ಶ್ರೀರಾಮ ಪ್ರೌಢಶಾಲೆಯಲ್ಲಿ ವಿದ್ಯಾ ವಾರಿಧಿ ಅಭಿನಂದನಾ ಸಮಾರಂಭ

ವಿನಯಶ್ರೀ ವಿದ್ಯಾ ಸಂಸ್ಥೆ (ರಿ) ಸಮೂಹಗಳು ಶ್ರೀ ರಾಮ ಪ್ರೌಢಶಾಲೆ, ಎಂ.ಜಿ.ಕೆ ರವರ ಆತ್ಮೀಯ ಒಡನಾಡಿ ಬಳಗದಿಂದ ವಿದ್ಯಾ ವಾರಿಧಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕಾಡನೂರು ಕೈಮರ ಬಳಿಯ ಶ್ರೀರಾಮ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಗೋಪಾಲಕೃಷ್ಣಯ್ಯ ರವರ ಸಮಾಜ ಸೇವೆಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಸಂಸ್ಥೆ WMSI MYNISTRY OF CORPORATE AFFAIR GOVERNENT OF INDIA PH.D (HON) DOCTORATE ಹಾಗೂ CENTRAL CHRISTIAN UNIVERSITY SECRETARY OF STATE-DELAWARE (USA) ಅಂತಾರಾಷ್ಟ್ರೀಯ ಮಟ್ಟದ PH.D (HON) ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕರಿಸಿದ ಹಿನ್ನೆಲೆ ಡಾ. ಎಂ.ಗೋಪಾಲಕೃಷ್ಣಯ್ಯರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮ ಕುರಿತು ಮಾತನಾಡಿದ ಡಾ. ಎಂ.ಗೋಪಾಲಕೃಷ್ಣಯ್ಯ, ನಾನು ಬಡ ಕುಟುಂಬದಿಂದ ಬಂದವನು, ನಮ್ಮದು ಚನ್ನೇಗೌಡ ವಂಶ, ನನ್ನ ಸೇವೆ ಎಲ್ಲಾ ಕ್ಷೇತ್ರದಲ್ಲಿ ಇದೆ. ನಾನು ಶ್ರಮಜೀವಿಯಾಗಿ ಕೆಲಸ ಮಾಡ್ತೇನೆ. ಕೆಲಸಕ್ಕೆ ಸೇರಬೇಕಾದರೆ ತುಂಬಾ ಕಷ್ಟ ಪಟ್ಟಿದ್ದೇನೆ. ನನ್ನ ಸಂಬಂಧಿಕರು ಶಿಕ್ಷಣ ಕ್ಷೇತ್ರದಲ್ಲಿ ಇದ್ದರು. ಅವರನ್ನು ನೋಡಿ ನಾನು ಶಿಕ್ಷಕ ಆಗಬೇಕೆಂದು ಶಿಕ್ಷಕ ಆದೆ. ದಾನದಲ್ಲಿ ದೊಡ್ಡದಾನ ವಿದ್ಯಾದಾನ ಎಂದು ತಿಳಿದು. ಈ ಸ್ಥಳದಿಂದ 10 ಕಿ.ಮೀ ಅಂತರದಲ್ಲಿ ಯಾವುದೇ ಶಾಲೆ ಇಲ್ಲದ ಕಾರಣ ಈ ಜಾಗವನ್ನು ಆರಿಸಿಕೊಂಡು ಶಾಲೆಯನ್ನು ಪ್ರಾರಂಭಿಸಿದೆ. ನನ್ನ 18 ರಿಂದ 25ನೇ ವಯಸ್ಸಿನಲ್ಲಿ ಗ್ರಾಮದ ಜಾತ್ರೆ ಉತ್ಸವದಲ್ಲಿ ಆಸಕ್ತ ನಾಗರಿತಿದ್ದೆ, ವಿಧವೆ ವೇತನ ಹಾಗೂ ಇತರೆ ಸರ್ಕಾರಿ ಯೋಜನೆ ಕೊಡಿಸುವುದರಲ್ಲಿ ನಾಯಕತ್ವ ಹೊಂದಿರುತ್ತಿದ್ದೆ ಎಂದರು.

ನಮ್ಮ ಶಾಲಾ ಮಕ್ಕಳ ಪೋಷಕರಲ್ಲಿ ಶ್ರೀರಾಮ ಶಾಲೆ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಎಷ್ಟೇ ಹಣ, ಅಧಿಕಾರ, ರೂಪ ಇದ್ದರೂ ಮನುಷ್ಯನಿಗೆ ಮಾನವೀಯ ಮೌಲ್ಯ ಮುಖ್ಯ. ಹತ್ತು ದೇವಾಲಯಕ್ಕಿಂತ ಗ್ರಾಮಾಂತರದಲ್ಲಿ ಒಂದು ಉತ್ತಮ ಶಾಲೆ ಇರಬೇಕು ಎಂದು ತಮ್ಮ ಭಾವನಾತ್ಮಕ ನುಡಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರು , ಅಧ್ಯಕ್ಷರು ವಿನಯಶ್ರೀ ವಿದ್ಯಾ ಸಂಸ್ಥೆ ಡಾ. ಆಂಜನಪ್ಪ, ಖ್ಯಾತ ವಕೀಲರು ಸಿ.ಹೆಚ್.ಹನುಮಂತರಾಯ, ಡಾ. ಗಿರೀಶ , ನಿವೃತ್ತ ಡಿ ಡಿ ಪಿ ಐ ಗಂಗಮರೇಗೌಡ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರವಿಕುಮಾರ್. ಟಿ.ಕೆ, ವಿನಯಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀದೇವಿ ಜಿ. ಎಸ್, ಶಿಕ್ಷಕರ ವೃಂದ, ಸಿಬ್ಬಂದಿ ವರ್ಗ ಸೇರಿ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

1 day ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

2 days ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

2 days ago

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಮದರ್‌ ತೆರೇಸಾ - ಆಗಸ್ಟ್ 26, 1910..... ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ…

2 days ago

ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ

ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)…

3 days ago

ಮೂರು ತಾಲೂಕು ಬರದ ಪಟ್ಟಿಗೆ; ದೊಡ್ಡಬಳ್ಳಾಪುರಕ್ಕೆ ವಿನಾಯಿತಿ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

3 days ago