ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ ಹೋಗುತ್ತಿರಲಿಲ್ಲ, ಅವನ ಜೊತೆಯಲ್ಲಿದ್ದವರೇ ಹಲ್ಲೆ ಮಾಡಿದ್ದಾರೆ ಎಂದು ಮೃತನ ಅಜ್ಜ ಹನುಮಂತಪ್ಪ ಆರೋಪಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.
ಬೆಳಗ್ಗೆ ಪೂಜೆ ಮಾಡ್ತಿದ್ದಾಗ ಮೊಮ್ಮಗ ಬಂದು ಕೈಮುಗಿದು ಹೋಗಿದ್ದನು. ರಾತ್ರಿ 9 ಆದರೂ ರಸ್ತೆಯಲ್ಲಿ ಕಾಯ್ತಿದ್ರು. ಯಾರಿಗೆ ಕಾಯ್ತಾ ಇದ್ದೀಯಾ ಅಂದೆ, ಮೊಮ್ಮಗ ಬಂದಿಲ್ಲ ಅಂದ್ರು. ನನ್ನ ಮೊಮ್ಮಗ ಯಾರ ತಂಟೆಗೂ ಹೋಗಲ್ಲ. ಜೊತೆಲಿಯದ್ದವರೂ ಹೊಡೆದಿದ್ದಾರೆ ತನಿಖೆ ನಡೆಯಲಿ ಎಂದು ಮೃತ ಸಂಕೇತ್ ಅಜ್ಜ ಹನುಮಂತಪ್ಪ ಹೇಳಿದ್ದಾರೆ.
#ಸ್ಪೆಷಲ್ #ಕ್ಲಾಸ್
ಶಾಲೆಯಿಂದ ಹತ್ತಿರದಲ್ಲೇ ಮನೆ ಇರೋದರಿಂದ ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಅವರೇ ಬರುತ್ತಿದ್ದರು. ನನ್ನ ಮೊಮ್ಮಗ ಯಾರಿಗೂ ತೊಂದರೆ ಮಾಡಲ್ಲ. ಶಾಲೆಗೆ ಹೋದವನು ಅರ್ಧ ಗಂಟೆ ಹೆಚ್ಚು-ಕಡಿಮೆ ಬರಬಹುದು ಎಂದುಕೊಂಡಿದ್ದೀವಿ. ರಾತ್ರಿ 9ರ ವೇಳೆ ಕೆಲವರು ಬಂದು ನಿಮ್ಮ ಮೊಮ್ಮಗನಿಗೆ ಹೊಡೆದಿದ್ದಾರೆ ಬನ್ನಿ ಎಂದು ಕರೆದುಕೊಂಡು ಹೋದರು. ಪ್ರಕರಣದ ಸಂಪೂರ್ಣ ತನಿಖೆ ಆಗ್ಬೇಕು ನಮಗೆ ನ್ಯಾಯ ಸಿಗಬೇಕು ಎಂದು ಹನುಮಂತಪ್ಪ ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ ಗಾಂಜಾ ಹೊಡಿಯೋರು ಜಾಸ್ತಿ ಇದ್ದಾರೆ ಕಂಟ್ರೋಲ್ ಯಾರು ಮಾಡಬೇಕು ನಾವು ಮಾಡಲಿಕ್ಕೆ ಬರುತ್ತಾ ಎಂದು ಪ್ರಶ್ನೆ ಮಾಡಿದ ಹನುಮಂತಪ್ಪ, ಎಣ್ಣೆ ಹಾವಳಿ ಹೆಚ್ಚಾಗಿದೆ ಕೇಳಲಿಕ್ಕೆ ಹೋದರೆ ಯಾರು ಬರಲ್ಲ . ಸಣ್ಣ ಮಕ್ಕಳು ಯಾರು ತಂಟೆಗೂ ಹೋಗುವುದಿಲ್ಲ. ಈ ಭಾಗದಲ್ಲಿ ಎರಡು ಗಂಟೆ ರಾತ್ರಿಯಾದರೂ ಗಾಂಜಾ ಇಸ್ಪೀಟು ಎಣ್ಣೆ ಎಲ್ಲವೂ ಇದೆ.
ನನ್ನ ಮೊಮ್ಮಗನ ಮೇಲೆ ಜೊತೆಯಲ್ಲಿರುವ ಹುಡುಗರೇ ಅಟ್ಯಾಕ್ ಮಾಡಿದ್ದಾರೆ. ಮಕ್ಕಳ ನಡುವೆ ಸಣ್ಣಪುಟ್ಟ ಕಿರಿಕ್ ನಡೆಯುತ್ತವೆ ಅವುಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಚೆನ್ನಾಗಿ ಮಾರ್ಕ್ಸ್ ತೆಗೆದ್ರೆ ಬೈಕ್ ಕೊಡಸ್ತೀನಿ ಎಂದಿದ್ದೆ. ಇತರ ಮಾಡಿಬಿಟ್ಟರೆ ಎಷ್ಟು ಹೊಟ್ಟೆ ಉರಿಯುತ್ತೆ ನೋಡಿ ಎಂದು ಹನುಮಂತಪ್ಪ ಕಣ್ಣೀರು ಹಾಕಿದರು.
ಸಂಕೇತ್ ತಂದೆ ಕುಮಾರ್ ಪ್ರತಿಕ್ರಿಯಿಸಿ, 9 ಗಂಟೆವರೆಗೂ ಸ್ಕೂಲ್ ಇದೆ ಎಂದು ಮನೆಯಿಂದ ಹೋಗಿದ್ದ. ಯಾರೋ ಮುಸ್ಲಿಂ ಹುಡುಗರು ಹೊಡೆದಿದ್ದಾರೆ ಎಂದು ಜನರು ಹೇಳಿದರು. ಅಲ್ಲಿಗೆ ಹೋಗುವಷ್ಟರಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ನನ್ನ ಮಗನನ್ನು ಕೊಂದದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗಿದ್ದ
ಒಂಬತ್ತು ಗಂಟೆ ಅವರಿಗೂ ಸ್ಪೆಷಲ್ ಕ್ಲಾಸ್ ಇತ್ತು ಆ ಸಂದರ್ಭದಲ್ಲಿ ನಡೆದಿದೆ. ಬೆಳಗ್ಗೆ 8:30 ಕ್ಕೆ ಶಾಲೆಗೆ ಹೋಗಿದ್ದ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗಿದ್ದ ಅಷ್ಟ. ಅಶೋಕ್ ಎಂಬುವರ ಮಗ ಗಿರೀಶ್ ಮೇಲೆಯೂ ಹಲ್ಲೆ ಮಾಡಿದ್ದಾರೆ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಮ್ಮ ಹುಡುಗ ಜಗಳ ಮಾಡುವ ಅಲ್ಲ ಆತ ತುಂಬಾ ಸೈಲೆಂಟ್. ಶಾಲೆ ಮತ್ತು ಮನೆ ಆಯ್ತು. ಮನೆಯಿಂದ ಎಲ್ಲಿಯೂ ಹೊರಗೆ ಹೋಗಲ್ಲ ಎಂದು ಹೇಳಿದರು.
ಆಟೋ ಎಲ್ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…
2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…
ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಎಸ್ ಯು ರಮೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾಧ್ಯಕ್ಷ ನರೇಶ್ ನೇತೃತ್ವದಲ್ಲಿ ನಗರದ…
ಬೆಳಗಾವಿಯ ಸಂಕೇಶ್ವರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ. ಅಂತಾರಾಜ್ಯ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಬಂಧಿತರಿಂದ 18.30 ಲಕ್ಷ ಮೌಲ್ಯದ…
ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…
ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…