ ತೆಗೆದ್ರೆ ಬೈಕ್ ಕೊಡಸ್ತೀನಿ ಎಂದಿದ್ದೆ. ಇತರ ಮಾಡಿಬಿಟ್ಟರೆ ಎಷ್ಟು ಹೊಟ್ಟೆ ಉರಿಯುತ್ತೆ ನೋಡಿ ಎಂದು ಹನುಮಂತಪ್ಪ ಕಣ್ಣೀರು ಹಾಕಿದರು.

ಸಂಕೇತ್ ತಂದೆ ಕುಮಾರ್ ಪ್ರತಿಕ್ರಿಯಿಸಿ, 9 ಗಂಟೆವರೆಗೂ ಸ್ಕೂಲ್ ಇದೆ ಎಂದು ಮನೆಯಿಂದ ಹೋಗಿದ್ದ. ಯಾರೋ ಮುಸ್ಲಿಂ ಹುಡುಗರು ಹೊಡೆದಿದ್ದಾರೆ ಎಂದು ಜನರು ಹೇಳಿದರು. ಅಲ್ಲಿಗೆ ಹೋಗುವಷ್ಟರಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ನನ್ನ ಮಗನನ್ನು ಕೊಂದದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗಿದ್ದ
ಒಂಬತ್ತು ಗಂಟೆ ಅವರಿಗೂ ಸ್ಪೆಷಲ್ ಕ್ಲಾಸ್ ಇತ್ತು ಆ ಸಂದರ್ಭದಲ್ಲಿ ನಡೆದಿದೆ. ಬೆಳಗ್ಗೆ 8:30 ಕ್ಕೆ ಶಾಲೆಗೆ ಹೋಗಿದ್ದ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗಿದ್ದ ಅಷ್ಟ. ಅಶೋಕ್ ಎಂಬುವರ ಮಗ ಗಿರೀಶ್ ಮೇಲೆಯೂ ಹಲ್ಲೆ ಮಾಡಿದ್ದಾರೆ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಮ್ಮ ಹುಡುಗ ಜಗಳ ಮಾಡುವ ಅಲ್ಲ ಆತ ತುಂಬಾ ಸೈಲೆಂಟ್. ಶಾಲೆ ಮತ್ತು ಮನೆ ಆಯ್ತು. ಮನೆಯಿಂದ ಎಲ್ಲಿಯೂ ಹೊರಗೆ ಹೋಗಲ್ಲ ಎಂದು ಹೇಳಿದರು.

Ramesh Babu

Journalist

Recent Posts

KSRTC ಬಸ್-ಕಂಟೇನರ್ ಲಾರಿ ನಡುವೆ ಅಪಘಾತ; ಕೆಲವರಿಗೆ ಗಾಯ

ಹೊಸಕೋಟೆ: ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ KSRTC ಬಸ್ ಹಾಗೂ ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿರುವ ಘಟನೆ ಹೊಸಕೋಟೆ ಸಮೀಪದ…

14 minutes ago

ರಾಜ್ಯಸಭೆ, ಪರಿಷತ್ ಚುನಾವಣೆ: ಬಿಜೆಪಿ ಅಚ್ಚರಿ ನಿರ್ಧಾರ, ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ನಿರಾಕರಣೆ

ಬೆಂಗಳೂರು: 2026ರ ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದ್ದು, ಕರ್ನಾಟಕದಿಂದ ರಾಜ್ಯಸಭೆಗೆ…

3 hours ago

ಅಳಬೇಡಿ ಸ್ವಾಮಿ ಅಳಬೇಡಿ, ದಯವಿಟ್ಟು ಅಳಬೇಡಿ, ಸ್ವಲ್ಪ ನಕ್ಕು ಬಿಡಿ…..

ನಾನು ವಿದ್ಯಾವಂತನಾಗಿರಲಿಲ್ಲ, ಅದರಿಂದಾಗಿ ಯಶಸ್ವಿಯಾಗಲಿಲ್ಲ. ನಾನು ಬುದ್ದಿವಂತನಾಗಿರಲಿಲ್ಲ, ಅದರಿಂದಾಗಿ ಜನಪ್ರಿಯನಾಗಲಿಲ್ಲ. ನಾನು ಪ್ರತಿಭಾವಂತನಾಗಿರಲಿಲ್ಲ, ಅದರಿಂದಾಗಿ ಪ್ರಖ್ಯಾತನಾಗಲಿಲ್ಲ. ನಾನು ಶ್ರೀಮಂತನಾಗಿರಲಿಲ್ಲ, ಅದರಿಂದಾಗಿ…

6 hours ago

ದೊಡ್ಡಬಳ್ಳಾಪುರ ಯೋಗಾ ಪ್ರತಿಭೆ, ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಪುರಸ್ಕೃತೆ ಜಾಹ್ನವಿ ಎಂ.ಆರ್ ಗೆ ಸನ್ಮಾನ

ಕರ್ನಾಟಕ ಸ್ಟೇಟ್ ಅಮೆಚೂರು ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜೂ.6, 7ರಂದು ನಡೆದ ರಾಜ್ಯಮಟ್ಟದ…

17 hours ago

ತಡರಾತ್ರಿ ರೌಡಿ ಶೀಟರ್‌ ಬರ್ಬರ ಹತ್ಯೆ: ಸೂಲಿಬೆಲೆಯಲ್ಲಿ ಭೀಕರ ಘಟನೆ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಗ್ರಾಮದಲ್ಲಿ ತಡರಾತ್ರಿ ರೌಡಿ ಶೀಟರ್‌ನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ…

1 day ago

ಕಾಕ್ರೋಚ್ ಜನತಾ ಪಾರ್ಟಿ……

ಕಾಕ್ರೋಚ್ ಜನತಾ ಪಾರ್ಟಿ...... ಸಾಮಾಜಿಕ ಜಾಲತಾಣದ ಹೊಸ ರಾಜಕೀಯ ಚಳುವಳಿ ಎಂದು ಕಳೆದ ಐದಾರು ವಾರಗಳಿಂದ ಇಡೀ ದೇಶದಾದ್ಯಂತ ಬಹುದೊಡ್ಡ…

1 day ago