Categories: ಲೇಖನ

ಸಮಾಜವನ್ನು ಒಂದಷ್ಟು ಮೌಲ್ಯಯುತವಾಗಿ ಕಟ್ಟಲು ಪ್ರಯತ್ನಿಸಿ…. ಕೆಟ್ಟ ಹಣದ ಮಹತ್ವ ಕಡಿಮೆ ಮಾಡೋಣ…..

” ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ…..”

ಮೈಕ್ರೋ ಫೈನಾನ್ಸ್ ಅಂದರೆ ಸಣ್ಣ ಹಣಕಾಸು ಖಾಸಗಿ ಸಂಸ್ಥೆಗಳು ಮಾಡುತ್ತಿರುವ ದೌರ್ಜನ್ಯ ಕುರಿತಾಗಿ ಇತ್ತೀಚೆಗೆ ಮಾಧ್ಯಮಗಳು ಜನರ ಮತ್ತು ಸರ್ಕಾರದ ಗಮನ ಸೆಳೆಯುತ್ತಿವೆ….

ಹಣ ಎಂಬ ಮಾಧ್ಯಮ ಚಲಾವಣೆಗೆ ಬಂದ ನಂತರ ಮಾನವ ಜಗತ್ತು ಒಂದು ರೀತಿ ತೀವ್ರ ಬದಲಾವಣೆಯತ್ತ ಸಾಗಿತು. ಬಹುಶಃ ಅಲ್ಲಿಯವರೆಗೂ ಇದ್ದ ಮಾನವೀಯ ಸಂಬಂಧಗಳು, ವಸ್ತು ವಿನಿಮಯ ಸಂದರ್ಭದ ಭಾವನಾತ್ಮಕತೆ, ಹಣದ ಪ್ರಾರಂಭದೊಂದಿಗೆ ನಿಧಾನವಾಗಿ ಶಿಥಿಲವಾಗ ತೊಡಗಿ ಇದೀಗ “ಹಣವೇ ನಿನ್ನಯ ಗುಣ ” ಎನ್ನುವಲ್ಲಿಗೆ ಬಂದು ನಿಂತಿದೆ. ಎಲ್ಲ ಸಂಬಂಧಗಳನ್ನು ಹಣದಿಂದಲೇ ಅಳೆಯಲಾಗುತ್ತದೆ.

ಆದ್ದರಿಂದ ಹಣ ಈ ಸಮಾಜದ ಬಹುಮುಖ್ಯ ಜೀವ ದ್ರವ್ಯವಾಗಿದೆ. ಬಹುಶಃ ಗಾಳಿ, ನೀರು, ಆಹಾರ, ವಸತಿಯದು ಒಂದು ತೂಕವಾದರೆ, ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಅಜ್ಜ ಅಜ್ಜಿ ಮಗ ಮಗಳದು ಮತ್ತೊಂದು ತೂಕವಾದರೆ, ಅಧಿಕಾರ, ಅಂತಸ್ತು, ಒಡವೆ, ಜಮೀನು, ಆಸ್ತಿ, ವಾಹನಗಳದು ಮಗದೊಂದು ತೂಕದಾದರೆ, ಪ್ರೀತಿ ಪ್ರೇಮ ಪ್ರಣಯ ತ್ಯಾಗ ಕರುಣೆ ಕ್ಷಮೆ ಸಹಕಾರ ಸಮನ್ವಯಗಳದು ಇನ್ನೊಂದು ತೂಕವಾದರೆ, ಜಾಗತೀಕರಣದ ನಂತರ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ ಈ ಎಲ್ಲಾ ಭಾರಕ್ಕಿಂತ ಹಣವೆಂಬ ಭಾರವೇ ಅತ್ಯಂತ ಹೆಚ್ಚಾಗಿದೆ.

ಇಂತಹ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಎಂಬ ಸಾಲದ ಶೂಲ ಸಾಮಾನ್ಯ ಜನರನ್ನು ಹಿಂಡುತ್ತಿದೆ ಮತ್ತು ಇರಿಯುತ್ತಿದೆ. ಇದು ಶಾಕಿಂಗ್ ನ್ಯೂಸ್ ಅಥವಾ ಬ್ರೇಕಿಂಗ್ ನ್ಯೂಸ್ ಅಲ್ಲವೇ ಅಲ್ಲ. ಸೂಕ್ಷ್ಮ ಸಂವೇದನೆಯ ಎಲ್ಲರಿಗೂ ಅತ್ಯಂತ ಸಹಜ ಮತ್ತು ನಿರೀಕ್ಷಿತ. ಏಕೆಂದರೆ ಮನೆ ಮನೆಗೆ, ರಸ್ತೆ ರಸ್ತೆಗೆ ಸಾಲ ಬೇಕೆ ಸಾಲ ಬೇಕೆ ಎಂದು ಒತ್ತಾಯ ಮಾಡಿ ಸಾಲ ನೀಡಿ, ಕೊನೆಗೆ ಆ ಸಾಲ ವಸೂಲಿಗೆ ಅಮಾನುಷ ಕೃತ್ಯಗಳನ್ನು ಕೈಗೊಳ್ಳುತ್ತಾ ಇಡೀ ಸಮಾಜವೇ ಬಹುತೇಕ ಪ್ರತ್ಯಕ್ಷ ಅಥವಾ ಪರೋಕ್ಷ ಸಾಲದ ಬಲೆಯೊಳಗೆ ಸಿಲುಕಿದೆ.

ಇದನ್ನೇ ಬಹಳ ಹಿಂದೆ ಸರ್ವಜ್ಞ ಕವಿ ವಿವರಿಸಿದ್ದಾರೆ.

ಇದಕ್ಕೆ ಎರಡು ಮುಖವಿದೆ. ಮೊದಲನೆಯದಾಗಿ ದೇಶದ ಅಭಿವೃದ್ಧಿಗೆ ಇಂದಿನ ಆಧುನಿಕ ಕಾಲದಲ್ಲಿ ಹಣದ ಅರಿವು ಹೆಚ್ಚಾಗಿರಬೇಕಾಗುತ್ತದೆ. ಪ್ರತಿಯೊಬ್ಬರ ಅವಶ್ಯಕತೆಗಳಿಗೂ ಒಂದಷ್ಟು ಹಣ ಬೇಕಾಗುತ್ತದೆ. ಅದನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇದು ಒಂದು ಮುಖವಾದರೆ ಇನ್ನೊಂದು ಅವಶ್ಯಕತೆ ಇಲ್ಲದಿದ್ದರೂ ಮನುಷ್ಯನ ಸಹಜ ಸ್ವಭಾವವನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಒತ್ತಾಯಪೂರ್ವಕವಾಗಿ ಸಾಲ ನೀಡಿ ಕೊನೆಗೆ ಆ ಸಾಲದೊಂದಿಗೆ ಅವರನ್ನು ಶೂಲಕ್ಕೇರಿಸುವ ಆರ್ಥಿಕ ನೀತಿಗಳು.

ಇದನ್ನು ಚರ್ಚಿಸುತ್ತಾ ಹೋದರೆ ಇದೊಂದು ಬಗೆಹರಿಯದ ಸಮಸ್ಯೆಯಾಗಿದೆ. ಆಳುವ ಸರ್ಕಾರಗಳು ಜನರನ್ನು ನಿಯಂತ್ರಣದಲ್ಲಿಡಲು ಅವರ ಆರ್ಥಿಕ ಪರಿಸ್ಥಿತಿಯನ್ನು ಪರೋಕ್ಷವಾಗಿ ಸಾಲದ ಅನಿವಾರ್ಯ ಸ್ಥಿತಿಗೆ ತಳ್ಳುತ್ತಲೇ ಇರುತ್ತವೆ. ಅವರ ಅವಶ್ಯಕತೆಗಳನ್ನು ಹೆಚ್ಚಿಸುತ್ತಾ ಬೆಲೆಗಳು ಸದಾ ಗಗನ ಮುಖಿಯಾಗಿರುವಂತೆ ನೋಡಿಕೊಳ್ಳುತ್ತವೆ. ಇದಕ್ಕೆ ಬಂಡವಾಳಶಾಹಿ ವ್ಯವಸ್ಥೆ ಸದಾ ಪೂರಕವಾಗಿ ಕೆಲಸ ಮಾಡುತ್ತದೆ.

ಆದ್ದರಿಂದ ಇದನ್ನು ಅಷ್ಟು ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಏನೋ ನೆಪ ಮಾತ್ರಕ್ಕೆ ಕೆಲವು ಸುಧಾರಣಾ ಕಾನೂನುಗಳನ್ನು ತರಬಹುದಷ್ಟೇ. ಅದರಿಂದ ತೊಂದರೆಗಳು ಸ್ವಲ್ಪ ಕಡಿಮೆಯಾಗಬಹುದೇನೋ. ಎಲ್ಲಿಯವರೆಗೆ ಈ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹಣಕಾಸಿಗಿಂತ ಹೆಚ್ಚು ಮೇಲುಗೈ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಈ ರೀತಿಯ ಸಮಸ್ಯೆಗಳು ನಿರಂತರ.

ಯಾವುದೇ ಆರ್ಥಿಕ ತಜ್ಞರು, ಏನೇ ಯೋಜನೆಗಳನ್ನು ರೂಪಿಸಿದರು ಜನರ ಮಾನವೀಯ ಮೌಲ್ಯಗಳ ಅನುಷ್ಠಾನ ಸರಿಯಾಗಿ ಇಲ್ಲದಿದ್ದರೆ ಈ ರೀತಿಯ ಅವ್ಯವಸ್ಥೆ ಸದಾ ಮತ್ತು ನಿರಂತರವಾಗಿರುತ್ತದೆ. ಮನುಷ್ಯರ ವ್ಯಕ್ತಿತ್ವಗಳೇ ಸರಿ ಇಲ್ಲದಿದ್ದರೆ ಮೈಕ್ರೋ ಫೈನಾನ್ಸ್ ಅಥವಾ ಇನ್ನಾವುದೇ ಕ್ಷೇತ್ರಗಳು ಆರೋಗ್ಯಕರವಾಗಿರಲು ಸಾಧ್ಯವಿಲ್ಲ.

ವ್ಯಕ್ತಿಗಳು ಒಳ್ಳೆಯವರಾದರೆ ಮಾತ್ರ ಸಮಾಜ ಈ ರೀತಿಯ ಸಮಸ್ಯೆಗಳಿಂದ, ಗೊಂದಲಗಳಿಂದ ಮುಕ್ತವಾಗಲು ಸಾಧ್ಯ. ಇಲ್ಲದಿದ್ದರೆ “ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ” ಎಂಬಂತೆ ಸಾಲ, ಅವಮಾನ, ಆತ್ಮಹತ್ಯೆ, ದೌರ್ಜನ್ಯ ಇವೆಲ್ಲವೂ ನಡೆಯುತ್ತಲೇ ಇರುತ್ತದೆ. ಮೈಕ್ರೋ ಫೈನಾನ್ಸ್ ನಿಲ್ಲಿಸಿದರೂ ಕಷ್ಟ ಮುಂದುವರಿಸಿದರೂ ಕಷ್ಟ. ನಿಯಂತ್ರಣ ಹೇರಬಹುದು. ಕಳ್ಳರ ಸಂತೆಯಲ್ಲಿ ಅದು ಎಷ್ಟು ದಿನ, ಯಾವ ರೀತಿ ಪರಿಣಾಮ ಬೀರಬಹುದು ನೀವೇ ಯೋಚಿಸಿ. ಮನುಷ್ಯರ ಸ್ವಾರ್ಥದ ಅಭಿವೃದ್ಧಿಯ ಯೋಜನೆಗಳು ಭಸ್ಮಾಸುರನಂತೆ ತಮ್ಮ ನಾಶಕ್ಕೆ ತಾವೇ ಕಾರಣವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು.

ಒಮ್ಮೆ, ಮತ್ತೊಮ್ಮೆ ದಯವಿಟ್ಟು ಯೋಚಿಸಿ.
ಇಡೀ ಸಮಾಜವನ್ನು ಒಂದಷ್ಟು ಮೌಲ್ಯಯುತವಾಗಿ ಕಟ್ಟಲು ಪ್ರಯತ್ನಿಸೋಣ. ಕೆಟ್ಟ ಹಣದ ಮಹತ್ವವನ್ನು ಕಡಿಮೆ ಮಾಡೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡರಿಗೆ ಹುಟ್ಟುಹಬ್ಬದ ಸಂಭ್ರಮ: ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ MMS ಗ್ರೂಪ್ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಹುಟ್ಟುಹಬ್ಬ…

9 hours ago

ಬೆಂ. ಗ್ರಾ ಜಿಲ್ಲೆಯಲ್ಲಿ ಶೇ.87.44ರಷ್ಟು ಎನ್ಯುಮರೇಷನ್ ಫಾರ್ಮ್ ವಿತರಣೆ- ಡಿಸಿ ಡಾ.ಕೆ ಎನ್ ಅನುರಾಧ

ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೇಕಡ 87.44% ಗಣತಿ ನಮೂನೆ ಮತದಾರರಿಗೆ ವಿತರಿಸಲಾಗಿದೆ ಎಂದು…

11 hours ago

ವಸತಿ ಶಾಲೆಯಲ್ಲಿ ಅನುಮಾನಾಸ್ಪದ ವಿದ್ಯಾರ್ಥಿ ಸಾವು: ಶಿಕ್ಷಕರ ವಿರುದ್ಧ ಪೋಷಕರ ಆರೋಪ

ದೇವನಹಳ್ಳಿ: ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ…

12 hours ago

ಭ್ರಷ್ಟಾಚಾರ ಆರೋಪ: ಮೂವರು ಅಧಿಕಾರಿಗಳ 14 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ…

16 hours ago

2026ರಲ್ಲಿ ‘ಸೂಪರ್ ಎಲ್ ನಿನೊ’ ಆತಂಕ: ಭಾರತಕ್ಕೆ ಕಡಿಮೆ ಮಳೆ, ಕೃಷಿ ಮತ್ತು ಜಲಮೂಲಗಳ ಮೇಲೆ ಗಂಭೀರ ಪರಿಣಾಮದ ಎಚ್ಚರಿಕೆ

ನವದೆಹಲಿ: 2026ರಲ್ಲಿ ರೂಪುಗೊಳ್ಳುತ್ತಿರುವ "ಸೂಪರ್ ಎಲ್ ನಿನೊ" ಪರಿಣಾಮ ದೇಶದ ಮಾನ್ಸೂನ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ…

21 hours ago

‘SIR ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮ ಆರೋಪ: ಸಾಕ್ಷ್ಯಾಧಾರಗಳೊಂದಿಗೆ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು’- ಆರ್ ಅಶೋಕ್

ದೆಹಲಿಯಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರನ್ನು ಇಂದು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಶ್ರೀ…

1 day ago