ಕಾರಿನಲ್ಲಿ ಮಹಿಳೆ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗಂಡನಿಗೆ ಮೋಸ ಮಾಡಲ್ಲ ಎಂದಿದ್ದ ಮಹಿಳೆಗೆ ಬೆಂಕಿಯಿಟ್ಟ ಪ್ರಿಯಕರ

ದೊಡ್ಡಬಳ್ಳಾಪುರ: ಆಕೆ ಪ್ರತಿನಿತ್ಯ ಮಕ್ಕಳಿಗೆ ಜೀವನ ಪಾಠ ಹೇಳಿಕೊಡುತ್ತಿದ್ದ ಉಪನ್ಯಾಸಕಿ. ಗಂಡನ ಜೊತೆಯಲ್ಲಿ ಇಬ್ಬರ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದ ಮಹಿಳೆಗೆ ಪರ ಪುರುಷನ ವ್ಯಾಮೋಹವಾಗಿದೆ. ಆಕೆ ಮಾಡಿದ ಆ ಒಂದು ಎಡವಟ್ಟಿನಿಂದ ಶವ ಸಂಸ್ಕಾರ ಮಾಡಲು ಶವವೇ ಸಿಗದ ರೀತಿ ಪ್ರಿಯಕರ ಕೈಯಲ್ಲಿ ಕೊಲೆಯಾಗಿ ಸುಟ್ಟು ಭಸ್ಮವಾಗಿದ್ದಾಳೆ. ಅಕ್ರಮ ಸಂಬಂಧ ಬೇಡ ಮದುವೆ ಆಗೋಣ ಅಂದಾಗ ನಾನು ಆಗಲ್ಲ ಅಂದಿದಕ್ಕೆ, ಕುಪಿತಗೊಂಡ ವ್ಯಕ್ತಿ ಮಹಿಳೆಯನ್ನ ಕೊಲೆ ಮಾಡಿ ಆತನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು…ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕೆಜಿ ಕುಂಟನಹಳ್ಳಿ ಬಳಿ ನಿರ್ಜನ‌ ಪ್ರದೇಶದಲ್ಲಿ ಮೇ.2ರ ಮಧ್ಯಾಹ್ನ ಕಾರೊಂದು ಧಗಧಗ ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡುಬಂದಿತ್ತು. ಸ್ಥಳಕ್ಕೆ ಪೊಲೀಸರು‌, ಅಗ್ನಿಶಾಮಕ‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುವಷ್ಟರಲ್ಲಿ ಕಾರೆಲ್ಲಾ ಸುಟ್ಟು ಬೂದಿಯಾಗಿತ್ತು. ಒಳಹೊಕ್ಕು ನೋಡಿದಾಗ ಕಾರಿನ ಒಳಗೆ ಓರ್ವ ಮಹಿಳೆಯ ತಲೆ ಬುರುಡೆ, ಅರೆಬರೆ ಬೆಂದ ಕೈ ಕಾಲುಗಳು, ಎಲುಬುಗಳು, ತಲೆ ಬುರುಡೆ ಸುಟ್ಟರೂ ಕತ್ತಲ್ಲಿ ಹಾಗೆ ಉಳಿದಿರುವ ಮಾಂಗಲ್ಯ ಸರ ಕಂಡುಬಂದಿತ್ತು.

ಆದರೆ, ಕಾರಿನ ಡ್ರೈವರ್ ಮಾತ್ರ ನೀಲಗಿರಿ ತೋಪಿನಲ್ಲಿ ತನ್ನ ಮೊಬೈಲ್, ಶರ್ಟ್ ಬಿಟ್ಟು ಪರಾರಿಯಾಗಿದ್ದ. ಆಗ ಎಲ್ಲರಲ್ಲಿ ಅನುಮಾನ ಶುರುವಾಗಿತ್ತು. ಸಾವನಪ್ಪಿರುವ ಮಹಿಳೆ ಹೆಸರು, ಊರು, ಕಾರಿನ ಡ್ರೈವರ್ ಯಾರು, ಕಾರಿನ ಮಾಲೀಕನ ಹೆಸರು, ಇಲ್ಲಿಗೆ ಏಕೆ ಬಂದಿದ್ದರು. ಘಟನೆ ಇತರೆ ಕಾರಣಗಳನ್ನು ಪೊಲೀಸರಿಂದ ತನಿಖೆ ಶುರುವಾಗಿತ್ತು. ಅಷ್ಟರಲ್ಲಿ ಮಹಿಳೆ ಜೊತೆ ಇದ್ದ ವ್ಯಕ್ತಿ ಕೂಡ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ತಿಳಿದುಬಂದಿತ್ತು.

ಇಬ್ಬರು ಸತ್ತ ಮೇಲೆ ಪೊಲೀಸ್ ತನಿಖೆಯಿಂದ ಅಸಲಿ ಸತ್ಯ ಹೊರಬಂದಿದೆ… ಸುಟ್ಟು ಬೂದಿಯಾದ ಮಹಿಳೆಯ ಹೆಸರು ಸರೋಜಾ(35). ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹೆಸರು ಮಾರಸಂದ್ರ ಗ್ರಾಮದ ರಾಮಾಂಜಿನಪ್ಪ.

ಸರೋಜಾ ವೃತ್ತಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಗಂಡನಿಗೆ ಹಲ್ಲಿನ ಸಮಸ್ಯೆಯಿದೆ, ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿ ಮನೆಯಿಂದ ಬಸ್ ನಿಲ್ದಾಣಕ್ಕೆ ಡ್ರಾಪ್ ಹಾಕಿಸಿಕೊಂಡು, ಬಸ್ ಹತ್ತಿದವಳು, ಮಾರ್ಗ ಮಧ್ಯದಲ್ಲಿ ಪ್ರಿಯಕರ ರಾಮಾಂಜಿನಪ್ಪ ಜೊತೆಯಲ್ಲಿ ಕಾರಿನಲ್ಲಿ ಹೊರಟು‌ ನೇರವಾಗಿ ಮಾರಸಂದ್ರ ಮಾರ್ಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಕೆಜಿ ಕುಂಟನಹಳ್ಳಿ ಬಳಿ ನಿರ್ಜನ‌ ಪ್ರದೇಶಕ್ಕೆ ಬಂದು ಪ್ರಿಯಕರನ ಜೊತೆಯಲ್ಲಿ ಏಕಾಂತ ಕಳೆದಿದ್ದರು..ರಾಮಾಂಜಿನಪ್ಪ ಜೊತೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ಈಕೆಗೆ ಅನೈತಿಕ ಸಂಬಂದವಿರುತ್ತದೆ. ಸರೋಜಾ ಗಂಡ ಏರ್ಪೋರ್ಟ್ ನಲ್ಲಿ ಕೆಲಸ ಮಾಡುವ ಹಿನ್ನಲೆ, ಈಕೆ ರಾಮಾಂಜಿನಪ್ಪ ಜೊತೆಯಲ್ಲಿ ಆಗಾಗ ಪಲ್ಲಂಗದಾಟ ಆಡುತ್ತಿದ್ದಳಂತೆ.

ಮೃತ ಸರೋಜಾ ಹಾಗೂ ರಾಮಾಂಜಿನಪ್ಪ ಅನೈತಿಕ ಸಂಬಂಧ ಹೊಂದಿದ್ದ ಕಾರಣದಿಂದಾಗಿ ಕಳೆದ 4 ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಬಳಿಕ ಸುಜಾತಳಿಗೂ ಗಂಡನ ಬಿಟ್ಟು ಬರುವಂತೆ ಟಾರ್ಚರ್ ಮಾಡುತ್ತಿದ್ದ. ಆದರೆ ಸರೋಜಾ ಗಂಡನ ಬಿಟ್ಟು ಬರಲು ಒಪ್ಪಿರಲಿಲ್ಲ. ಸಿಟ್ಟಿನಲ್ಲಿ ಏ.2ರಂದು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳನ್ನು ಹೊಡೆದು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದ. ಓಡುವ ಆತುರದಲ್ಲಿ ಪಕ್ಕದಲ್ಲೇ ಇದ್ದ ನೀಲಗಿರಿ ತೋಪಿನಲ್ಲಿ ತನ್ನ ಮೊಬೈಲ್, ಶರ್ಟ್ ಬಿಟ್ಟು ಪರಾರಿಯಾಗಿದ್ದನು.

ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಬಳಿಕ ಸುರೇಶ್ ಅವರ ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿತ್ತು. ಇದೀಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ನಂತರ ಪೊಲೀಸರಿಂದ ಮಾಹಿತಿ ತಿಳಿದ ಸರೋಜಾ ಗಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಒಟ್ಟಾರೆ ಆರೋಗ್ಯ ಸರಿ ಇಲ್ಲ ಎಂದು ಪಕ್ಕದ ಮನೆಯ ಸುರೇಶ್ ಎಂಬುವವರಿಗೆ ಸೇರಿದ್ದ ಕಾರನ್ನ ತೆಗೆದುಕೊಂಡು ಬಂದ ರಾಮಾಂಜಿನಪ್ಪ ಈ ರೀತಿ ಮಹಿಳೆಯನ್ನು ಕೊಲೆ ಮಾಡಿ ಬೆಂಕಿ ಇಟ್ಟಿದ್ದು ಮಾತ್ರ ವಿಪರ್ಯಾಸ. ಕಾರಿಗೆ ಬೆಂಕಿ ಬೀಳುತ್ತಿದ್ದಂತೆ ಕಾರಿನ ಮಾಲೀಕರಿಗೆ ಅಲರ್ಟ್ ಮೆಸೇಜ್ ಬಂದಿದ್ದು, ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಅಕ್ರಮ ಸಂಬಂಧಕ್ಕೆ ಇಬ್ಬರೂ ಈ ರೀತಿ ದುರಂತ ಅಂತ್ಯ ಕಂಡಿದ್ದು ಮಾತ್ರ ದುರ್ದೈವ. ಗಂಡ ಮಕ್ಕಳನ್ನು ಬಿಟ್ಟು ಅಡ್ಡ ದಾರಿ ಹಿಡಿಯುವ ಹೆಂಗಸರಿಗೆ ಇದೊಂದು ಪಾಠ ಎನ್ನುತ್ತಿದ್ದಾರೆ ಸಾರ್ವಜನಿಕರು.

Ramesh Babu

Journalist

Recent Posts

ತಿರುವಿನಲ್ಲಿ ಚಾಲಕನ‌ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿ

ತಿರುವಿನಲ್ಲಿ ಚಾಲಕನ‌ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಕ್ರಾಸ್ ಬಳಿ ನಡೆದಿದೆ... ನೆಲಮಂಗಲದಿಂದ…

2 hours ago

ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು……

ಸ್ವಲ್ಪ ಯೋಚಿಸಿ........ ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು...... ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ…

4 hours ago

ಸಾಸಲು ಹೋಬಳಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ..! ಚನ್ನವೀರನಹಳ್ಳಿಯಲ್ಲಿ ಹೊಸದಾಗಿ ಪದವಿಪೂರ್ವ ಕಾಲೇಜು ಪ್ರಾರಂಭ: 2026-27ನೇ ಸಾಲಿನ ದಾಖಲಾತಿ ಶುರು

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಈ ವರ್ಷದಿಂದ ಚನ್ನವೀರನಹಳ್ಳಿಯಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜು ಆರಂಭವಾಗಿದೆ.…

21 hours ago

ಪರ್ಯಾಯ ರಾಜಕೀಯ ಶಕ್ತಿಯ ನಿರೀಕ್ಷೆಯಲ್ಲಿ ಕನ್ನಡಿಗರು….

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ....... ( ಲೇಖನ ಸ್ವಲ್ಪ ದೀರ್ಘವಾಗಿದೆ. ವಿಷಯದ ಮಹತ್ವದ ದೃಷ್ಟಿಯಿಂದ ಹೆಚ್ಚು ವಿವರಣೆ ನೀಡಲಾಗಿದೆ. )…

1 day ago

ಅನಾಥರು, ಅಶಕ್ತ ಹೆಣ್ಣು ಮಕ್ಕಳಿಗೆ ಯುವಿಕಾ ವರದಾನ

ಸಮಾಜದ ಭವಿಷ್ಯವನ್ನು ರೂಪಿಸುವಲ್ಲಿ ಮಕ್ಕಳ ರಕ್ಷಣೆ ಮತ್ತು ಶಿಕ್ಷಣದ ಪಾತ್ರ ಅತೀವ ಮಹತ್ವದ್ದಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ದಾರಿಯಲ್ಲಿ…

2 days ago

ಮೇ.8ರಂದು ಜೆಡಿಎಸ್ ರಜತ ಮಹೋತ್ಸವ: ನಿಖಿಲ್ ಕುಮಾರಸ್ವಾಮಿ ಭಾಗಿ- ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡ

ದೊಡ್ಡಬಳ್ಳಾಪುರ: ನಾಡಿನ ಜನರ ನಾಡಿ ಮಿಡಿತವನ್ನು ಅರಿತು ಪ್ರಾದೇಶಿಕವಾಗಿ ಅಭಿವೃದ್ಧಿ ಹೊಂದಲು ಜೆಡಿಎಸ್ ಪಕ್ಷ ಸ್ಥಾಪನೆಯಾಗಿದೆ. ಮೇ.8ಕ್ಕೆ 25 ವರ್ಷಗಳನ್ನು…

2 days ago