ರಸ್ತೆ ಅಪಘಾತಕ್ಕೆ ತುತ್ತಾಗಿದ್ದ ಗೂಡ್ಸ್ ಗಾಡಿಯ(ಕ್ಯಾಂಟರ್) ರಿಪೇರಿಗೆಂದು PSN ಆಟೋಮೆಟಿವ್ ಮಾರ್ಕೆಟಿಂಗ್ ಕಂಪನಿ ನೀಡಲಾಗಿತ್ತು, ವಾಹನದ ರಿಪೇರಿ ಹಣವನ್ನ ಇನ್ಷುರೆನ್ಸ್ ಕಂಪನಿ ಬಿಡುಗಡೆ ಮಾಡಿತ್ತು, ಹಣ ಪಾವತಿಯಾಗಿದ್ದರು ವಾಹನ ಬಿಡುಗಡೆ ಮಾಡುವುದಕ್ಕೆ ಮೀನಾಮೇಷ ಎಣಿಸಿ ವಾಹನ ಮಾಲೀಕರಿಗೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕಂಪನಿಯ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಕೆಸ್ತೂರ್ ಗೇಟ್ ಬಳಿ ಇರುವ PSN ಆಟೋಮೇಟಿವ್ ಮಾರ್ಕೆಟಿಂಗ್ ಕಂಪನಿ ಮುಂದೆ ನಡೆದಿದೆ.
ಗಾಡಿ ಮಾಲೀಕನ ಬಳಿ ಹೆಚ್ಚುವರಿ ಹಣದ ಬೇಡಿಕೆ ಇಟ್ಟ PSN ಕಂಪನಿ ಸಿಬ್ಬಂದಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬೆಂಗಳೂರಿನ ಸಿದ್ದಾರ್ಥ ನಗರದ ನಿವಾಸಿ ಅಶ್ವತ್ಥನಾರಾಯಣರವರು ಹರೀಶ್ ಕಾರ್ಗೋ ಮೂವರ್ಸ್ ಕಂಪನಿಯ ಮಾಲೀಕರು, ಇವರ ಮಾಲೀಕತ್ವದ ಕೆಎ02ಎಹೆಚ್ 8714 ನೋಂದಣಿ ಸಂಖ್ಯೆ ಗೂಡ್ಸ್ ವಾಹನ ಮೂರ್ಚ್ 29 ರಂದು ಪೆನಗೊಂಡ ಬಳಿ ಅಪಘಾತಕ್ಕೆ ತುತ್ತಾಗಿತ್ತು. ಈ ಹಿನ್ನೆಲೆ ಅದೇ ದಿನ ರಿಪೇರಿ ಮಾಡಿಸಲು ದೊಡ್ಡಬಳ್ಳಾಪುರದ ಕೆಸ್ತೂರ್ ಗೇಟ್ ಬಳಿಯ PSN ಅಟೋಮೇಟಿವ್ ಮಾರ್ಕೆಟಿಂಗ್ ಕಂಪನಿಯಲ್ಲಿ ಬಿಡಲಾಗಿತು.
ವಾಹನದ ರಿಪೇರಿಯ ಸುಮಾರು 5 ಲಕ್ಷ ಹಣವನ್ನ ಓರಿಯಂಟಲ್ ಇನ್ಷುರೆನ್ಸ್ ಕಂಪನಿ ಆನ್ ಲೈನ್ ಮೂಲಕವೇ PSN ಕಂಪನಿಗೆ ಪಾವತಿ ಮಾಡಿದೆ. ಕಂಪನಿಗೆ ಹಣ ಪಾವತಿಯಾದರೂ ಮಾಲೀಕರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟು ಮಾಲೀಕರಿಗೆ ವಂಚನೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
PSN ಕಂಪನಿ ಮ್ಯಾನೇಜರ್ ಯುವರಾಜ್ ಹಾಗೂ ಜನರಲ್ ಮ್ಯಾನೇಜರ್ ಸುದರ್ಶನ್ 34 ಸಾವಿರ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಾರೆ ವಾಹನ ಕೊಡುವುದಿಲ್ಲವೆಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಅಶ್ವತ್ಥನಾರಾಯಣ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
PSN ಕಂಪನಿ ಸಿಬ್ಬಂದಿ ದೌರ್ಜನ್ಯ ಹಾಗೂ ಕಿರುಕುಳ ವಿರೋಧಿಸಿ ಕನ್ನಡಪರ ಸಂಘಟನಗಳು ಕಂಪನಿ ಮುಂದೆ ಪ್ರತಿಭಟನೆಯನ್ನ ನಡೆಸಿದವು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ರಘುವರ್ಮಾ, ಕಳೆದ ಎರಡು ತಿಂಗಳಿಂದ ಅಶ್ವತ್ಥನಾರಾಯಣರವರ ಗಾಡಿಯನ್ನ ಕೊಡದೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದಾರೆ, ಇನ್ಷುರೆನ್ಸ್ ಕಂಪನಿಯಿಂದ ಹಣ ಪಾವತಿಯಾಗಿದ್ರು ಹಣ ಬಂದಿಲ್ಲ ಎಂದು ಸುಳ್ಳು ಹೇಳಿ ಗೂಡ್ಸ್ ಮಾಲೀಕರಿಗೆ ಎರಡು ತಿಂಗಳ ಆದಾಯಕ್ಕೆ ಕನ್ನ ಹಾಕಿದ್ದಾರೆ, ಎರಡು ತಿಂಗಳಿಂದ ಸುಮಾರು 90 ಹಣ ನಷ್ಟವನ್ನ ಅನುಭವಿಸಿದ್ದಾರೆ ಅಶ್ವತ್ಥನಾರಾಯಣರವರು, ಅವರಿಗಾದ ನಷ್ಟವನ್ನ ತುಂಬಿಕೊಡಬೇಕು ಮತ್ತು PSN ಕಂಪನಿ ಸಿಬ್ಬಂದಿಗಳಾದ ಯುವರಾಜ್ ಮತ್ತು ಸುದರ್ಶನ್ ಗೂಡ್ಸ್ ಮಾಲೀಕರ ಬಳಿ ಕ್ಷಮೆ ಕೇಳಿ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ - ಮುಷ್ಕರ - ಮುತ್ತಿಗೆ - ಚಳವಳಿ - ಬಂದ್ - ಸತ್ಯಾಗ್ರಹ - ಹರತಾಳ - ಅಮರಣಾಂತ…
‘ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರು ಕೇಳಿದ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಬೇಡಿ’ ಎಂದು ಇಂಧನ ಸಚಿವ ಹಾಗೂ ಸರ್ವಜ್ಞ ನಗರ…
ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 18 ಲಕ್ಷ ಮೌಲ್ಯದ 1296…
ಹೊಂಗೆ ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ತಲೆ ಬುರುಡೆ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್…
ಸಿದ್ದಾಪುರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಜಲ್ಲಿ ತುಂಬಿದ ಲಾರಿಯೊಂದು ರಸ್ತೆಗೆ ಉರುಳಿದ ಪರಿಣಾಮ,…
ದೇವರಹಿಪ್ಪರಗಿ: ಪತ್ನಿಯನ್ನು ತಾನೇ ಕೊಂ*ದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ…