ಸಾಸಲು ಹೋಬಳಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ..! ಚನ್ನವೀರನಹಳ್ಳಿಯಲ್ಲಿ ಹೊಸದಾಗಿ ಪದವಿಪೂರ್ವ ಕಾಲೇಜು ಪ್ರಾರಂಭ: 2026-27ನೇ ಸಾಲಿನ ದಾಖಲಾತಿ ಶುರು

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಈ ವರ್ಷದಿಂದ ಚನ್ನವೀರನಹಳ್ಳಿಯಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜು ಆರಂಭವಾಗಿದೆ. ಇಂದಿನಿಂದಲೇ ದಾಖಲಾತಿ ಪ್ರಕ್ರಿಯೆ ಶುರುವಾಗಿದೆ. ಈ ಕಾಲೇಜು ಆರಂಭದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ದೂರದ ಊರುಗಳಿಗೆ ಹೋಗುವ ಅಗತ್ಯತೆಯನ್ನು ದೂರ ಮಾಡಿದೆ.

ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಉತ್ತಮ ಫಲಿತಾಂಶ ದೊರೆತಿದೆ. ತಾಲೂಕಿನಿಂದ ಅತೀ ದೂರವಿರುವ ಸಾಸಲು ಹೋಬಳಿಯಲ್ಲಿ ಇಷ್ಟು ವರ್ಷ ಸರ್ಕಾರಿ, ಸರ್ಕಾರ ಅನುದಾನಿತ, ಖಾಸಗಿ ಪಿಯು ಕಾಲೇಜು ಇರಲಿಲ್ಲ. ಇದೇ ಮೊದಲ ಬಾರಿಗೆ ಚನ್ನವೀರನಹಳ್ಳಿ ಪ್ರೌಢಶಾಲೆಯಲ್ಲಿ ಪಿಯು ಕಾಲೇಜು ಮಂಜೂರಾಗಿದೆ. 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಗೆ ದಾಖಲಾತಿಗಳು ಪ್ರಾರಂಭಗೊಂಡಿವೆ. ಬಾಶೆಟ್ಟಿಹಳ್ಳಿಯಲ್ಲಿ ಈಗಾಗಲೇ ಇರುವ ಸರಕಾರಿ ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಶೈಕ್ಷಣಿಕ ವರ್ಷದಿಂದ ಸೈನ್ಸ್‌ ಮತ್ತು ಕಾಮರ್ಸ್‌ಗೆ ದಾಖಲಾತಿ ಆರಂಭಗೊಂಡಿದೆ. ಅಲ್ಲದೇ, ಕ್ಷೇತ್ರದಲ್ಲಿನ ಕೊನಘಟ್ಟ, ಮಾದಗೊಂಡನಹಳ್ಳಿ, ಮಧುರೆ ಮತ್ತು ದೊಡ್ಡಬೆಳವಂಗಲದಲ್ಲಿನ ಸರ್ಕಾರಿ ಪಿಯು ಕಾಲೇಜುಗಳಲ್ಲೂ ಉತ್ತಮ ಸೌಕರ್ಯ ಲಭ್ಯವಿದ್ದು, ಪೋಷಕರು ಒಮ್ಮೆ ತಮ್ಮ ಹತ್ತಿರದ ಈ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ, ಶಿಕ್ಷಕರ ವಿದ್ಯಾರ್ಹತೆ, ಪ್ರತಿ ವರ್ಷದ ಉತ್ತಮ ಫಲಿತಾಂಶ ಎಲ್ಲವನ್ನೂ ಗಮನಿಸಿ, ನಿಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜುಗಳಿಗೆ ದಾಖಲಿಸಿ ಎಂದು ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದ್ದಾರೆ.

ಚೆನ್ನವೀರನಹಳ್ಳಿ ಗ್ರಾಮಸ್ಥರು ಮಾತನಾಡಿ, ಸಾಸಲು ಹೋಬಳಿ ತಾಲೂಕು ಕೇಂದ್ರದಿಂದ ಸುಮಾರು 28 ಕಿಮೀ ದೂರದಲ್ಲಿದೆ. ಈ ಹೋಬಳಿಯಲ್ಲಿ ಸುಮಾರು 58 ಹಳ್ಳಿಗಳಿವೆ. ಇಲ್ಲಿ ಯಾವುದೇ ಖಾಸಗಿ, ಸರ್ಕಾರಿ, ಸರ್ಕಾರ ಅನುದಾನಿತ ಪಿಯು ಕಾಲೇಜುಗಳು ಇರಲಿಲ್ಲ. ಪಿಯು ಕಾಲೇಜು ಆರಂಭಕ್ಕೆ ಹಲವು ಮನವಿಗಳನ್ನು ಸಂಬಂಧಪಟ್ಟವರಿಗೆ ನೀಡಲಾಗಿತ್ತು. ಈ ಗ್ರಾಮಗಳ ವಿದ್ಯಾರ್ಥಿಗಳು ಪ್ರೌಢ ಶಾಲೆ ಮುಗಿಸಿ ಪಿಯು ವಿದ್ಯಾಭ್ಯಾಸಕ್ಕಾಗಿ ದೂರದ ಊರುಗಳಿಗೆ ಹೋಗಬೇಕಾಗಿತ್ತು. ಸಾಸಲು ಹೋಬಳಿ ಕೇಂದ್ರದಿಂದ 28 ಕಿಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ಸರ್ಕಾರಿ ಪಿಯು ಕಾಲೇಜು, 17 ಕಿ.ಮೀ ದೂರದ ದೊಡ್ಡಬೆಳವಂಗಲ ಸರ್ಕಾರಿ ಪಿಯು ಕಾಲೇಜು, 15 ಕಿ.ಮೀ ದೂರದ ಕೋಳಾಲ ಸರ್ಕಾರಿ ಪಿಯು ಕಾಲೇಜುಗಳಿಗೆ ಹೋಗಬೇಕಾಗಿತ್ತು. ಇದರಿಂದ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೀಗ ಚನ್ನವೀರನಹಳ್ಳಿಯಲ್ಲಿ ಪಿಯು ಕಾಲೇಜು ಆರಂಭದಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ನಮ್ಮ ಹೋಬಳಿಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚನ್ನವೀರನಹಳ್ಳಿ ಪ್ರೌಢಶಾಲೆಯಲ್ಲಿ ಪಿಯು ಕಾಲೇಜು ಆರಂಭಗೊಂಡಿರುವುದು ಸಂಸತಸದ ಸಂಗತಿ. ಸದ್ಯ ವಾಣಿಜ್ಯ ವಿಭಾಗ ಮಾತ್ರ ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ಕಲಾ ವಿಭಾಗವನ್ನು ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ ಎಂದು ವಿದ್ಯಾರ್ಥಿ ರಂಜಿತ್ ಹೇಳಿದರು..

ಶ್ರೀರಾಮನಹಳ್ಳಿ ಗ್ರಾಮಸ್ಥರು 2020ನೇ ಸಾಲಿನಲ್ಲೇ ಪದವಿ ಪೂರ್ವ ಕಾಲೇಜು ಬೇಕೆಂದು ಮನವಿ ಕೊಟ್ಟಿದ್ದರು

ಹಲವಾರು ವರ್ಷಗಳ ಸತತ ಪ್ರಯತ್ನದಿಂದ ಸಾಸಲು ಹೋಬಳಿಯಲ್ಲಿ ಪಿಯು ಕಾಲೇಜು ಪ್ರಾರಂಭವಾಗಿದೆ. ಇದಕ್ಕೆ ಸಹಕಾರ ನೀಡಿದ ಶಾಸಕ ಧೀರಜ್ ಮುನಿರಾಜ್, ಸ್ಥಳೀಯರಿಗೆ ಧನ್ಯವಾದಗಳು. ಕಾಲೇಜು ಪ್ರಾರಂಭವಾಗಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಇಂದಿನಿಂದ ದಾಖಲಾತಿಗಳು ಪ್ರಾರಂಭವಾಗಿವೆ. ನುರಿತ ಉಪನ್ಯಾಕರಿದ್ದಾರೆ. ವಾಣಿಜ್ಯ ಕೋರ್ಸ್( ಅರ್ಥಶಾಸ್ತ್ರ, ವ್ಯವಹಾರಿಕ ಅಧ್ಯಯನ, ಲೆಕ್ಕಶಾಸ್ತ್ರ, ಗಣಕ ವಿಜ್ಞಾನ (EBACs) ಪ್ರಾರಂಭಿಸಲಾಗಿದೆ. ಮುಂದಿನ‌ ದಿನಗಳಲ್ಲಿ ಕಲಾ ವಿಭಾಗ, ವಿಜ್ಞಾನ ಕೋರ್ಸ್ ಗಳನ್ನು ಪ್ರಾರಂಭಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ ಎಂದು ಪ್ರಾಂಶುಪಾಲ ಕೇಶವಮೂರ್ತಿ ತಿಳಿಸಿದ್ದಾರೆ…

Ramesh Babu

Journalist

Recent Posts

ಭಾರತದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರವಾಸದ ನೆನಪುಗಳು…..

ಕಾಶ್ಮೀರ ಮತ್ತು ಕನ್ಯಾಕುಮಾರಿ...... ಭಾರತದ ಉತ್ತರ ಮತ್ತು ದಕ್ಷಿಣ ಧ್ರುವ ಪ್ರವಾಸದ ನೆನಪುಗಳು..... ಕನ್ಯಾಕುಮಾರಿ, ಧ್ಯಾನ, ಸ್ವಾಮಿ ವಿವೇಕಾನಂದ, ಕಾಶ್ಮೀರ,…

9 hours ago

ಶ್ರೀ ಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಎಣಿಕೆ: 79,72,502 ಕಾಣಿಕೆ ಸಂಗ್ರಹ

ದೊಡ್ಡಬಳ್ಳಾಪುರ ತಾಲೂಕಿನ ನಾಗಾರಾಧನೆಗೆ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ‌…

1 day ago

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅಂಗೀಕಾರ: ಸಚಿವ ಸಂಪುಟವನ್ನೂ ತಕ್ಷಣ ಜಾರಿಗೆ ಬರುವಂತೆ ವಿಸರ್ಜನೆ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಗೀಕರಿಸಿದ್ದಾರೆ.‌‌ ಜೊತೆಗೆ ಸಿದ್ದರಾಮಯ್ಯ…

1 day ago

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು…..

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು,.. ಕರ್ನಾಟಕ ಮತ್ತು ಭಾರತದ ಈ 25 ವರ್ಷಗಳಲ್ಲಿ ಆಗಿದ್ದೇನು...... 2000/2025......…

1 day ago

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ರಾಜ್ಯದ ಜನತೆಗೆ ಸಿದ್ದು ಕೃತಜ್ಞತೆ ಸಲ್ಲಿಕೆ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ: ರಾಜ್ಯದ ಜನತೆಗೆ ಸಿದ್ದು ಕೃತಜ್ಞತೆಯ ಮಾತು * ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ…

2 days ago

ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ- ಶಾಸಕ ಬೇಳೂರು ಗೋಪಾಲಕೃಷ್ಣ

ಬೆಂಗಳೂರು ಗ್ರಾಮಾಂತರ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ, ಶಾಸಕ ಬೇಳೂರು ಗೋಪಾಲಕೃಷ್ಣ ಮಹತ್ವದ ಹೇಳಿಕೆ ನೀಡಿದ್ದಾರೆ.…

2 days ago