
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಯೋಗ್ಯತೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಬರೀ ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಮುಳುಗಿದೆ. ಗ್ರಾಮ ಪಂ, ತಾಲೂಕು ಪಂ, ಜಿಲ್ಲಾ ಪಂ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮಾಡಲು ಯೋಗ್ಯತೆ ಇಲ್ಲ ಅವರಿಗೆ. ಆದ್ದರಿಂದ ಇವರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆಗಳಲ್ಲಿ ಪಚ್ಚಿಮ ಬಂಗಾಳದಲ್ಲಿ ಹೇಗಾಯಿತೋ ಅದೇರೀತಿ ಇಲ್ಲಿ ಕೂಡ ಕಾಂಗ್ರೆಸ್ ಆಗುತ್ತೆ. ಕಾಂಗ್ರೆಸ್ ನಾಪತ್ತೆ ಆಗುವ ಪರಿಸ್ಥಿತಿಗೆ ಬರುತ್ತೆ ಎಂದರು..
ಉಪಚುನಾವಣೆಗಳ ಕುರಿತು ಮಾತನಾಡಿದ ಅವರು, “ರಾಜ್ಯದಲ್ಲಿ ನಡೆದ ಉಪಚುನಾವಣೆಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ಕಾರ್ಯಕರ್ತರಂತೆ ಬಳಕೆ ಮಾಡಲಾಗಿದೆ. ಹಣ ಹಂಚಿಕೆ ಮೂಲಕ ಅವರು ಗೆಲುವು ಸಾಧಿಸಿದ್ದಾರೆ. ನಮ್ಮಿಂದಲೂ ಹೆಚ್ಚಿನ ಶ್ರಮ ಅಗತ್ಯವಿತ್ತು ಎಂದರು.
ಕಾಂಗ್ರೆಸ್ ನವರು ವೋಟ್ ಕಳ್ಳರು
ಶೃಂಗೇರಿಯಲ್ಲಿ ಜೀವರಾಜ್ ಅವರು ಅಂದೇ ಗೆದ್ದಿದ್ದರು. ಇವಿಎಂ ನಿಂದ ಯಾರಿಂದ ಯಾರನ್ನೂ ಸೋಲಿಸಲು ಆಗಲ್ಲ. ಅದು ಈಗ ಸಾಬೀತಾಗಿದೆ. ಕೊನೆ ಘಳಿಗೆಯಲ್ಲಿ ಅಂಚೆ ಮತಗಳಿಂದ ಮೋಸ ಮಾಡಿ, 200 ಮತಗಳನ್ನು ಅವರ ಕಡೆ ಹಾಕಿಕೊಂಡು ಮೋಸ ಮಾಡಿ ಗೆದ್ದಿದ್ದರು.
2023ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ಕಾಂಗ್ರೆಸ್ನ ಟಿ.ಡಿ. ರಾಜೇಗೌಡ. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರು ಇಲ್ಲಿ ಗೆದ್ದದ್ದು ಕೇವಲ 201 ಮತಗಳಿಂದ ! ಈ ಫಲಿತಾಂಶ ಹೊರ ಬೀಳುತ್ತಿದ್ದಂತೆ, ಇವರ ಪ್ರತಿಸ್ಪರ್ಧಿ ಬಿಜೆಪಿಯ ಜೀವರಾಜ್, 1822ರ ಅಂಚೆ ಮತಗಳ ಮರು ಎಣಿಕೆ ಮಾಡುವಂತೆ ಕೋರಿ, ಹೈಕೋರ್ಟ್ ಮೆಟ್ಟಿಲೇರಿದರು. ಮರು ಎಣಿಕೆ ನಂತರ, ಜೀವರಾಜ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ನವರು ವೋಟ್ ಕಳ್ಳರು. ಆದ್ದರಿಂದ ಜನ ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ, “ಜನರು ಎಚ್ಚರಿಕೆಯಿಂದ ಇರಬೇಕು. ಚುನಾವಣಾ ಮತ್ತು ರಾಜಕೀಯ ಭ್ರಷ್ಟಾಚಾರವನ್ನು ಸಹಿಸಬಾರದು ಎಂದು ಕರೆ ನೀಡಿದರು.
ಕೇರಳದಲ್ಲಿ 7 ಪಕ್ಷಗಳ ಕಿಚಡಿ ಸರಕಾರ
ರಾಷ್ಟ್ರೀಯ ರಾಜಕೀಯದ ಬಗ್ಗೆ ಮಾತನಾಡಿದ ಅವರು, “ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿರುವ ಸ್ಥಾನ ಕಳೆದುಕೊಳ್ಳುತ್ತಿದೆ. ಇನ್ನೂ ಎರಡು-ಮೂರು ವರ್ಷಗಳಲ್ಲಿ ಕಾಂಗ್ರೆಸ್ ದೇಶದಲ್ಲಿ ಇರುವುದೇ ಅನುಮಾನ” ಎಂದು ಹೇಳಿದರು. ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ 7 ಮಿತ್ರ ಪಕ್ಷಗಳ ಕಿಚಡಿ ಸರಕಾರ ಬರುತ್ತದೆ. ಕಾಂಗ್ರೆಸ್ ಭಿಕ್ಷುಕರ ಪಾರ್ಟಿ. ಈವರೆಗೆ ಡಿಎಂಕೆ ಜತೆ ಇದ್ದರು. ಈಗ ಅವರನ್ನು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ನ್ಯಾಷನಲ್ ಪಾರ್ಟಿ ಅಲ್ಲ ಭಿಕ್ಷುಕರ ಪಾರ್ಟಿ ಕಿಡಿಕಾರಿದರು.
ಪಶ್ಚಿಮ ಬಂಗಾಳದಲ್ಲಿ ಮೊದಲಿನಿಂದಲೂ ಗೂಂಡಗಿರಿ
ಪಶ್ಚಿಮ ಬಂಗಾಳದಲ್ಲಿ ಮೊದಲಿನಿಂದಲೂ ಗೂಂಡಗಿರಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅತ್ಯಾಚಾರ, ಅನಾಚಾರ ಬೇಕಾದಷ್ಟು ಅಲ್ಲಿ ನಡೆಯುತ್ತಿದೆ. ಚುನಾವಣೆ ಎಂದರೆ ಜನರಿಂದ ವೋಟ್ ಪಡೆದುಕೊಳ್ಳುವುದು. ಆದರೆ, ಅಲ್ಲಿ ಜನರ ವೋಟುಗಳನ್ನು ಅವರೇ ಹಾಕಿಕೊಂಡು ಅಧಿಕಾರಕ್ಕೆ ಬರುತ್ತಿದ್ದರು. ಈ ಬಾರಿ ಮಾತ್ರ ಜನರಿಗೆ ವೋಟ್ ಹಾಕುವ ಅವಕಾಶ ಸಿಕ್ಕಿತ್ತು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಪಶ್ಚಿಮ ಬಂಗಾಳದ ಜನರು ಗೂಂಡಾಗಿರಿಗೆ ಹೆದರಿ ಮನೆಯಲ್ಲಿ ಇರುತ್ತಿದ್ದರು. ಮಮತಾ ಬ್ಯಾನರ್ಜಿ ಸರಕಾರ ಬಾಂಗ್ಲಾದೇಶದ ಜನರನ್ನು ಕರೆತಂದು ಮತ ಬ್ಯಾಂಕ್ ಮಾಡಿಟ್ಟುಕೊಂಡಿದ್ದರು. ಅಲ್ಲಿ ಬಾರ್ಡರ್ ಹಾಕಿಕೊಳ್ಳಲು ಒಪ್ಪುತ್ತಿರಲಿಲ್ಲ. ಪ್ರಧಾನಿ ಮೋದಿ ಉತ್ತಮ ನಿರ್ಧಾರ ತೆಗೆದುಕೊಂಡು ಹೊರ ದೇಶದಿಂದ ಬಂದವರ ದಾಖಲೆ ಪರಿಶೀಲಿಸಲು ಆರಂಭಿಸಿದಾಗ ದಾಖಲೆ ಇಲ್ಲದವರು(ನುಸುಳುಕೋರರು) ಅಲ್ಲಿಂದ ಓಡಿ ಹೋಗಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲುವ ಮೂಲಕ ಯಾವ ಜನರನ್ನು ಪಶ್ಚಿಮ ಬಂಗಾಳದಲ್ಲಿ ಒತ್ತೆಯಾಳ ಮಾಡಿಕೊಂಡಿದ್ದರೋ ಅವರ ಬಿಡುಗಡೆಗೊಳಿಸಿದಂತಾಗಿದೆ ಎಂದರು.