Categories: ಕೃಷಿ

ಸೇಬು ಬೆಳೆದು ಸೈ ಎನಿಸಿಕೊಂಡ ರೈತ: ಕೃಷಿಕನ‌ ಪ್ರಯೋಗಶೀಲತೆಗೆ ಭರಪೂರ ಮೆಚ್ಚುಗೆ

ಹೊಸಕೋಟೆ: ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ತಂಪು ಹವಾಗುಣದ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಸೇಬು ಈಗ ಸರ್ವ ಋತು ಬೆಳೆಯಾಗಿ ಬದಲಾಗಿದೆ.

ಸಮಶೀತೋಷ್ಣ ಬೆಳೆ ಎನಿಸಿರುವ ಕಾಶ್ಮೀರಿ ಸೇಬನ್ನು ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವೇ ಇರುವ ಹೊಸಕೋಟೆಯಲ್ಲೂ ಬೆಳೆಯಲಾಗಿದೆ. ಪ್ರಯೋಗಶೀಲ ರೈತನ ಮೊದಲ ಪ್ರಯೋಗದಲ್ಲೇ ಉತ್ತಮ ಇಳುವರಿಯೊಂದಿಗೆ ಸೇಬಿನ ಬೆಳೆ ನಳನಳಿಸುತ್ತಿದೆ.

ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಸಿದ್ದೇನಹಳ್ಳಿ ನಿವಾಸಿಯಾದ ಬಸವರಾಜು ಅವರು ರೇಷ್ಮೆ ಹಾಗೂ ತರಕಾರಿ ಬೆಳೆಯಿಂದ ಸೇಬು ಬೆಳೆಯತ್ತ ಹೊರಳಿದ್ದಾರೆ. ತರಕಾರಿ, ಸೊಪ್ಪು ಬೆಳೆಯಿಂದ ದಿಢೀರ್ ಸೇಬಿನ ಬೆಳೆಯತ್ತ ಮುಖ ಮಾಡಿದಾಗ ಬಸವರಾಜು ಅವರನ್ನು ಮೂದಲಿಸಿದವರು ಹಲವರು. ಆದರೆ, ಯಾರ ಮೂದಲಿಕೆಗೂ ಕುಗ್ಗದೇ‌ ದಿಟ್ಟ ಹೆಜ್ಜೆ ಇಟ್ಟಿದ್ದರಿಂದಲೇ ಇಂದು ಬಸವರಾಜು ಅವರು ಪ್ರಗತಿಪರ, ಪ್ರಯೋಗಶೀಲ ರೈತರಾಗಿ ಹೊರಹೊಮ್ಮಿದ್ದಾರೆ.

ಈಗಾಗಲೇ ಚಿತ್ರದುರ್ಗ, ಮಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇಬು ಬೆಳೆಯ ಪ್ರಯೋಗ ಯಶಸ್ವಿಯಾಗಿದೆ.

ಸಿದ್ದೇನಹಳ್ಳಿಯ ಬಸವರಾಜು ಅವರು ಒಂದು‌ ಎಕರೆ ನಾಲ್ಕು ಗುಂಟೆಯಲ್ಲಿ 442 ಸೇಬಿನ ಗಿಡಗಳನ್ನು ಬೆಳೆದಿದ್ದು, ಗಿಡದಲ್ಲಿ ಹಣ್ಣಿನ ಗೊಂಚಲುಗಳು ತೊನೆದಾಡುತ್ತಿವೆ. ಸೇಬಿನ ಗಿಡಗಳನ್ನು ನೆಟ್ಟು ಒಂದು ವರ್ಷ ಎಂಟು‌ ತಿಂಗಳ ಬಳಿಕ ಹಣ್ಣುಗಳು ನಳನಳಿಸುತ್ತಿವೆ. ಪ್ರಸ್ತುತ ಬಂದಿರುವ ಇಳುವರಿ ಸುಮಾರು 2 ಟನ್ ಆಗುವ ‌ನಿರೀಕ್ಷೆ‌ ಇದೆ.

ಸೇಬು ಬೆಳೆಯಲು ಕಾರಣವೇನು..?

ಬಸವರಾಜು ಅವರು ಈ ಹಿಂದೆ ರೇಷ್ಮೆ ಬೆಳೆ ಬೆಳೆಯುತ್ತಿದ್ದರು. ಅದಾದ ಬಳಿಕ ತರಕಾರಿ ಬೆಳೆದು ಅತ್ಯಲ್ಪ‌ ಲಾಭ ಕಾಣುತ್ತಿದ್ದರು. ಬಂದ ಅಲ್ಪಸ್ವಲ್ಪ ಲಾಭದಲ್ಲೇ ಸಂಸಾರ, ಬೆಳೆ ಖರ್ಚು, ಮಕ್ಕಳ ವ್ಯಾಸಂಗದ ಖರ್ಚು ನಿಭಾಯಿಸುತ್ತಿದ್ದರು. ಒಮ್ಮೆ 6ನೇ ತರಗತಿ ಓದುತ್ತಿರುವ ಅವರ‌ ಮಗ ಆಡಿದ ಕೆಲ‌ ಮಾತುಗಳು ಬಸವರಾಜು ಅವರನ್ನು ಚಿಂತೆಗೀಡು‌ ಮಾಡಿದವು. ಅದೇನೆಂದರೆ, ಸಣ್ಣಪುಟ್ಟ ಬೆಳೆಯಿಂದ ಯಾವುದೇ ಲಾಭವಿಲ್ಲ. ಹೀಗಾದರೆ ಎಸ್ಸೆಸ್ಸೆಲ್ಸಿ ಮುಂದಿನ ಶಿಕ್ಷಣ‌ ಮಾಡುವುದು ಎಂದು ಬಸವರಾಜು ಬಳಿ ಮಗ ಕೇಳಿದ್ದರಂತೆ. ಮಗನ ಮಾತು ತೆಗೆದುಹಾಕದೇ ಯೋಚಿಸಿದಾಗ ಹೊಳೆದಿದ್ದೇ ಸೇಬು ಬೆಳೆಯ ಕಲ್ಪನೆ.

ಸೇಬು ಸಸಿ ತಂದಿದ್ದು‌ ಎಲ್ಲಿಂದ..?

ಜಿಕೆವಿಕೆ, ಕೃಷಿ ಇಲಾಖೆ, ಯೂಟ್ಯೂಬ್ ಗಳಲ್ಲಿ ಸೇಬಿನ ಬೆಳೆಯ ಬಗ್ಗೆ‌ ಸಾಕಷ್ಟು ಮಾಹಿತಿಗಾಗಿ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.‌ ಶಿರಾದಲ್ಲಿ ಸೇಬು ಬೆಳೆದಿರುವ ಕುರಿತು ಸ್ನೇಹಿತರೊಬ್ಬರು ಹೇಳಿದ್ದರು. ಅದರಂತೆ ಶಿರಾಗೆ ಹೋಗಿ‌ ನೋಡಿದಾಗ ಅಲ್ಲಿ ಒಂದೇ ಒಂದು ಗಿಡವಿತ್ತು. ಬೆಳೆ ವಿಧಾನದ ಕುರಿತು ಅವರೂ ಕೂಡ ಅಷ್ಟೇನೂ‌ ಮಾಹಿತಿ‌ ನೀಡಲಿಲ್ಲ. ಬಳಿಕ‌‌ ಮಂಗಳೂರು ಹೋದರೂ ಉಪಯೋಗ ಆಗಲಿಲ್ಲ.‌ ಕೊನೆಗೆ ಯೂಟ್ಯೂಬ್ ನಲ್ಲಿ ಬಿಜಾಪುರ(ವಿಜಯಪುರ)ದ ಸಚಿನ್ ಬಾಲಕೊಂಡ ಬೆಳೆದಿರುವ ಸೇಬು ಬೆಳೆಯನ್ನು ನೋಡಿ ಪೋನ್ ಮೂಲಕ‌ ಮಾಹಿತಿ ಪಡೆದರು. ಅವರಿಂದಲೇ ಪ್ರತಿ ಗಿಡಕ್ಕೆ 300 ರೂ.ಪಾವತಿಸಿ ಒಟ್ಟು 442 ಗಿಡ ಖರೀದಿಸಿದರು. ಸಚಿನ್ ಬಾಲಕೊಂಡ ಅವರೇ ಮನೆಗೆ ಸಸಿಗಳನ್ನು ಡೆಲಿವರಿ ಕೊಟ್ಟರು ಎಂದು ಬಸವರಾಜು ವಿವರಿಸಿದರು.

ಸೇಬು ಬೆಳೆಗೆ ಸಿದ್ಧತೆ ಹೇಗೆ?

ಒಂದು ಎಕರೆ ನಾಲ್ಕು ಗುಂಟೆಯಲ್ಲಿ 10 ಅಡಿ ಸುತ್ತಳತೆಗೆ ಒಂದರಂತೆ ಗಿಡ‌ ನಾಟಿ‌ ಮಾಡಲು ಗುಂಡಿ ತೆಗೆಸಿದರು. ಎರಡು ಅಡಿ ಆಳದ ಗುಂಡಿ ತೆಗೆದು ಅದಕ್ಕೆ ನಾಟಿ ಗೊಬ್ಬರ, ಬೇವು ಹಾಗೂ ಹೊಂಗೆ ಇಂಡಿ ಹಾಕಿ ಸೇಬಿನ ಗಿಡಗಳನ್ನು ಭರಣಿ ಮಳೆಯ ನಂತರ ನಾಟಿ‌ ಮಾಡಿದರು. ಪ್ರತಿ ಮೂರು ದಿನಕ್ಕೆ ಒಮ್ಮೆ ನೀರು ಹಾಯಿಸಿದರು.

ಈ ಕುರಿತು ವಿವರಿಸಿದ ಅವರು, ಗಿಡ‌ ನಾಟಿ ಮಾಡಿದ ಆರು ತಿಂಗಳ ಬಳಿಕ ಕಟಿಂಗ್ ಮಾಡಿದೆ. ಅದು ಕವಲುಗಳಾಗಿ ಬೆಳೆಯಿತು.‌ ಬರೋಬ್ಬರಿ ಒಂದು ವರ್ಷ ಎಂಟು ತಿಂಗಳಿಗೆ ಫಸಲು ಕಾಣಿಸಿತು. ಕೊನೆಗೂ ಸೇಬು ಬೆಳೆ ಕೈ ಹಿಡಿಯಿತು. ಒಂದು ಎಕರೆಗೆ ಹಾಕಿದ್ದ ₹3 ಲಕ್ಷ ಬಂಡವಾಳ ವಾಪಸ್ ಬಂತು ಎಂದು ಸಂತಸ ವ್ಯಕ್ತಪಡಿಸಿದರು.

ಸ್ಥಳೀಯವಾಗಿಯೇ ಮಾರಾಟವಾದ ಸೇಬು

ಸೇಬಿನ ಮೊದಲ ಫಸಲನ್ನು ಸುತ್ತಮುತ್ತಲ ಗ್ರಾಮಸ್ಥರಿಗೆ ಕೆ.ಜಿಗೆ ₹150 ರಂತೆ ಮಾರಾಟ ಮಾಡಿದೆ. ಇಲ್ಲಿಯವರೆಗೆ ₹1,200ಕೆ.ಜಿಯಷ್ಟು ಸೇಬು ಮಾರಾಟ‌ ಮಾಡಿದ್ದೇನೆ ಎಂದರು.

ಪ್ರಯೋಗಶೀಲ ಕೃಷಿಯಲ್ಲಿ‌ ತೊಡಗಿಸಿಕೊಂಡ ರೈತನ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳೆ ವೀಕ್ಷಿಸಲು ಬರುವವರ ಸಂಖ್ಯೆಯೂ ಹೆಚ್ಚಿದೆ.

Ramesh Babu

Journalist

Recent Posts

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

3 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

14 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

15 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

15 hours ago

ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸಿ ಗೋವಿಂದಪ್ಪ ಅವಿರೋಧ ಆಯ್ಕೆ

ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…

16 hours ago

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜಿಲ್ಲೆಯ 99,828 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ಸಚಿವ ಕೆ.ಎಚ್ ಮುನಿಯಪ್ಪ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…

23 hours ago