ಸಿರಿ (ನ್ಯೂಟ್ರಿ) ಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ

ಸಿರಿಧಾನ್ಯಗಳು ಮನುಕುಲಕ್ಕೆ ತಿಳಿದಿರುವ ಅತ್ಯಂತ ಪುರಾತನ ಆಹಾರವಾಗಿದ್ದು ಕಡಿಮೆ ನೀರು ಉಪಯೋಗಿಸಿ, ರಾಸಾಯನಿಕ ಗೊಬ್ಬರವಿಲ್ಲದೆ ಬರಡು ಭೂಮಿಯಲ್ಲೂ ಸಹಜವಾಗಿ ಬೆಳೆಯುವ ಮತ್ತು ಬೇಗ ಕಟಾವಿಗೆ ಬರುವ ಬೆಳೆಗಳಾಗಿವೆ. ಆದ್ದರಿಂದ ಇವುಗಳನ್ನು ‘ಬರಗಾಲದ ಮಿತ್ರ’ ಎಂದೂ ಸಹ ಕರೆಯಲಾಗುತ್ತದೆ. ಭಾರತವು ಸೇರಿದಂತೆ ವಿಶ್ವದ ಅರೆ ಒಣ ಪ್ರದೇಶದಲ್ಲಿ ಸಿರಿ ಧಾನ್ಯಗಳನ್ನು ಆಹಾರ ಮತ್ತು ಮೇವು ಬೆಳೆಗಳಾಗಿ ಬೆಳೆಯಲಾಗುತ್ತಿದ್ದು, ಶತಕೋಟಿಗೂ ಹೆಚ್ಚಿನ ಜನರಿಗೆ ಆಹಾರದ ಶಕ್ತಿ ಮತ್ತು ಸಾರಜನಕದ ಮೂಲವಾಗಿದೆ. ಪ್ರಪಂಚದಾದ್ಯಂತ ಇವುಗಳ ಮಹತ್ವ ತಿಳಿಸಲು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ.

ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ

ಸಿರಿಧಾನ್ಯಗಳ ಸಂಸ್ಕರಣೆಯಲ್ಲಿ ಪ್ರಮುಖವಾಗಿ ಧಾನ್ಯಗಳನ್ನು ಮೂಲ ಬೀಜ, ಪಿಷ್ಠವಿರುವ ಎಂಡೋಸ್ಪರ್ಮ್ ಮತ್ತು ರಕ್ಷಣಾ ಪದರ ಎಂದು ಮೂರು ಘಟಕಗಳಾಗಿ ಪರಿವರ್ತಿಸಲಾಗುತ್ತದೆ. ಸಿರಿಧಾನ್ಯಗಳ ಸಾಂಪ್ರದಾಯಿಕ ಸಂಸ್ಕರಣೆ ವಿಧಾನಗಳು ತುಂಬಾ ಪ್ರಯಾಸಕರ ಮತ್ತು ಹಸ್ತ ಚಾಲಿತವಾಗಿದ್ದು ಮಾನವ ಶ್ರಮ ಹಾಗೂ ಖರ್ಚು ವೆಚ್ಚವನ್ನು ಹೆಚ್ಚಿಸುತ್ತವೆ ಮತ್ತು ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಕೊಡುತ್ತವೆ.

ಸಿರಿಧಾನ್ಯಗಳ ಸಂಸ್ಕರಣಾ ಹಂತಗಳು
1. ಪ್ರಾಥಮಿಕ ಹಂತ
2. ದ್ವಿತೀಯ ಹಂತ

1. ಪ್ರಾಥಮಿಕ ಹಂತದ ಸಂಸ್ಕರಣೆ

ಧಾನ್ಯಗಳಲ್ಲಿರುವ ಕಲ್ಮಶ, ಕಸ, ಕಡ್ಡಿ ಇತರೆ ಕಳೆ ಬೀಜ ಮತ್ತು ಕಾಳಿನ ಹೊಟ್ಟು ತೆಗೆದು ಹಾಕುವ ಪ್ರಕ್ರಿಯೆಯನ್ನು ಪ್ರಾಥಮಿಕ ಸಂಸ್ಕರಣೆ ಎಂದು ಕರೆಯಲಾಗುತ್ತದೆ. ಹೀಗೆ ಸ್ವಚ್ಛಗೊಳಿದ ಧಾನ್ಯಗಳು ದ್ವಿತೀಯ ಸಂಸ್ಕರಣೆ ಮಾಡಲು ಅನುಕೂಲಕರವಾಗಿರುತ್ತವೆ. ಪ್ರಾಥಮಿಕ ಸಂಸ್ಕರಣೆಯಲ್ಲಿರುವ ಕಾರ್ಯ ವಿಧಾನಗಳೆಂದರೆ ವರ್ಗೀಕರಣ (ಗ್ರೇಡಿಂಗ್), ಕಲ್ಲು ತೆಗೆಯುವುದು (ಡಿ-ಸ್ಟೋನಿಂಗ್), ಹೊಟ್ಟು ತೆಗೆಯುವುದು (ಡಿ-ಹಲ್ಲಿಂಗ್).

2. ದ್ವಿತೀಯ ಹಂತದ ಸಂಸ್ಕರಣೆ
ಪ್ರಾಥಮಿಕ ಸಂಸ್ಕರಣೆ ಮಾಡಿದ ಕಚ್ಛಾ‌ ವಸ್ತುಗಳನ್ನು ತಿನ್ನಲು ಸಿದ್ಧ ವಸ್ತುಗಳನ್ನಾಗಿ ಪರಿವರ್ತಿಸುವ ಕ್ರಿಯೆಯನ್ನು ದ್ವಿತೀಯ ಸಂಸ್ಕರಣೆ ಎನ್ನುತ್ತಾರೆ. ಉದಾಹರಣೆಗೆ ಅಡುಗೆ ಮಾಡಲು ತಯಾರಿರುವ ಉತ್ಪನ್ನಗಳು ರೆಡಿ ಟು ಕಿಕ್ ಮತ್ತು ತಿನ್ನಲು ಸಿದ್ಧವಿರುವ ಪದಾರ್ಥಗಳು.

ಸಿರಿಧಾನ್ಯಗಳು ಪೋಷಕಾಂಶದಲ್ಲಿ ಶ್ರೇಷ್ಠವಾಗಿದ್ದರೂ ಸಹ ಅದರ ಬಳಕೆ ಮಾರುಕಟ್ಟೆಯಲ್ಲಿ ಕ್ರಮೇಣ ಇಳಿಮುಖವಾಗಿದೆ. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ನಗರ ಪ್ರದೇಶದಲ್ಲಿ ಅವುಗಳ ಬಳಕೆಯನ್ನು ಹೆಚ್ಚಿಸಬಹುದು. ಪ್ರಾಥಮಿಕವಾಗಿ ಮೌಲ್ಯವರ್ಧನೆಯು ಸಿರಿಧಾನ್ಯಗಳ ಬೇಡಿಕೆ ಮತ್ತು ಬಳಕೆಯನ್ನು ಹೆಚ್ಚಿಸುತ್ತದೆ. ಕಿರಿಧಾನ್ಯಗಳನ್ನು ಸಾಂಪ್ರದಾಯಿಕ ಉತ್ಪನ್ನಗಳು, ಪಾಸ್ತಾ ಉತ್ಪನ್ನಗಳು, ಬೇಕರಿ ಉತ್ಪನ್ನಗಳು ಮತ್ತು ತ್ವರಿತ ಆಹಾರ ಮಿಶ್ರಣಗಳ ತಯಾರಿಕೆಯಲ್ಲಿ ಬಳಸಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ.

Ramesh Babu

Journalist

Recent Posts

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

2 hours ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

7 hours ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

1 day ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

2 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

2 days ago

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

2 days ago