Categories: ಲೇಖನಗಳು

ವೃತ್ತಿ ನಿರತರ ವೃತ್ತಿ ಧರ್ಮ…… ಮಾನವೀಯ ಮೌಲ್ಯಗಳ ಉಳಿವಿಗಾಗಿ ಪ್ರಯತ್ನಿಸೋಣ..

ಪತ್ರಕರ್ತರು

ಕೇವಲ ನಿರೂಪಕರಲ್ಲ-ಮನರಂಜನೆ ನೀಡುವವರಲ್ಲ-ಜನರನ್ನು ಆಕರ್ಷಿಸುವವರಲ್ಲ – ವ್ಯಾಪಾರಿಗಳಲ್ಲ – ಜನಪ್ರಿಯತೆಯ ಹಿಂದೆ ಹೋಗುವವರಲ್ಲ- ಜನರನ್ನು ಮೆಚ್ಚಿಸುವವರು ಮಾತ್ರವಲ್ಲ…….

ಜೊತೆಗೆ ಮುಖ್ಯವಾಗಿ,

ವಿವೇಚನೆಯಿಂದ ಪರಿಶೀಲಿಸಿ ಎಷ್ಟೇ ಕಷ್ಟವಾದರೂ ಸತ್ಯವನ್ನು ಧೈರ್ಯವಾಗಿ ಹೇಳುವವರು.

ಪೊಲೀಸರು

ಕೇವಲ ಭಯ ಪಡಿಸುವವರಲ್ಲ – ಹೊಡೆಯುವವರಲ್ಲ – ಕೊಲ್ಲುವವರಲ್ಲ – ಬಂಧಿಸುವವರಲ್ಲ – ನಿಯಂತ್ರಿಸಿವವರಲ್ಲ-ಎಚ್ಚರಿಸುವವರಲ್ಲ – ರಕ್ಷಿಸುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ನ್ಯಾಯವನ್ನು – ಸತ್ಯವನ್ನು – ಕಾನೂನನ್ನು ಅವಶ್ಯವಿರುವ ಜನರಿಗೆ ನಿಷ್ಪಕ್ಷಪಾತವಾಗಿ ತಲುಪಿಸುವವರು.

ವಕೀಲರು

ಕೇವಲ ವೃತ್ತಿಪರರಲ್ಲ – ಹೊಟ್ಟೆ ಪಾಡಿನ ಕೆಲಸದವರಲ್ಲ – ಕಾನೂನು ಅರ್ಥೈಸುವವರಲ್ಲ – ಕಕ್ಷಿದಾರರ ಹಿತಾಸಕ್ತಿ ಕಾಪಾಡುವವರಲ್ಲ – ಚಾಣಾಕ್ಷತನದಿಂದ ವಾದ ಮಾಡುವವರು ಮಾತ್ರವಲ್ಲ….

ಜೊತೆಗೆ ಮುಖ್ಯವಾಗಿ,

ಶೋಷಿತರಿಗೆ – ಧಮನಿತರಿಗೆ – ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವವರು.

ಬರಹಗಾರರು

ಕೇವಲ ಅಕ್ಷರಗಳನ್ನು ಜೋಡಿಸುವವರಲ್ಲ – ಪದ ಲಾಲಿತ್ಯ ಹೊರಡಿಸುವವರಲ್ಲ – ವಾಕ್ಯಗಳ ಆಕರ್ಷಕ ನಿರೂಪಣೆ ಮಾಡುವವರಲ್ಲ – ಭಾವನೆಗಳನ್ನು ವ್ಯಕ್ತಪಡಿಸುವವರಲ್ಲ – ಪುಸ್ತಕ ಪ್ರಕಟಿಸುವವರಲ್ಲ – ಪ್ರಶಸ್ತಿ ಪಡೆಯುವವರಲ್ಲ – ಅಧ್ಯಕ್ಷತೆ ವಹಿಸುವವರು ಮಾತ್ರವಲ್ಲ …

ಜೊತೆಗೆ ಮುಖ್ಯವಾಗಿ,

ಸತ್ಯದ ಹುಡುಕಾಟಗಾರರು ಮತ್ತು ನಿರ್ಭಯವಾಗಿ ಅದನ್ನು ದಾಖಲಿಸುವವರು.

ವೈದ್ಯರು

ಕೇವಲ ರೋಗ ಗುಣಪಡಿಸುವವರಲ್ಲ – ವೃತ್ತಿಪರರಲ್ಲ – ಆರೋಗ್ಯದ ಮಾಹಿತಿ ನೀಡುವವರಲ್ಲ –

ಅತಿಮಾನುಷರಲ್ಲ – ಜೀವ ನೀಡುವವರು ಉಳಿಸುವವರು ಮಾತ್ರವಲ್ಲ….

ಜೊತೆಗೆ ಮುಖ್ಯವಾಗಿ,

ಜನರಲ್ಲಿ ಬದುಕಿನ ಆತ್ಮವಿಶ್ವಾಸ ಮೂಡಿಸುವವರು.

ಶಿಕ್ಷಕರು

ಕೇವಲ ಅಕ್ಷರ ಕಲಿಸುವವರಲ್ಲ – ಪಾಠ ಮಾಡುವವರಲ್ಲ – ಬುದ್ದಿವಾದ ಹೇಳುವವರಲ್ಲ – ಪದವಿ ನೀಡುವವರಲ್ಲ – ಉದ್ಯೋಗ ಕೊಡಿಸುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಬದುಕಲು ಕಲಿಸುವವರು, ಯೋಚಿಸಲು ಪ್ರೇರೇಪಿಸುವವರು.

ರಾಜಕಾರಣಿಗಳು

ಕೇವಲ ರಸ್ತೆ ಮಾಡಿಸುವವರಲ್ಲ – ವಿದ್ಯುತ್ ಹರಿಸುವವರಲ್ಲ – ಕಾನೂನು ಮಾಡುವವರಲ್ಲ – ಆಡಳಿತ ನಡೆಸುವವರಲ್ಲ -ರಕ್ಷಣೆ ಮಾಡುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಜನರ ಜೀವನಮಟ್ಟ ಸುಧಾರಿಸುವವರು.

ಧರ್ಮದ ಪೀಠಾಧಿಪತಿಗಳು

ಕೇವಲ ಭೋದನೆ ಮಾಡುವವರಲ್ಲ – ಉಪನ್ಯಾಸ ನೀಡುವವರಲ್ಲ – ಆಶ್ರಯ ಅನ್ನ ಶಿಕ್ಷಣ ನೀಡುವವರಲ್ಲ – ಧರ್ಮ ಪ್ರಚಾರಕರಲ್ಲ – ಭಕ್ತಿ ಭಾವ ಮೂಡಿಸುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಜ್ಞಾನದ ಬಲದಿಂದ ಜನರ ನೋವು ಸಂಕಷ್ಟ ಕಡಿಮೆ ಮಾಡುವವರು.

ಕಲಾವಿದರು

ಕೇವಲ ಮನರಂಜನೆ ನೀಡುವವರಲ್ಲ – ಭಾವಾತಿರೇಕಗಳನ್ನು ವ್ಯಕ್ತಪಡಿಸುವವರಲ್ಲ – ಜನರನ್ನು ಭ್ರಮಾಲೋಕಕ್ಕೆ ಒಯ್ಯುವವರಲ್ಲ – ಜನಪ್ರಿಯತೆ ಗಳಿಸುವವರಲ್ಲ – ದುಡ್ಡು ಮಾಡುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಜವಾಬ್ದಾರಿಯಿಂದ ಜನರನ್ನು ಒಳ್ಳೆಯ ನಡತೆ ಅಳವಡಿಸಿಕೊಳ್ಳಲು, ಜೀವನೋತ್ಸಾಹ ಹೆಚ್ಚಿಸಿಕೊಳ್ಳಲು ಪ್ರೇರೇಪಿಸುವವರು.

ಇನ್ನೂ ಮುಂತಾದ ಸೇವಾ ವಲಯಗಳಲ್ಲಿ ಈ ರೀತಿಯ ಮೌಲ್ಯಗಳು ಪುನರ್ ಸ್ಥಾಪನೆಯಾಗಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಈಗ ತುರ್ತಾಗಿ ಆಗಬೇಕಿದೆ.

ಇದನ್ನು ಹೊರತುಪಡಿಸಿ ಬೆವರು ಸುರಿಸುವ ರಕ್ತ ಬಸಿಯುವ ಅನೇಕ ಶ್ರಮಜೀವಿಗಳು ನಮ್ಮ ನಡುವೆ ಇದ್ದಾರೆ. ಆದರೆ ಅವರಲ್ಲಿ ಬಹುತೇಕರಿಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲ. ಹೊಟ್ಟೆ ಪಾಡಿನ ಕೌಟುಂಬಿಕ ನಿರ್ವಹಣೆಯ ಮೂಲಭೂತ ಅವಶ್ಯಕತೆಗಳಿಗೇ ಕೊರತೆ ಇರುವಾಗ ಸದ್ಯದ ಪರಿಸ್ಥಿತಿಯಲ್ಲಿ ಅವರಲ್ಲಿ ಆದರ್ಶಗಳನ್ನು ಹುಡುಕುವುದು ತುಂಬಾ ಕಷ್ಟ.

ಸಾಮಾನ್ಯರಾದ ನಾವು ಮಾನವೀಯ ಮೌಲ್ಯಗಳ ಉಳಿವಿಗಾಗಿ ಸಾಧ್ಯವಾದಷ್ಟು ಈಗಿನಿಂದಲೇ ಪ್ರಯತ್ನಿಸೋಣ.

ಇದು ಸಾಧ್ಯವಿಲ್ಲ. ಈ ಸಮಾಜ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿದೆ ಎಂಬ ಸಿನಿಕತನ ಬೇಡ. ಒಳ್ಳೆಯದಾಗಲಿ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮಾತುಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಎಸ್ಪಿ ಸಿ.ಕೆ ಬಾಬಾ

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…

7 hours ago

ಗೊತ್ತಿರದ ವಿಷಯ ಕಲಿಯುವ ಕಡೆ ಗಮನ ಕೇಂದ್ರೀಕರಿಸಿ- ಡಾ. ಸೀಮಾ ಚೋಪ್ರಾ

"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…

8 hours ago

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

16 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

1 day ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 days ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

2 days ago