ಶ್ರೀರಾಮ ಪ್ರೌಢಶಾಲೆಯಲ್ಲಿ ವಿದ್ಯಾ ವಾರಿಧಿ ಅಭಿನಂದನಾ ಸಮಾರಂಭ

ವಿನಯಶ್ರೀ ವಿದ್ಯಾ ಸಂಸ್ಥೆ (ರಿ) ಸಮೂಹಗಳು ಶ್ರೀ ರಾಮ ಪ್ರೌಢಶಾಲೆ, ಎಂ.ಜಿ.ಕೆ ರವರ ಆತ್ಮೀಯ ಒಡನಾಡಿ ಬಳಗದಿಂದ ವಿದ್ಯಾ ವಾರಿಧಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕಾಡನೂರು ಕೈಮರ ಬಳಿಯ ಶ್ರೀರಾಮ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಗೋಪಾಲಕೃಷ್ಣಯ್ಯ ರವರ ಸಮಾಜ ಸೇವೆಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಸಂಸ್ಥೆ WMSI MYNISTRY OF CORPORATE AFFAIR GOVERNENT OF INDIA PH.D (HON) DOCTORATE ಹಾಗೂ CENTRAL CHRISTIAN UNIVERSITY SECRETARY OF STATE-DELAWARE (USA) ಅಂತಾರಾಷ್ಟ್ರೀಯ ಮಟ್ಟದ PH.D (HON) ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕರಿಸಿದ ಹಿನ್ನೆಲೆ ಡಾ. ಎಂ.ಗೋಪಾಲಕೃಷ್ಣಯ್ಯರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮ ಕುರಿತು ಮಾತನಾಡಿದ ಡಾ. ಎಂ.ಗೋಪಾಲಕೃಷ್ಣಯ್ಯ, ನಾನು ಬಡ ಕುಟುಂಬದಿಂದ ಬಂದವನು, ನಮ್ಮದು ಚನ್ನೇಗೌಡ ವಂಶ, ನನ್ನ ಸೇವೆ ಎಲ್ಲಾ ಕ್ಷೇತ್ರದಲ್ಲಿ ಇದೆ. ನಾನು ಶ್ರಮಜೀವಿಯಾಗಿ ಕೆಲಸ ಮಾಡ್ತೇನೆ. ಕೆಲಸಕ್ಕೆ ಸೇರಬೇಕಾದರೆ ತುಂಬಾ ಕಷ್ಟ ಪಟ್ಟಿದ್ದೇನೆ. ನನ್ನ ಸಂಬಂಧಿಕರು ಶಿಕ್ಷಣ ಕ್ಷೇತ್ರದಲ್ಲಿ ಇದ್ದರು. ಅವರನ್ನು ನೋಡಿ ನಾನು ಶಿಕ್ಷಕ ಆಗಬೇಕೆಂದು ಶಿಕ್ಷಕ ಆದೆ. ದಾನದಲ್ಲಿ ದೊಡ್ಡದಾನ ವಿದ್ಯಾದಾನ ಎಂದು ತಿಳಿದು. ಈ ಸ್ಥಳದಿಂದ 10 ಕಿ.ಮೀ ಅಂತರದಲ್ಲಿ ಯಾವುದೇ ಶಾಲೆ ಇಲ್ಲದ ಕಾರಣ ಈ ಜಾಗವನ್ನು ಆರಿಸಿಕೊಂಡು ಶಾಲೆಯನ್ನು ಪ್ರಾರಂಭಿಸಿದೆ. ನನ್ನ 18 ರಿಂದ 25ನೇ ವಯಸ್ಸಿನಲ್ಲಿ ಗ್ರಾಮದ ಜಾತ್ರೆ ಉತ್ಸವದಲ್ಲಿ ಆಸಕ್ತ ನಾಗರಿತಿದ್ದೆ, ವಿಧವೆ ವೇತನ ಹಾಗೂ ಇತರೆ ಸರ್ಕಾರಿ ಯೋಜನೆ ಕೊಡಿಸುವುದರಲ್ಲಿ ನಾಯಕತ್ವ ಹೊಂದಿರುತ್ತಿದ್ದೆ ಎಂದರು.

ನಮ್ಮ ಶಾಲಾ ಮಕ್ಕಳ ಪೋಷಕರಲ್ಲಿ ಶ್ರೀರಾಮ ಶಾಲೆ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಎಷ್ಟೇ ಹಣ, ಅಧಿಕಾರ, ರೂಪ ಇದ್ದರೂ ಮನುಷ್ಯನಿಗೆ ಮಾನವೀಯ ಮೌಲ್ಯ ಮುಖ್ಯ. ಹತ್ತು ದೇವಾಲಯಕ್ಕಿಂತ ಗ್ರಾಮಾಂತರದಲ್ಲಿ ಒಂದು ಉತ್ತಮ ಶಾಲೆ ಇರಬೇಕು ಎಂದು ತಮ್ಮ ಭಾವನಾತ್ಮಕ ನುಡಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರು , ಅಧ್ಯಕ್ಷರು ವಿನಯಶ್ರೀ ವಿದ್ಯಾ ಸಂಸ್ಥೆ ಡಾ. ಆಂಜನಪ್ಪ, ಖ್ಯಾತ ವಕೀಲರು ಸಿ.ಹೆಚ್.ಹನುಮಂತರಾಯ, ಡಾ. ಗಿರೀಶ , ನಿವೃತ್ತ ಡಿ ಡಿ ಪಿ ಐ ಗಂಗಮರೇಗೌಡ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರವಿಕುಮಾರ್. ಟಿ.ಕೆ, ವಿನಯಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀದೇವಿ ಜಿ. ಎಸ್, ಶಿಕ್ಷಕರ ವೃಂದ, ಸಿಬ್ಬಂದಿ ವರ್ಗ ಸೇರಿ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಓದು, ಪ್ರವಾಸ ಮತ್ತು ಧ್ಯಾನಸ್ಥ ಮನಸ್ಥಿತಿ……..

ಪ್ರವಾಸ ಕಥನಗಳ ಬಗ್ಗೆ ಬಹಳ ಹಿಂದಿನಿಂದಲೂ ಸಾಕಷ್ಟು ಲೇಖನಗಳನ್ನು ಓದುತ್ತಲೇ ಇರುತ್ತೇನೆ. ಅದು ಪ್ರವಾಸೋದ್ಯಮಕ್ಕಾಗಿಯಲ್ಲ. ಏಕೆಂದರೆ ಪ್ರವಾಸ ವ್ಯಾಪಾರಿಗಳಿಗೆ ಒಂದು…

5 hours ago

ಬೆಳೆ ವಿಮೆ ಮಾಡಿಸಲು ಆ.14 ಕೊನೆಯ ದಿನ: ರೈತರು ತಪ್ಪದೇ ಬೆಳೆ ವಿಮೆ ಮಾಡಿಸಿ- ಸಚಿವ ಕೆ.ಎಚ್ ಮುನಿಯಪ್ಪ

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇಕಡ 33 ರಷ್ಟು ಮಳೆ ಕೊರತೆಯಾಗಿದ್ದು ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ…

18 hours ago

ಬರದ ನಡುವೆಯೂ ರಾಗಿ ರೈತರಿಗೆ ಆಸರೆ: ಫಸಲ್ ಬಿಮಾ ಪ್ರೀಮಿಯಂ ಭರಿಸುವುದಾಗಿ ಶಾಸಕ ಧೀರಜ್ ಮುನಿರಾಜ್ ಘೋಷಣೆ

ದೊಡ್ಡಬಳ್ಳಾಪುರ: ಸಮರ್ಪಕ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ದೊಡ್ಡಬಳ್ಳಾಪುರ ಕ್ಷೇತ್ರದ ರೈತರಿಗೆ ನೆರವಾಗುವ ಉದ್ದೇಶದಿಂದ, ಕ್ಷೇತ್ರದ ಪ್ರಮುಖ ಬೆಳೆಯಾದ…

21 hours ago

ಕೋಳಿ ವಿಚಾರದ ಜಗಳಕ್ಕೆ ಹೊಸ ಟ್ವಿಸ್ಟ್: ಎರಡೂ ಕಡೆಯಿಂದ ಹಲ್ಲೆ ಆರೋಪ, ಆಸ್ಪತ್ರೆಯಲ್ಲೂ ಗಲಾಟೆ

ಗೌರಿಬಿದನೂರು: ಕೋಳಿ ವಿಚಾರವಾಗಿ ಆರಂಭವಾದ ನೆರೆಹೊರೆಯವರ ನಡುವಿನ ಜಗಳ ಗಂಭೀರ ಸ್ವರೂಪ ಪಡೆದು, ಸಾರ್ವಜನಿಕ ಆಸ್ಪತ್ರೆಯೊಳಗೂ ಗಲಾಟೆ ನಡೆದ ಘಟನೆ…

22 hours ago

” ಕ್ಷಮೆ” ಎಂಬ ಭಾವದ ಸುತ್ತ……

ಕನ್ನಡದ ಖ್ಯಾತ, ಪ್ರತಿಭಾವಂತ ಚಲನಚಿತ್ರ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತನಾಗ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದೆಹಲಿಯ…

1 day ago

ವೃದ್ಧ ದಂಪತಿ ಆತ್ನಹತ್ಯೆಗೆ ಯತ್ನ: ಪತಿ ಶಿವಪ್ಪ ಸಾವು

ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರ ಗ್ರಾಮದ ವೃದ್ಧ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಶಿವಪ್ಪ(76) ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ…

2 days ago