ಕಾರಿನಲ್ಲಿ ಮಹಿಳೆ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗಂಡನಿಗೆ ಮೋಸ ಮಾಡಲ್ಲ ಎಂದಿದ್ದ ಮಹಿಳೆಗೆ ಬೆಂಕಿಯಿಟ್ಟ ಪ್ರಿಯಕರ

ದೊಡ್ಡಬಳ್ಳಾಪುರ: ಆಕೆ ಪ್ರತಿನಿತ್ಯ ಮಕ್ಕಳಿಗೆ ಜೀವನ ಪಾಠ ಹೇಳಿಕೊಡುತ್ತಿದ್ದ ಉಪನ್ಯಾಸಕಿ. ಗಂಡನ ಜೊತೆಯಲ್ಲಿ ಇಬ್ಬರ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಮಹಿಳೆಗೆ ಪರ ಪುರುಷನ ವ್ಯಾಮೋಹವಾಗಿದೆ. ಆಕೆ ಮಾಡಿದ ಆ ಒಂದು ಎಡವಟ್ಟಿನಿಂದ ಶವ ಸಂಸ್ಕಾರ ಮಾಡಲು ಶವವೇ ಸಿಗದ ರೀತಿ ಪ್ರಿಯಕರ ಕೈಯಲ್ಲಿ ಕೊಲೆಯಾಗಿ ಸುಟ್ಟು ಭಸ್ಮವಾಗಿದ್ದಾಳೆ. ಅಕ್ರಮ ಸಂಬಂಧ ಬೇಡ ಮದುವೆ ಆಗೋಣ ಅಂದಾಗ ನಾನು ಆಗಲ್ಲ ಅಂದಿದಕ್ಕೆ, ಕುಪಿತಗೊಂಡ ವ್ಯಕ್ತಿ ಮಹಿಳೆಯನ್ನ ಕೊಲೆ ಮಾಡಿ ಆತನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು…ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕೆಜಿ ಕುಂಟನಹಳ್ಳಿ ಬಳಿ ನಿರ್ಜನ‌ ಪ್ರದೇಶದಲ್ಲಿ ಮೇ.2ರ ಮಧ್ಯಾಹ್ನ ಕಾರೊಂದು ಧಗಧಗ ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡುಬಂದಿತ್ತು. ಸ್ಥಳಕ್ಕೆ ಪೊಲೀಸರು‌, ಅಗ್ನಿಶಾಮಕ‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುವಷ್ಟರಲ್ಲಿ ಕಾರೆಲ್ಲಾ ಸುಟ್ಟು ಬೂದಿಯಾಗಿತ್ತು. ಒಳಹೊಕ್ಕು ನೋಡಿದಾಗ ಕಾರಿನ ಒಳಗೆ ಓರ್ವ ಮಹಿಳೆಯ ತಲೆ ಬುರುಡೆ, ಅರೆಬರೆ ಬೆಂದ ಕೈ ಕಾಲುಗಳು, ಎಲುಬುಗಳು, ತಲೆ ಬುರುಡೆ ಸುಟ್ಟರೂ ಕತ್ತಲ್ಲಿ ಹಾಗೆ ಉಳಿದಿರುವ ಮಾಂಗಲ್ಯ ಸರ ಕಂಡುಬಂದಿತ್ತು.

ಆದರೆ, ಕಾರಿನ ಡ್ರೈವರ್ ಮಾತ್ರ ನೀಲಗಿರಿ ತೋಪಿನಲ್ಲಿ ತನ್ನ ಮೊಬೈಲ್, ಶರ್ಟ್ ಬಿಟ್ಟು ಪರಾರಿಯಾಗಿದ್ದ. ಆಗ ಎಲ್ಲರಲ್ಲಿ ಅನುಮಾನ ಶುರುವಾಗಿತ್ತು. ಸಾವನಪ್ಪಿರುವ ಮಹಿಳೆ ಹೆಸರು, ಊರು, ಕಾರಿನ ಡ್ರೈವರ್ ಯಾರು, ಕಾರಿನ ಮಾಲೀಕನ ಹೆಸರು, ಇಲ್ಲಿಗೆ ಏಕೆ ಬಂದಿದ್ದರು. ಘಟನೆ ಇತರೆ ಕಾರಣಗಳನ್ನು ಪೊಲೀಸರಿಂದ ತನಿಖೆ ಶುರುವಾಗಿತ್ತು. ಅಷ್ಟರಲ್ಲಿ ಮಹಿಳೆ ಜೊತೆ ಇದ್ದ ವ್ಯಕ್ತಿ ಕೂಡ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ತಿಳಿದುಬಂದಿತ್ತು.

ಇಬ್ಬರು ಸತ್ತ ಮೇಲೆ ಪೊಲೀಸ್ ತನಿಖೆಯಿಂದ ಅಸಲಿ ಸತ್ಯ ಹೊರಬಂದಿದೆ… ಸುಟ್ಟು ಬೂದಿಯಾದ ಮಹಿಳೆಯ ಹೆಸರು ಸರೋಜಾ(35). ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹೆಸರು ಮಾರಸಂದ್ರ ಗ್ರಾಮದ ರಾಮಾಂಜಿನಪ್ಪ.

ಸರೋಜಾ ವೃತ್ತಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಗಂಡನಿಗೆ ಹಲ್ಲಿನ ಸಮಸ್ಯೆಯಿದೆ, ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿ ಮನೆಯಿಂದ ಬಸ್ ನಿಲ್ದಾಣಕ್ಕೆ ಡ್ರಾಪ್ ಹಾಕಿಸಿಕೊಂಡು, ಬಸ್ ಹತ್ತಿದವಳು, ಮಾರ್ಗ ಮಧ್ಯದಲ್ಲಿ ಪ್ರಿಯಕರ ರಾಮಾಂಜಿನಪ್ಪ ಜೊತೆಯಲ್ಲಿ ಕಾರಿನಲ್ಲಿ ಹೊರಟು‌ ನೇರವಾಗಿ ಮಾರಸಂದ್ರ ಮಾರ್ಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಕೆಜಿ ಕುಂಟನಹಳ್ಳಿ ಬಳಿ ನಿರ್ಜನ‌ ಪ್ರದೇಶಕ್ಕೆ ಬಂದು ಪ್ರಿಯಕರನ ಜೊತೆಯಲ್ಲಿ ಏಕಾಂತ ಕಳೆದಿದ್ದರು..ರಾಮಾಂಜಿನಪ್ಪ ಜೊತೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ಈಕೆಗೆ ಅನೈತಿಕ ಸಂಬಂದವಿರುತ್ತದೆ. ಸರೋಜಾ ಗಂಡ ಏರ್ಪೋರ್ಟ್ ನಲ್ಲಿ ಕೆಲಸ ಮಾಡುವ ಹಿನ್ನಲೆ, ಈಕೆ ರಾಮಾಂಜಿನಪ್ಪ ಜೊತೆಯಲ್ಲಿ ಆಗಾಗ ಪಲ್ಲಂಗದಾಟ ಆಡುತ್ತಿದ್ದಳಂತೆ.

ಮೃತ ಸರೋಜಾ ಹಾಗೂ ರಾಮಾಂಜಿನಪ್ಪ ಅನೈತಿಕ ಸಂಬಂಧ ಹೊಂದಿದ್ದ ಕಾರಣದಿಂದಾಗಿ ಕಳೆದ 4 ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಬಳಿಕ ಸುಜಾತಳಿಗೂ ಗಂಡನ ಬಿಟ್ಟು ಬರುವಂತೆ ಟಾರ್ಚರ್ ಮಾಡುತ್ತಿದ್ದ. ಆದರೆ ಸರೋಜಾ ಗಂಡನ ಬಿಟ್ಟು ಬರಲು ಒಪ್ಪಿರಲಿಲ್ಲ. ಸಿಟ್ಟಿನಲ್ಲಿ ಏ.2ರಂದು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳನ್ನು ಹೊಡೆದು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದ. ಓಡುವ ಆತುರದಲ್ಲಿ ಪಕ್ಕದಲ್ಲೇ ಇದ್ದ ನೀಲಗಿರಿ ತೋಪಿನಲ್ಲಿ ತನ್ನ ಮೊಬೈಲ್, ಶರ್ಟ್ ಬಿಟ್ಟು ಪರಾರಿಯಾಗಿದ್ದನು.

ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಬಳಿಕ ಸುರೇಶ್ ಅವರ ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿತ್ತು. ಇದೀಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ನಂತರ ಪೊಲೀಸರಿಂದ ಮಾಹಿತಿ ತಿಳಿದ ಸರೋಜಾ ಗಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಒಟ್ಟಾರೆ ಆರೋಗ್ಯ ಸರಿ ಇಲ್ಲ ಎಂದು ಪಕ್ಕದ ಮನೆಯ ಸುರೇಶ್ ಎಂಬುವವರಿಗೆ ಸೇರಿದ್ದ ಕಾರನ್ನ ತೆಗೆದುಕೊಂಡು ಬಂದ ರಾಮಾಂಜಿನಪ್ಪ ಈ ರೀತಿ ಮಹಿಳೆಯನ್ನು ಕೊಲೆ ಮಾಡಿ ಬೆಂಕಿ ಇಟ್ಟಿದ್ದು ಮಾತ್ರ ವಿಪರ್ಯಾಸ. ಕಾರಿಗೆ ಬೆಂಕಿ ಬೀಳುತ್ತಿದ್ದಂತೆ ಕಾರಿನ ಮಾಲೀಕರಿಗೆ ಅಲರ್ಟ್ ಮೆಸೇಜ್ ಬಂದಿದ್ದು, ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಅಕ್ರಮ ಸಂಬಂಧಕ್ಕೆ ಇಬ್ಬರೂ ಈ ರೀತಿ ದುರಂತ ಅಂತ್ಯ ಕಂಡಿದ್ದು ಮಾತ್ರ ದುರ್ದೈವ. ಗಂಡ ಮಕ್ಕಳನ್ನು ಬಿಟ್ಟು ಅಡ್ಡ ದಾರಿ ಹಿಡಿಯುವ ಹೆಂಗಸರಿಗೆ ಇದೊಂದು ಪಾಠ ಎನ್ನುತ್ತಿದ್ದಾರೆ ಸಾರ್ವಜನಿಕರು.

Ramesh Babu

Journalist

Recent Posts

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

8 minutes ago

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

1 day ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

1 day ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

2 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

3 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

3 days ago