ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಮುಂದಾದ “ದೇವರ ಆಟ ಬಲ್ಲವರಾರು ಚಿತ್ರ ತಂಡ”ಕ್ಕೆ ಮೊದಲ ಹಂತ ಗಿನ್ನಿಸ್ ಯಶಸ್ಸು ಲಭಿಸಿದೆ. ಇದರ ಪೂರ್ತಿ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುವುದರಿಂದ ಕಂಪ್ಲೀಟ್ ಸೆಟ್ ಇಲ್ಲಿಯೇ ಮಾಡಲಾಗಿದೆ.
36 ಗಂಟೆಯ ಟೈಮ್ ಲೈನ್ ಇಟ್ಟುಕೊಂಡು ಸೆಟ್ ವರ್ಕ್ ಆರಂಭಿಸಿದ ಚಿತ್ರ ತಂಡ ಕೇವಲ 22 ಗಂಟೆ 34 ನಿಮಿಷ 58 ಸೆಕೆಂಡ್ನ ನಿಗದಿತ ಸಮಯಕ್ಕಿಂತ ಮೊದಲೆ ಮುಗಿಸಿ ಗಿನ್ನಿಸ್ ಮೊದಲ ಹಂತ ಕಂಪ್ಲಿಟ್ ಮಾಡಿ ಗೆಲುವಿನ ನಗೆಬೀರಿದೆ.
ಚೆನ್ನೈನ ಆರ್ಟ್ ಡೈರೆಕ್ಟರ್ ರಾಷ್ಟ್ರ ಪ್ರಶಸ್ತಿ ವಿಜೇತ ತೆಲುಗಿನ “ಪರದೇಶಿ” ಸಿನಿಮಾ ಖ್ಯಾತಿಯ ಬಾಲಚಂದ್ರನ್ ರವರು ಈ ಸೆಟ್ ನಿರ್ಮಾಣ ಮಾಡಿದ್ದು, ನಿಗದಿತ ಸಮಯಕ್ಕೆ ಮೊದಲೇ ನಿರ್ಮಿಸಿ ದಾಖಲೆ ಸೃಷ್ಟಿಸಿದ್ದಾರೆ.
“ಪಿರಂಗಿಪುರ” ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ದನ್.ಪಿ ಜಾನಿ ಈ ಸಿನಿಮ ನಿರ್ದೇಶನ ಮಾಡಿತ್ತಿದ್ದು, ಮೊದಲ ಹಂತ ಸೆಟ್ ವರ್ಕ್ ಕಂಪ್ಲಿಟ್ ಮಾಡಿದ್ದಾರೆ. ನಿನ್ನೆ ಬೆಳಗ್ಗೆ 10ಗಂಟೆಗೆ ಗಿನ್ನಿಸ್ ಪ್ರಕ್ರಿಯೆಗೆ ಸಹಿಹಾಕಿದ್ದರು. 36 ಗಂಟೆಯ ಟೈಮ್ ಲೈನ್ ಇಟ್ಟುಕೊಂಡು ಆರಂಭಿಸಿದ ಚಿತ್ರತಂಡ ಕೇವಲ 22 ಗಂಟೆಯಲ್ಲಿ ಕಂಪ್ಲಿಟ್ ಮಾಡಿ ಮೊದಲ ಹಂತದ ಗಿನ್ನಿಸ್ ದಾಖಲಿಸಿದೆ.
ಸೆಟ್ ವರ್ಕ್ ನಲ್ಲಿ 170 ಜನಗಳನ್ನೊಳಗೊಂಡ ತಂಡ ಹಗಲು-ರಾತ್ರಿ ಶ್ರಮಿಸಿ ವೇಗವಾಗಿ ಕಂಪ್ಲಿಟ್ ಮಾಡಿ ದಾಖಲೆ ಸೃಷ್ಟಿಸಿದೆ. 150 ಎಕರೆ ಜಾಗದಲ್ಲಿ 150×80 ಅಡಿ ಉದ್ದ ಮತ್ತು ಅಗಲ 19 ಅಡಿ ಎತ್ತರ ವಿಸ್ತೀರ್ಣದ ಬಹುದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ.
ಬಿಗ್ ಬಾಸ್ ಖ್ಯಾತಿಯ ಅರ್ಜುನ್ ರಮೇಶ್ ನಾಯಕ ನಟನಾಗಿ ಮತ್ತು ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾ ವರ್ಷ ವಿಶ್ವನಾಥ್, ಸಂಪತ್ ರಾಮ್ ಅರ್ಜುನ್, ಮೇದಿನಿ ಕೆಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪ್ರಿಸ್ವಸ್ ಸ್ಟುಡಿಯೋಸ್ ಬ್ಯಾನರ್ ನಡಿ ಮೂಡಿ ಬರ್ತಾ ಇರೋ ಈ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲು ಪ್ಲಾನ್ ಮಾಡಿಕೊಂಡಿದೆ. ಈ ಸಿನಿಮಾಕ್ಕಾಗಿ ಕಳೆದು ಒಂದು ವರ್ಷದಿಂದ ತಯಾರಿ ನಡೆಸಿ ನಾಯಕ ನಟ ಅರ್ಜುನ್ ರಮೇಶ್ ಪಾತ್ರಕ್ಕಾಗಿ 14 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಮೂರು ವರ್ಷಗಳ ಬಳಿಕ ಕನ್ನಡ ಚಿತ್ರರಂಗ ಕಂಬ್ಯಾಕ್ ಮಾಡಿದ ಸಿಂಧು ಲೋಕನಾಥ್ ಆರು ತಿಂಗಳಿನಿಂದ ಚಿತ್ರಕ್ಕಾಗಿ ತಾಲೀಮು ನಡೆಸಿದ್ದಾರೆ.
ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…
ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…
ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…