ರಸ್ತೆ ಅಪಘಾತಕ್ಕೆ ತುತ್ತಾಗಿದ್ದ ಗೂಡ್ಸ್ ಗಾಡಿಯ(ಕ್ಯಾಂಟರ್) ರಿಪೇರಿಗೆಂದು PSN ಆಟೋಮೆಟಿವ್ ಮಾರ್ಕೆಟಿಂಗ್ ಕಂಪನಿ ನೀಡಲಾಗಿತ್ತು, ವಾಹನದ ರಿಪೇರಿ ಹಣವನ್ನ ಇನ್ಷುರೆನ್ಸ್ ಕಂಪನಿ ಬಿಡುಗಡೆ ಮಾಡಿತ್ತು, ಹಣ ಪಾವತಿಯಾಗಿದ್ದರು ವಾಹನ ಬಿಡುಗಡೆ ಮಾಡುವುದಕ್ಕೆ ಮೀನಾಮೇಷ ಎಣಿಸಿ ವಾಹನ ಮಾಲೀಕರಿಗೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕಂಪನಿಯ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಕೆಸ್ತೂರ್ ಗೇಟ್ ಬಳಿ ಇರುವ PSN ಆಟೋಮೇಟಿವ್ ಮಾರ್ಕೆಟಿಂಗ್ ಕಂಪನಿ ಮುಂದೆ ನಡೆದಿದೆ.
ಗಾಡಿ ಮಾಲೀಕನ ಬಳಿ ಹೆಚ್ಚುವರಿ ಹಣದ ಬೇಡಿಕೆ ಇಟ್ಟ PSN ಕಂಪನಿ ಸಿಬ್ಬಂದಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬೆಂಗಳೂರಿನ ಸಿದ್ದಾರ್ಥ ನಗರದ ನಿವಾಸಿ ಅಶ್ವತ್ಥನಾರಾಯಣರವರು ಹರೀಶ್ ಕಾರ್ಗೋ ಮೂವರ್ಸ್ ಕಂಪನಿಯ ಮಾಲೀಕರು, ಇವರ ಮಾಲೀಕತ್ವದ ಕೆಎ02ಎಹೆಚ್ 8714 ನೋಂದಣಿ ಸಂಖ್ಯೆ ಗೂಡ್ಸ್ ವಾಹನ ಮೂರ್ಚ್ 29 ರಂದು ಪೆನಗೊಂಡ ಬಳಿ ಅಪಘಾತಕ್ಕೆ ತುತ್ತಾಗಿತ್ತು. ಈ ಹಿನ್ನೆಲೆ ಅದೇ ದಿನ ರಿಪೇರಿ ಮಾಡಿಸಲು ದೊಡ್ಡಬಳ್ಳಾಪುರದ ಕೆಸ್ತೂರ್ ಗೇಟ್ ಬಳಿಯ PSN ಅಟೋಮೇಟಿವ್ ಮಾರ್ಕೆಟಿಂಗ್ ಕಂಪನಿಯಲ್ಲಿ ಬಿಡಲಾಗಿತು.
ವಾಹನದ ರಿಪೇರಿಯ ಸುಮಾರು 5 ಲಕ್ಷ ಹಣವನ್ನ ಓರಿಯಂಟಲ್ ಇನ್ಷುರೆನ್ಸ್ ಕಂಪನಿ ಆನ್ ಲೈನ್ ಮೂಲಕವೇ PSN ಕಂಪನಿಗೆ ಪಾವತಿ ಮಾಡಿದೆ. ಕಂಪನಿಗೆ ಹಣ ಪಾವತಿಯಾದರೂ ಮಾಲೀಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟು ಮಾಲೀಕರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
PSN ಕಂಪನಿ ಮ್ಯಾನೇಜರ್ ಯುವರಾಜ್ ಹಾಗೂ ಜನರಲ್ ಮ್ಯಾನೇಜರ್ ಸುದರ್ಶನ್ 34 ಸಾವಿರ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಾರೆ ವಾಹನ ಕೊಡುವುದಿಲ್ಲವೆಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಅಶ್ವತ್ಥನಾರಾಯಣ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
PSN ಕಂಪನಿ ಸಿಬ್ಬಂದಿ ದೌರ್ಜನ್ಯ ಹಾಗೂ ಕಿರುಕುಳ ವಿರೋಧಿಸಿ ಕನ್ನಡಪರ ಸಂಘಟನಗಳು ಕಂಪನಿ ಮುಂದೆ ಪ್ರತಿಭಟನೆಯನ್ನ ನಡೆಸಿದವು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ರಘುವರ್ಮಾ, ಕಳೆದ ಎರಡು ತಿಂಗಳಿಂದ ಅಶ್ವತ್ಥನಾರಾಯಣರವರ ಗಾಡಿಯನ್ನ ಕೊಡದೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದಾರೆ, ಇನ್ಷುರೆನ್ಸ್ ಕಂಪನಿಯಿಂದ ಹಣ ಪಾವತಿಯಾಗಿದ್ರು ಹಣ ಬಂದಿಲ್ಲ ಎಂದು ಸುಳ್ಳು ಹೇಳಿ ಗೂಡ್ಸ್ ಮಾಲೀಕರಿಗೆ ಎರಡು ತಿಂಗಳ ಆದಾಯಕ್ಕೆ ಕನ್ನ ಹಾಕಿದ್ದಾರೆ, ಎರಡು ತಿಂಗಳಿಂದ ಸುಮಾರು 90 ಹಣ ನಷ್ಟವನ್ನ ಅನುಭವಿಸಿದ್ದಾರೆ ಅಶ್ವತ್ಥನಾರಾಯಣರವರು, ಅವರಿಗಾದ ನಷ್ಟವನ್ನ ತುಂಬಿಕೊಡಬೇಕು ಮತ್ತು PSN ಕಂಪನಿ ಸಿಬ್ಬಂದಿಗಳಾದ ಯುವರಾಜ್ ಮತ್ತು ಸುದರ್ಶನ್ ಗೂಡ್ಸ್ ಮಾಲೀಕರ ಬಳಿ ಕ್ಷಮೆ ಕೇಳಿ ಬೇಕೆಂದು ಒತ್ತಾಯಿಸಿದರು.
ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…
ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್, ಸಿಹಿ,…
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…
ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…
ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ..... ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ…