ರಿಪೇರಿ ಹಣ ಪಡೆದಿದ್ದರೂ ಮಾಲೀಕರಿಗೆ ವಾಹನ ಹಿಂತಿರುಗಿಸದೇ ಮೀನಾಮೇಷ ಆರೋಪ: ಹೆಚ್ಚುವರಿ ಹಣ ಪಡೆಯಲು ವಾಹನ ಮಾಲೀಕರಿಗೆ ಕಿರುಕುಳ ಆರೋಪ:PSN ಆಟೋಮೆಟಿವ್ ಮಾರ್ಕೆಟಿಂಗ್ ಕಂಪನಿ ಎದರು ಧರಣಿ

ರಸ್ತೆ ಅಪಘಾತಕ್ಕೆ ತುತ್ತಾಗಿದ್ದ ಗೂಡ್ಸ್ ಗಾಡಿಯ(ಕ್ಯಾಂಟರ್) ರಿಪೇರಿಗೆಂದು PSN ಆಟೋಮೆಟಿವ್ ಮಾರ್ಕೆಟಿಂಗ್ ಕಂಪನಿ ನೀಡಲಾಗಿತ್ತು, ವಾಹನದ ರಿಪೇರಿ ಹಣವನ್ನ ಇನ್ಷುರೆನ್ಸ್ ಕಂಪನಿ ಬಿಡುಗಡೆ ಮಾಡಿತ್ತು, ಹಣ ಪಾವತಿಯಾಗಿದ್ದರು ವಾಹನ ಬಿಡುಗಡೆ ಮಾಡುವುದಕ್ಕೆ ಮೀನಾಮೇಷ ಎಣಿಸಿ ವಾಹನ ಮಾಲೀಕರಿಗೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕಂಪನಿಯ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಕೆಸ್ತೂರ್ ಗೇಟ್ ಬಳಿ ಇರುವ PSN ಆಟೋಮೇಟಿವ್ ಮಾರ್ಕೆಟಿಂಗ್ ಕಂಪನಿ ಮುಂದೆ ನಡೆದಿದೆ.

ಗಾಡಿ ಮಾಲೀಕನ ಬಳಿ ಹೆಚ್ಚುವರಿ ಹಣದ ಬೇಡಿಕೆ ಇಟ್ಟ PSN ಕಂಪನಿ ಸಿಬ್ಬಂದಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬೆಂಗಳೂರಿನ ಸಿದ್ದಾರ್ಥ ನಗರದ ನಿವಾಸಿ ಅಶ್ವತ್ಥನಾರಾಯಣರವರು ಹರೀಶ್ ಕಾರ್ಗೋ ಮೂವರ್ಸ್ ಕಂಪನಿಯ ಮಾಲೀಕರು, ಇವರ ಮಾಲೀಕತ್ವದ ಕೆಎ02ಎಹೆಚ್ 8714 ನೋಂದಣಿ ಸಂಖ್ಯೆ ಗೂಡ್ಸ್ ವಾಹನ ಮೂರ್ಚ್ 29 ರಂದು ಪೆನಗೊಂಡ ಬಳಿ ಅಪಘಾತಕ್ಕೆ ತುತ್ತಾಗಿತ್ತು. ಈ ಹಿನ್ನೆಲೆ ಅದೇ ದಿನ ರಿಪೇರಿ ಮಾಡಿಸಲು ದೊಡ್ಡಬಳ್ಳಾಪುರದ ಕೆಸ್ತೂರ್ ಗೇಟ್ ಬಳಿಯ PSN ಅಟೋಮೇಟಿವ್ ಮಾರ್ಕೆಟಿಂಗ್ ಕಂಪನಿಯಲ್ಲಿ ಬಿಡಲಾಗಿತು.

ವಾಹನದ ರಿಪೇರಿಯ ಸುಮಾರು 5 ಲಕ್ಷ ಹಣವನ್ನ ಓರಿಯಂಟಲ್ ಇನ್ಷುರೆನ್ಸ್ ಕಂಪನಿ ಆನ್ ಲೈನ್ ಮೂಲಕವೇ PSN ಕಂಪನಿಗೆ ಪಾವತಿ ಮಾಡಿದೆ. ಕಂಪನಿಗೆ ಹಣ ಪಾವತಿಯಾದರೂ ಮಾಲೀಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟು ಮಾಲೀಕರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

PSN ಕಂಪನಿ ಮ್ಯಾನೇಜರ್ ಯುವರಾಜ್ ಹಾಗೂ ಜನರಲ್ ಮ್ಯಾನೇಜರ್ ಸುದರ್ಶನ್ 34 ಸಾವಿರ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಾರೆ ವಾಹನ ಕೊಡುವುದಿಲ್ಲವೆಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಅಶ್ವತ್ಥನಾರಾಯಣ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

PSN ಕಂಪನಿ ಸಿಬ್ಬಂದಿ ದೌರ್ಜನ್ಯ ಹಾಗೂ ಕಿರುಕುಳ ವಿರೋಧಿಸಿ ಕನ್ನಡಪರ ಸಂಘಟನಗಳು ಕಂಪನಿ ಮುಂದೆ ಪ್ರತಿಭಟನೆಯನ್ನ ನಡೆಸಿದವು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ರಘುವರ್ಮಾ, ಕಳೆದ ಎರಡು ತಿಂಗಳಿಂದ ಅಶ್ವತ್ಥನಾರಾಯಣರವರ ಗಾಡಿಯನ್ನ ಕೊಡದೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದಾರೆ, ಇನ್ಷುರೆನ್ಸ್ ಕಂಪನಿಯಿಂದ ಹಣ ಪಾವತಿಯಾಗಿದ್ರು ಹಣ ಬಂದಿಲ್ಲ ಎಂದು ಸುಳ್ಳು ಹೇಳಿ ಗೂಡ್ಸ್ ಮಾಲೀಕರಿಗೆ ಎರಡು ತಿಂಗಳ ಆದಾಯಕ್ಕೆ ಕನ್ನ ಹಾಕಿದ್ದಾರೆ, ಎರಡು ತಿಂಗಳಿಂದ ಸುಮಾರು 90 ಹಣ ನಷ್ಟವನ್ನ ಅನುಭವಿಸಿದ್ದಾರೆ ಅಶ್ವತ್ಥನಾರಾಯಣರವರು, ಅವರಿಗಾದ ನಷ್ಟವನ್ನ ತುಂಬಿಕೊಡಬೇಕು ಮತ್ತು PSN ಕಂಪನಿ ಸಿಬ್ಬಂದಿಗಳಾದ ಯುವರಾಜ್ ಮತ್ತು ಸುದರ್ಶನ್ ಗೂಡ್ಸ್ ಮಾಲೀಕರ ಬಳಿ ಕ್ಷಮೆ ಕೇಳಿ ಬೇಕೆಂದು ಒತ್ತಾಯಿಸಿದರು.

Ramesh Babu

Journalist

Recent Posts

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 56…

10 hours ago

ಮಹತ್ವಾಕಾಂಕ್ಷಿ ಕ್ವಿನ್ ಸಿಟಿಗೆ ಮೊದಲ ಬೃಹತ್ ಹೂಡಿಕೆ ಒಪ್ಪಂದ

ಬೆಂಗಳೂರು ಗ್ರಾಮಾಂತರ: ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ‘ಕ್ವಿನ್ ಸಿಟಿ’ (KWINCity) ಯೋಜನೆಗೆ ಮೊದಲ ಬೃಹತ್ ಹೂಡಿಕೆ…

20 hours ago

108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಉದ್ಘಾಟನೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ…

20 hours ago

SIR ಜಾಗೃತಿ ಹಾಗೂ ಮತದಾರರ ಪಟ್ಟಿಯ ಸಂರಕ್ಷಣೆ ಕಾರ್ಯಕ್ಕೆ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

ದೇವನಹಳ್ಳಿ: ಮತದಾರರ ವಿಶೇಷ ತೀವ್ರ ಪಟ್ಟಿ ಪರಿಷ್ಕರಣೆ (SIR) ಹಾಗೂ ಜಿಬಿಎ ಚುನಾವಣೆ ಸಂಬಂಧ ಪಕ್ಷದ ಎಲ್ಲಾ ಮುಖಂಡರು ಮತ್ತು…

1 day ago

ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರ “ಹೈಕಮಾಂಡ್ ತೀರ್ಮಾನಕ್ಕೆ ಬದ್ದ”- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಕೆ.ಎಚ್ ಮುನಿಯಪ್ಪ ಮಹತ್ವದ ರಾಜಕೀಯ ಹಾಗೂ ಅನ್ನಭಾಗ್ಯ ಯೋಜನೆ…

1 day ago

ಬಿಜೆಪಿ – ಕಾಂಗ್ರೆಸ್ ನಡುವೆ SIR ಫೈಟ್: ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಕಿಡಿ

ಬೆಂಗಳೂರು ಗ್ರಾಮಾಂತರ: ಮತದಾರರ ವಿಶೇಷ ತೀವ್ರ ಪಟ್ಟಿ ಪರಿಷ್ಕರಣೆ (SIR) ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ರಾಜಕೀಯ…

1 day ago