ಮುನಿರತ್ನ ಭ್ರಷ್ಟಚಾರಿ ಅನ್ನೊದು ಗೊತ್ತಿತ್ತು. ಆದರೆ ವಿಕೃತ ಮನಸ್ಸಿನ ಸೆಕ್ಸ್ ರಾಕೇಟ್ ನಡೆಸುತ್ತಾನೆ ಅಂತ ಈಗ ಗೊತ್ತಾಯಿತು. ದುರುದ್ದೇಶ ಪೂರ್ವಕವಾಗಿ ಏಡ್ಸ್ ಪೀಡಿತ ಮಹಿಳೆಯರನ್ನು ಬಿಟ್ಟು ದಂಧೆ ಮಾಡಿದ್ದು ದುರಂತ. ಅಧಿಕಾರಿಗಳು, ರಾಜಕಾರಣಿಗಳು ಅವರ ಅಧಿಕಾರ ದುರುಪಯೋಗ ಕಂಡುಬಂದಿದೆ. ಪೊಲೀಸ್ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ದುರ್ಬಳಕೆ ಆಗಿದೆ. ಹನಿಟ್ರ್ಯಾಪ್ ಗೆ ಒಳಗಾದವರಿಗೆ ಬ್ಲಾಕ್ ಮೇಲ್ ಮಾಡಿ ಅವರ ಮೂಲಕ ಟ್ರ್ಯಾಪ್ ಮಾಡಿಸಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಶಾಸಕ ಮುನಿರತ್ನ ವಿಚಾರವಾಗಿ ಮಾತನಾಡಿದ್ದಾರೆ.
ಶಾಸಕ ಮುನಿರತ್ನ ಅವರನ್ನ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮುನಿರತ್ನ ಕಳಪೆ ಕೆಲಸ ಮಾಡಿ ಭ್ರಷ್ಟಾಚಾರ ಮಾಡೋದು ಗೊತ್ತಿತ್ತು. ವ್ಯವಸ್ಥಿತವಾದ ಹನಿಟ್ರ್ಯಾಫ್ ನಡೆಸುತ್ತಿದ್ದರು ಅನ್ನೋ ಅಘಾತಕಾರಿ ಅಂಶ ಬಯಲಾಗಿದೆ. ಹೆಣ್ಣು ಮಕ್ಕಳನ್ನ ಬಳಸಿಕೊಂಡು ಸರ್ಕಾರಿ ಅಧಿಕಾರಿಗಳನ್ನ ಟ್ರ್ಯಾಪ್ ಮಾಡಿದ್ದಾರೆ. ಅವರ ಮೂಲಕ ಕೆಲ ರಾಜಕಾರಣಿಗಳನ್ನ ಟ್ರ್ಯಾಪ್ ಮಾಡಿದ್ದಾರೆ. ರಾಜಕೀಯವಾಗಿ ಅಧಿಕಾರ ದುರಪಯೋಗಕ್ಕೆ ಬಳಸಿಕೊಳ್ಳುತ್ತಿದ್ದರು. ಉದ್ದೇಶಪೂರ್ವಕವಾಗಿ ಏಡ್ಸ್ ಇರುವವರನ್ನು ಕರೆದುಕೊಂಡು ಬಂದು ಏಡ್ಸ್ ಹಂಚಿದ್ದಾರೆ. ಈ ವಿಚಾರವಾಗಿ ದೂರುಗಳಿಂದ ಕೇಳಿಬಂದಿದೆ. ದೂರು ಕೊಟ್ಟಿರೋದು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆ ಸಂತ್ರಸ್ಥೆ. ನೀರಲ್ಲಿ ಮಾತ್ರೆ ಹಾಕಿ ನಗ್ನವಾಗಿ ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿದ್ದಾರೆ. ಪೊಲೀಸ್ ಹಾಗೂ ಇತರೆ ಇಲಾಖೆ ಅಧಿಕಾರಿಗಳನ್ನ ಬ್ಲಾಕ್ ಮೇಲ್ ಮಾಡಿ ಕೆಲಸ ಮಾಡಿಸಿಕೊಂಡಿದ್ದಾರೆ. ಕೃತ್ಯಗಳಿಗೆ ಪೊಲೀಸ್ ವಾಹನಗಳನ್ನ ಸಹ ಬಳಸಿದ್ದಾರೆ. ಬಿಜೆಪಿಯವರು ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಮಾರಸ್ವಾಮಿ, ಆರ್ ಅಶೋಕ್ ಖಂಡಿಸಿದ್ದೀರಾ..? ಬಿಜೆಪಿ ಕಾರ್ಯಕರ್ತೆ ಮೇಲೆ ಅತ್ಯಾಚಾರ ಮಾಡಿದ್ರೂ ಬಾಯಿ ಮುಚ್ಚಿಕೊಂಡಿದ್ದಾರೆ.. ಅವರ ಸಪೋರ್ಟ್ ಇಲ್ಲದೆ ಇದೆಲ್ಲಾ ನಡೆಯುತ್ತಾ…? ಒಂದು ಕಡೆ ಒಕ್ಕಲಿಗರಿಗೆ ಅವಮಾನ ದಲಿತರಿಗೆ ಅವಹೇಳನ, ಇನ್ನೊಂದು ಕಡೆ ಹನಿಟ್ರ್ಯಾಪ್. ಬಿಜೆಪಿಯವರು ಹಾಗೂ ಕುಮಾರಸ್ವಾಮಿ ಅವರು ನಾಚಿಕೆ ಮಾನ ಮರ್ಯಾದೆ ಇಲ್ಲದೆ ಅವರ ಪರವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಕ್ಕಲಿಗರಿಗೆ ಅವಹೇಳನವಾದಾಗ ಬಾಲಗಂಗಾಧರನಾಥ ಸ್ವಾಮೀಜಿ ನೇತೃತ್ವದಲ್ಲಿ ಈ ಹಿಂದೆ ಹೋರಾಟ ನಡೆದಿದೆ. ಶಾಸಕ ಮುನಿರತ್ನ ನಡೆಗೆ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಮುನಿರತ್ನ ವಿಚಾರದಲ್ಲಿ ಸಮುದಾಯದಿಂದ ಖಂಡನೆ ಮಾಡಬೇಕಿದೆ. ಸಮುದಾಯದ ಎಲ್ಲರೂ ನಿರ್ಮಲಾನಂದನಾಥ ಶ್ರೀಗಳಿಗೆ ಗೌರವ ಕೊಡ್ತೀವಿ. ಈಗ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಖಂಡನಾ ಸಭೆ ಆಗಬೇಕಿದೆ. ಇಡೀ ಸಮುದಾಯದ ಗೌರವಕ್ಕೆ ಚ್ಯುತಿ ತಂದಿದೆ. ನಾವು ಧ್ವನಿ ಎತ್ತಬೇಕು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ನಿರ್ಮಲಾನಂದನಾಥ ಶ್ರೀಗಳಿಗಿದೆ. ಒಕ್ಕಲಿಗ ಶಾಸಕರು, ಸಚಿವರುಗಳು ಸ್ವಾಮೀಜಿ ಜೊತೆ ಮಾತನಾಡಿದ್ದೇವೆ. ಒಕ್ಕಲಿಗರು ದಲಿತರ ಸ್ವಾಭಿಮಾನಕ್ಕೆ ಮುನಿರತ್ನ ಧಕ್ಕೆ ತಂದಿದ್ದಾನೆ. ಎಲ್ಲರ ಅಭಿಪ್ರಾಯ ಶ್ರೀಗಳ ಗಮನಕ್ಕೆ ತರ್ತೇವೆ. ಮುಂದಿನ ನಡೆ ಶ್ರೀಗಳಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…