Categories: ಲೇಖನ

ಸಕ್ರೀಯವಾಗಿರುವ ವೃತ್ತಿನಿರತರು……

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ……..

ಸಕ್ರೀಯವಾಗಿರುವ ವೃತ್ತಿನಿರತರು……..

ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು…..

ರಾಜಕಾರಣಿಗಳು 1%,
ಅಧಿಕಾರಿಗಳು 3%,
ನ್ಯಾಯಾಧೀಶರು
ಮತ್ತು ವಕೀಲರು .50%,
ಪತ್ರಕರ್ತರು .50%,
ಧರ್ಮಾಧಿಕಾರಿಗಳು .25%,
ವೈದ್ಯರು .15%,
ಪೋಲೀಸರು .50%,
ಶಿಕ್ಷಕರು .75%,
ತೆರಿಗೆ ಸಂಗ್ರಹಕಾರರು .15%,
ಲೆಕ್ಕಾಧಿಕಾರಿಗಳು .10%,
ಹೋರಾಟಗಾರರು .25%…..

ಬಹುಶಃ ಇನ್ನೊಂದಿಷ್ಟು ಇದಕ್ಕೆ ಸೇರಿಸಿದರು ಶೇಕಡಾ 10% ದಾಟುವುದಿಲ್ಲ.

ಇನ್ನುಳಿದ ಶೇಕಡಾ 90% ಮಕ್ಕಳು, ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ವ್ಯಾಪಾರಸ್ಥರು, ಚಾಲಕರು, ದರ್ಜಿಗಳು, ಪೂಜಾರಿಗಳು ಇತ್ಯಾದಿ ಇತ್ಯಾದಿ….

ಒಂದು ವೇಳೆ ಮೇಲಿನ ಶೇಕಡಾ 10% ಜನ ಪ್ರಾಮಾಣಿಕತೆ ಮತ್ತು ದಕ್ಷತೆಯ ಒಂದು ಪ್ರತಿಜ್ಞೆ ಸ್ವೀಕರಿಸಿದರೆ ಏನಾಗಬಹುದು. ಏಕೆಂದರೆ ಈ ಹತ್ತರಷ್ಟು ಜನ ಅಕ್ಷರಸ್ಥರು, ವಿದ್ಯಾವಂತರು ಬುದ್ದಿವಂತರು ಅಧಿಕಾರ ಹೊಂದಿರುವವರು, ಕೆಲವರನ್ನು ಹೊರತುಪಡಿಸಿ ಬಹುತೇಕರು ನಿಗದಿತ ಸರ್ಕಾರಿ ಅಥವಾ ಅರೆ ಸರ್ಕಾರಿ ಆದಾಯ ಹೊಂದಿರುವವರು, ಬಹುತೇಕ ಸಂಪನ್ಮೂಲಗಳನ್ನು ಬಳಸುತ್ತಿರುವವರು, ಸಮಾಜದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವವರು, ರಾಜ್ಯದ ಎಲ್ಲಾ ಸಮಕಾಲೀನ ಸಮಸ್ಯೆ ಮತ್ತು ಮಾಹಿತಿಯ ಅರಿವಿರುವವರು.

ಇವರುಗಳೇನಾದರೂ ಮುಂದಿನ ಕೇವಲ 3/4 ವರ್ಷಗಳಲ್ಲಿ ಕಾನೂನಿನ ಅಡಿಯಲ್ಲಿ, ನೈತಿಕತೆಯ ನೆಲೆಯಲ್ಲಿ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಿದ್ದೇ ಆದರೆ ಕರ್ನಾಟಕ ರಾಜ್ಯದ ಭವಿಷ್ಯ, ಜನರ ಜೀವನಮಟ್ಟದ ಆಧಾರದಲ್ಲಿ ಹೇಗಾಗಬಹುದು ಊಹಿಸಿ.

ಅವರೇನು ಸ್ವಾತಂತ್ರ್ಯ ಹೋರಾಟಗಾರರಂತೆ ಪ್ರಾಣ ತ್ಯಾಗ ಮಾಡಬೇಕಾಗಿಲ್ಲ, ಉಪವಾಸ ಸತ್ಯಾಗ್ರಹ ಮಾಡಬೇಕಾಗಿಲ್ಲ, ಮನೆ ಮಠ ಸಂಸಾರ ತೊರೆಯಬೇಕಾಗಿಲ್ಲ. ಕೇವಲ ಸರ್ಕಾರದ ಸಂಬಳ ಮಾತ್ರ ಪಡೆಯುವುದು ಮತ್ತು ಅದಕ್ಕೆ ತಕ್ಕ ಕರ್ತವ್ಯ ನಿರ್ವಹಿಸುವುದು. ಅಷ್ಟು ಮಾತ್ರ ಮಾಡಿದರೆ ಸಾಕು. ಸರ್ಕಾರದ ಸಂಬಳ ಇಲ್ಲದವರು ಒಂದು ಮಿತಿ ಮೀರದ ಲಾಭದ ಒಳಗೆ ಕೆಲಸ ಮಾಡಿದರೆ ಸಾಕು.

ಅತಿ ಮುಖ್ಯವಾಗಿ……..

ಕರ್ನಾಟಕದಲ್ಲಿ…………

ನಮ್ಮ ರಾಜ್ಯದ ಎಲ್ಲಾ ಅಧಿಕಾರ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಒಂದು ವರ್ಷದ ಮಟ್ಟಿಗೆ ತಮ್ಮ ಕೆಲಸವನ್ನು ಸೇವೆ ಎಂದು ಪರಿಗಣಿಸಿ ಯಾವುದೇ ಲಂಚ ಸ್ವೀಕರಿಸದೆ ಸಹಜವಾಗಿ ಮತ್ತು ಪ್ರಾಮಾಣಿಕವಾಗಿ ತಮ್ಮ ಎಂದಿನ ಸರಳ ಕೆಲಸಗಳನ್ನು ಅಧಿಕೃತ ಸಂಬಳವನ್ನು ಪಡೆದು ಮಾಡಿದರೆ ಈ ರಾಜ್ಯದ ಈಗಿನ ಆದಾಯಕ್ಕೆ ಹೆಚ್ಚುವರಿಯಾಗಿ ಸುಮಾರು ಒಂದು ಲಕ್ಷ ಕೋಟಿಯಷ್ಟು ಸುಲಭವಾಗಿ ಏರಿಕೆಯಾಗುತ್ತದೆ.

ಇಷ್ಟೇ ಪ್ರಾಮಾಣಿಕತೆಯ ಕೆಲಸ ಇಲ್ಲಿಯವರೆಗೂ ಅವರ ಬೇಜವಾಬ್ದಾರಿ, ನಿರ್ಲಕ್ಷ್ಯ , ಸೋಮಾರಿತನದಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ಉಳಿಸಿ ತಮ್ಮ ಕೆಲಸಗಳನ್ನು ಕ್ರಮಬದ್ಧಗೊಳಿಸಿದರೆ ಈ ಆದಾಯದ ಜೊತೆಗೆ ಮತ್ತೆ ಕನಿಷ್ಠ ಒಂದು ಲಕ್ಷ ಕೋಟಿಯಷ್ಟು ಉಳಿತಾಯ ರೂಪದಲ್ಲಿ ಸಿಗುತ್ತದೆ.

ಅಂದರೆ ಹೊಟ್ಟೆ ತುಂಬಿ ಸಂಸಾರ ನಡೆಸುವಷ್ಟು ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳ ಕೇವಲ ಒಂದು ವರ್ಷದ ಪ್ರಾಮಾಣಿಕ ದುಡಿಮೆ ರಾಜ್ಯದ ಈಗಿನ ಆದಾಯವನ್ನು ದ್ವಿಗುಣ ಗೊಳಿಸುತ್ತದೆ.

ಆ ಹಣವನ್ನು ರಾಜಕಾರಣಿಗಳು ಅಷ್ಟೇ ಪ್ರಾಮಾಣಿಕತೆಯಿಂದ ಉಪಯೋಗಿಸಿದರೆ ಖಂಡಿತವಾಗಿಯೂ ಜನರ ಜೀವನಮಟ್ಟ ಬಹಳಷ್ಟು ಉತ್ತಮವಾಗುತ್ತದೆ.

ಇದರಿಂದಾಗಿ,
ಆರೋಗ್ಯ, ಶಿಕ್ಷಣ, ಸ್ವಚ್ಚತೆ, ಕ್ರೀಡೆ ಸಂಗೀತ ಸಾಹಿತ್ಯ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿ ಕಾಣುವುದಲ್ಲದೆ ವೇಶ್ಯಾವಾಟಿಕೆ, ವಲಸೆ, ಬಾಲ ಕಾರ್ಮಿಕ ಪದ್ದತಿ,
ಅಪಘಾತ, ಅಪೌಷ್ಟಿಕತೆ, ಶಿಶು ಮರಣ, ಕಳ್ಳತನ ದರೋಡೆ ಕೊಲೆ ಮುಂತಾದುವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ.

ಕೇವಲ ಕೆಲವೇ ಲಕ್ಷಗಳ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಂಕಲ್ಪ ಮಾಡಿದರೆ ಎಷ್ಟೊಂದು ಮಹತ್ವದ ಬದಲಾವಣೆ ಸಾಧ್ಯ.

ಇದರ ಪರೋಕ್ಷ ಪರಿಣಾಮ ಸಾಮಾನ್ಯ ಜನರ ಮೇಲಾಗಿ ಅವರೂ ಕೂಡ ಜಾಗೃತರಾಗುತ್ತಾರೆ. ಇಡೀ ವ್ಯವಸ್ಥೆ ಉತ್ತಮ ಗುಣಮಟ್ಟದ ಸಮಾಜವಾಗಿ ರೂಪಗೊಳ್ಳುತ್ತದೆ.

ಆ ಸೌಭಾಗ್ಯದ ದಿನಗಳನ್ನು ಕಾಣಲು ನಾವೆಲ್ಲರೂ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸೋಣ‌.
ಇದು ತುಂಬಾ ಕಷ್ಟ ನಿಜ. ಆದರೆ ಅಸಾಧ್ಯವಲ್ಲ.

ಸೂರ್ಯನಲ್ಲಿಗೇ ಉಪಗ್ರಹ ಕಳಿಸುವ ತಯಾರಿಯಲ್ಲಿರುವಾಗ ಇದು ಯಾವ ಮಹಾ ಕಷ್ಟ ಅಲ್ಲವೇ…… ‌

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ: ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ವಾಹನ (ಬೈಕ್) ಸವಾರರಿಗೆ ಹೆಲ್ಮೆಟ್…

4 hours ago

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಗೂಡ್ಸ್ ಆಟೋ: ಚಾಲಕನಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…

6 hours ago

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…..,

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…

7 hours ago

ಒಂದು ವರ್ಷದೊಳಗೆ ಎತ್ತಿನಹೊಳೆ ನೀರು- ಸಚಿವ ಕೆ.ಎಚ್ ಮುನಿಯಪ್ಪ

ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…

20 hours ago

ಡಿ.15ರಂದು ಕಾಣೆಯಾಗಿದ್ದ 15 ವರ್ಷದ ಬಾಲಕ ಇಂದು ಶವವಾಗಿ ಪತ್ತೆ

ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…

1 day ago

ಬಸ್ಸಿನಲ್ಲಿ 55 ಲಕ್ಷ ಹಣ ಮತ್ತು ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…

1 day ago