ಯುವಕನಿಗೆ ಅಪಘಾತ, ಗಂಭೀರ ಗಾಯ: ಮೆಡಿಕವರ್ ಆಸ್ಪತ್ರೆಯ ಸೂಪರ್ ಮೈಕ್ರೋ ಶಸ್ತ್ರಚಿಕಿತ್ಸೆ

ಬೆಂಗಳೂರು, ವೈಟ್‌ಫೀಲ್ಡ್‌: ಬೈಕ್ ಅಪಘಾತದಲ್ಲಿ ಭಾರೀ ಗಾಯಗೊಂಡು, ಕೈ ಹಾಗೂ ಭುಜ ಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡ ಸ್ಥಿತಿಗೆ ತಲುಪಿದ್ದ 23 ವರ್ಷದ ದೇಬ್‌ ರಂಜನ್‌ ಎಂಬ ಯುವಕನಿಗೆ, ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯು ನವಜೀವನ ನೀಡಿದೆ.

ಕೊಲ್ಕತ್ತ ಮೂಲದ ದೇಬ್‌ ರಂಜನ್‌ ಬೈಕ್‌ನಿಂದ ಬಿದ್ದು ಭುಜ ಮತ್ತು ಕತ್ತಿನ ನರಗಳು ಸಂಪೂರ್ಣವಾಗಿ ತೀವ್ರವಾಗಿ ಕೆಲಸ ಮಾಡೋಕೆ ಆಗದ ಸ್ಥಿತಿಯಲ್ಲಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಿತಾಂಶ ಇಲ್ಲದ ಕಾರಣ, ಅವರು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಸುರೇಶ್ ಕೆ ಅವರನ್ನು ಸಂಪರ್ಕಿಸಿದರು.

ಸಂದರ್ಶನ ಮತ್ತು ಸ್ಕ್ಯಾನ್ ಪರೀಕ್ಷೆಗಳಿಂದ ಭುಜದ ಹಾಗೂ ಕತ್ತಿನ ಬ್ರಾಚಿಯಲ್ ಪ್ಲೆಕ್ಸಸ್ ನರಗಳು ಸಂಪೂರ್ಣವಾಗಿ ಕಟ್ ಆಗಿರುವುದು ಪತ್ತೆಯಾಯಿತು. ತಕ್ಷಣವೇ ಡಾ. ಸುರೇಶ್ ಅವರು ಸೂಪರ್ ಮೈಕ್ರೋ ಶಸ್ತ್ರಚಿಕಿತ್ಸೆ ನಡೆಸಿದರು. ಈ ಶಸ್ತ್ರಚಿಕಿತ್ಸೆ ಅತ್ಯಂತ ಸೂಕ್ಷ್ಮವಾದ ಕಾರ್ಯವಿಧಾನವಾಗಿದ್ದು, ಭುಜದ ನಡು ನರಗಳನ್ನು ಪುನರ್‌ಜೋಡಿಸುವಲ್ಲಿ ಯಶಸ್ವಿಯಾಯಿತು.

ಇದಕ್ಕು ಮೇಲೆ ಅರ್ಥೋಪೆಡಿಕ್ ಸರ್ಜನ್ ಡಾ. ಕೃಷ್ಣಕುಮಾರ್ ಅವರ ಸಹಕಾರದಿಂದ ಭುಜದ ಕೊಲ್ಲೇಬೋನು ಮುರಿತಕ್ಕೂ ಶಸ್ತ್ರಚಿಕಿತ್ಸೆ ನಡೆಯಿತು.

ಇಂದು, ದೇಬ್‌ ರಂಜನ್ ಸಂಪೂರ್ಣವಾಗಿ ಆರೋಗ್ಯ ಲಾಭಿಸಿ, ಯಾವ ಸಮಸ್ಯೆಯೂ ಇಲ್ಲದೆ ದೈನಂದಿನ ಜೀವನಕ್ಕೆ ಮರಳಿದ್ದಾರೆ. “ರೋಗಿಯ ಆರೋಗ್ಯದಲ್ಲಿ ಬಂದ ಸುಧಾರಣೆಯಿಂದ ನಾವು ಸಂತೋಷಪಡುವೆವು. ಇಂತಹ ಯಶಸ್ಸುಗಳು ನಮ್ಮ ತಂಡದ ಕಾರ್ಯಪಟುತ್ವದ ಪ್ರತಿಬಿಂಬವಾಗಿವೆ ಎಂದು ಡಾ. ಸುರೇಶ್ ಕೆ ಹೇಳಿದರು.

Ramesh Babu

Journalist

Recent Posts

ಪಾಲನಜೋಗಿಹಳ್ಳಿ ಬಳಿ ಅಪಘಾತ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…

2 hours ago

ಚಿಂತಕರು ಸ್ವಾಮಿ ನಾವು ಚಿಂತಕರು….

ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ‌ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…

3 hours ago

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ನೇಮಕ

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…

16 hours ago

ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ರೂ. 4.8 ಲಕ್ಷದಷ್ಟು ಸಾಲದ ಹೊರೆ ಇದೆ- ಸಿಎಂ‌ ಸಿದ್ದರಾಮಯ್ಯ

ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…

17 hours ago

ಮದುವೆ ಮಾಡಿಸಲಿಲ್ಲವೆಂದು ತಾಯಿಯನ್ನೇ ಕೊಲೆಗೈದ ಪಾಪಿ ಪುತ್ರ

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಶ್ರವಣಬೆಳಗೊಳದಲ್ಲಿ ಪಾಪಿ ಪುತ್ರನೊಬ್ಬ ಮದುವೆ ಮಾಡಿಸಲಿಲ್ಲವೆಂದು ತಾಯಿಯನ್ನೇ ಕೊಲೆಗೈದಿದ್ದಾನೆ. ಗಂಗಮ್ಮ (65), ಕೊಲೆಯಾದ ಮಹಿಳೆ.…

18 hours ago

ವಿ. ಶಾಂತಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…

22 hours ago