ಅಕ್ರಮ ಸಂಬಂಧಕ್ಕೆ ಬಲಿಯಾಯ್ತಾ ಒಂದು ತುಂಬು ಜೀವ..!? ನಮ್ಮ ಅತ್ತಿಗೆಗೆ ಕಾಲ್ ಮಾಡ್ತೀಯಾ ಎಂದು ತಲೆಗೆ ರಾಡ್ ನಲ್ಲಿ ಹೊಡೆದ ಮೈದುನಾ..

ಆಕೆಗೆ ಅಪರಿಚಿತನೊಬ್ಬ ಚಿರಪರಿಚಿತನಾದ… ಪರಿಚಯ ಹಣಕಾಸಿನ ವ್ಯವಹಾರದವರೆಗೂ ಸಾಗಿತು. ಸ್ನೇಹದಲ್ಲೇ ಇದ್ದ ಇಬ್ಬರ ಪರಿಚಯ ಮತ್ತೊಂದು ಘಟ್ಟದವರೆಗೆ ಸಾಗಿತು. ಆಕೆಯ ಮನೆ ಬಾಗಿಲಿಗೆ ಬಂದು ರಾದ್ದಾಂತ ಮಾಡಿದ್ದೇ ತಡ.. ಘೋರ ಕೃತ್ಯ ನಡೆದು ಹೋಗಿದೆ.

ಬರ್ಬರವಾಗಿ ಹೆಣವಾಗಿ ಬಿದ್ದಿರುವ ಯುವಕನ ಹೆಸರು ಆಂಜಿನಪ್ಪ@ಆಂಜಿರೆಡ್ಡಿ. ಚಿಕ್ಕಬಳ್ಳಾಪುರ ನಗರದ ಇಂದಿರಾನಗರದ ಆಶಾ ಎಂಬುವರ ಮನೆಗೆ ಬಂದು ರಾದ್ದಾಂತ ಮಾಡಿದ ಎಂಬ ಕಾರಣಕ್ಕೆ ಕೊಲೆಯಾಗಿ ಹೋಗಿದ್ದಾನೆ.

ಇನ್ನೂ ಕೊಲೆಯಾದ ಆಂಜಿನಪ್ಪ ಪೆಯಿಂಟ್ ಕೆಲಸ ಮಾಡಿಕೊಂಡು ತಂದೆ ತಾಯಿ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದ. ಆಂಜಿನಪ್ಪ, ಶಿಡ್ಲಘಟ್ಟ ತಾಲೂಕಿನ ನೆಂಟರ ಮನೆಗೆ ಹೋದಾಗ ಚಿಕ್ಕಬಳ್ಳಾಪುರ ನಗರದ ಆಶಾ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಹಣದ ವ್ಯವಹಾರದವರೆಗೂ ಸಾಗಿದೆ. ಬಳಿಕ ಲವ್.. ಪವ್ ಅಂತ ಆಶಾಗೆ ಪೀಡಿಸಿದ್ನಂತೆ. ಇವರಿಬ್ಬರಿಗೆ ಅಕ್ರಮ ಸಂಬಂಧ ಕೂಡ ಇತ್ತು ಎನ್ನಲಾಗುತ್ತಿದೆ. ಮೂರು ದಿನಗಳ ಹಿಂದೆ ಅಂದರೆ ಫೆ. 21 ರಂದು ಸಂಜೆ 5:30ಕ್ಕೆ ಮನೆ ಒಳಗೆ ಆಂಜನಪ್ಪ ಬಂದು ಆಶಾ ಮೇಲೆ ಬಲತ್ಕಾರ ಮಾಡಲು ಪ್ರಯತ್ನ ಪಟ್ಟ ಎಂದು ಆರೋಪಿಸಲಾಗಿದೆ. ಆಂಜಿನಪ್ಪನನ್ನ ರೂಂ ನಲ್ಲಿ ಕೂಡಿ ಹಾಕಿ, ಆಶಾ ರೂಂ ನಿಂದ ತಪ್ಪಿಸಿಕೊಂಡು ಕೆಳಗೆ ಬಂದು ಪಕ್ಕದ ಮನೆಯವರ ಫೋನ್ ನಿಂದ ಮೊದಲು ಗಂಡನಿಗೆ ಕರೆ ಮಾಡಿದ್ದಾಳೆ, ಆಗ ಕಾಲ್ ತೆಗೆಯದೆ ಇದ್ದದ್ದಕ್ಕೆ ಮೈದುನ ರಾಘವೇಂದ್ರಗೆ ಕರೆ ಮಾಡಿದ್ದಾಳೆ. ತಕ್ಷಣವೇ ಮನೆಗೆ ಬಂದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಇದು ಅತಿರೇಕಕ್ಕೆ ತಿರುಗಿ ಬುಧವಾರ ಆಶಾ ಮನೆಗೆ ಬಂದ ಆಂಜಿನಪ್ಪ ಬಲತ್ಕಾರ ಮಾಡಿದ್ದನೆಂಬ ಕಾರಣಕ್ಕೆ ರಾಘವೇಂದ್ರ@ರಘು ಬೆಡ್ ರೂಂನಲ್ಲಿದ್ದ ಅಂಜಿನಪ್ಪಗೆ ಮಾರಕಾಸ್ತ್ರದಿಂದ ಬಲವಾಗಿ ಹೊಡೆದ ಪರಿಣಾಮ ಆಂಜಿನಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯ ಎಸೆಗಿದಂತೆ ಆಶಾ ಮತ್ತಿತರು ಹೇಳಿದರೂ ಕೇಳದ ರಘು ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ…

ಗಂಡ ಅಮಾಯಕನಾಗಿದ್ದರಿಂದ ಆಶಾ ಮೈದುನ ರಾಘವೇಂದ್ರನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಈ ಕಾರಣಕ್ಕೆ ಆಂಜಿನಪ್ಪ ಅತ್ತಿಗೆಯನ್ನ ಪೀಡಿಸುತ್ತಿದ್ದಾನಂತಾ.. ಪಿತ್ತ ನೆತ್ತಿಗೆರಿಸಿಕೊಂಡು ಕೊಲೆ ಮಾಡಿ ಜೈಲು ಸೇರಿದ್ದಾನೆ. ಇನ್ನೂ ಆಶಾ ಹಾಗೂ ಆಂಜಿನಪ್ಪ ನಡುವೆ ಹಣದ ವ್ಯವಹಾರದ ಜೊತೆಗೆ ಅಕ್ರಮ ಸಂಬಂಧವೂ ಇತ್ತು ಎಂಬ ಶಂಕೆ ಕೂಡ ಇದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಯುವಕ ಕೊಲೆಯಾಗಿದೆ ಎಂದು ಹೇಳಲಾಗ್ತಿದೆ…

ಒಟ್ಟಿನಲ್ಲಿ ಪ್ರೀತಿ, ಪ್ರೇಮ, ಮೋಹದ ಬಲೆಗೆ ಸಿಕ್ಕ ದುರಂತವೋ ಏನೋ ವೈಯಕ್ತಿಕ ಕೊಲೆಯಲ್ಲಿ ಅಂತ್ಯವಾಗಿದೆ. ಇತ್ತ ಹೆಂಡತಿ ಹಾಗೂ ತಮ್ಮನ ವಿಚಾರ ತಿಳಿದು ಆಶಾಳ ಗಂಡ ಧರ್ಮ ಸಂಕಟಕ್ಕೆ ಸಿಲುಕಿದ್ದಾನೆ.

Ramesh Babu

Journalist

Recent Posts

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

13 hours ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

18 hours ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

2 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

2 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

2 days ago

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

3 days ago