ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಮುಂದಾದ “ದೇವರ ಆಟ ಬಲ್ಲವರಾರು ಚಿತ್ರ ತಂಡ”ಕ್ಕೆ ಮೊದಲ ಹಂತ ಗಿನ್ನಿಸ್ ಯಶಸ್ಸು ಲಭಿಸಿದೆ. ಇದರ ಪೂರ್ತಿ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುವುದರಿಂದ ಕಂಪ್ಲೀಟ್ ಸೆಟ್ ಇಲ್ಲಿಯೇ ಮಾಡಲಾಗಿದೆ.
36 ಗಂಟೆಯ ಟೈಮ್ ಲೈನ್ ಇಟ್ಟುಕೊಂಡು ಸೆಟ್ ವರ್ಕ್ ಆರಂಭಿಸಿದ ಚಿತ್ರ ತಂಡ ಕೇವಲ 22 ಗಂಟೆ 34 ನಿಮಿಷ 58 ಸೆಕೆಂಡ್ನ ನಿಗದಿತ ಸಮಯಕ್ಕಿಂತ ಮೊದಲೆ ಮುಗಿಸಿ ಗಿನ್ನಿಸ್ ಮೊದಲ ಹಂತ ಕಂಪ್ಲಿಟ್ ಮಾಡಿ ಗೆಲುವಿನ ನಗೆಬೀರಿದೆ.
ಚೆನ್ನೈನ ಆರ್ಟ್ ಡೈರೆಕ್ಟರ್ ರಾಷ್ಟ್ರ ಪ್ರಶಸ್ತಿ ವಿಜೇತ ತೆಲುಗಿನ “ಪರದೇಶಿ” ಸಿನಿಮಾ ಖ್ಯಾತಿಯ ಬಾಲಚಂದ್ರನ್ ರವರು ಈ ಸೆಟ್ ನಿರ್ಮಾಣ ಮಾಡಿದ್ದು, ನಿಗದಿತ ಸಮಯಕ್ಕೆ ಮೊದಲೇ ನಿರ್ಮಿಸಿ ದಾಖಲೆ ಸೃಷ್ಟಿಸಿದ್ದಾರೆ.
“ಪಿರಂಗಿಪುರ” ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ದನ್.ಪಿ ಜಾನಿ ಈ ಸಿನಿಮ ನಿರ್ದೇಶನ ಮಾಡಿತ್ತಿದ್ದು, ಮೊದಲ ಹಂತ ಸೆಟ್ ವರ್ಕ್ ಕಂಪ್ಲಿಟ್ ಮಾಡಿದ್ದಾರೆ. ನಿನ್ನೆ ಬೆಳಗ್ಗೆ 10ಗಂಟೆಗೆ ಗಿನ್ನಿಸ್ ಪ್ರಕ್ರಿಯೆಗೆ ಸಹಿಹಾಕಿದ್ದರು. 36 ಗಂಟೆಯ ಟೈಮ್ ಲೈನ್ ಇಟ್ಟುಕೊಂಡು ಆರಂಭಿಸಿದ ಚಿತ್ರತಂಡ ಕೇವಲ 22 ಗಂಟೆಯಲ್ಲಿ ಕಂಪ್ಲಿಟ್ ಮಾಡಿ ಮೊದಲ ಹಂತದ ಗಿನ್ನಿಸ್ ದಾಖಲಿಸಿದೆ.
ಸೆಟ್ ವರ್ಕ್ ನಲ್ಲಿ 170 ಜನಗಳನ್ನೊಳಗೊಂಡ ತಂಡ ಹಗಲು-ರಾತ್ರಿ ಶ್ರಮಿಸಿ ವೇಗವಾಗಿ ಕಂಪ್ಲಿಟ್ ಮಾಡಿ ದಾಖಲೆ ಸೃಷ್ಟಿಸಿದೆ. 150 ಎಕರೆ ಜಾಗದಲ್ಲಿ 150×80 ಅಡಿ ಉದ್ದ ಮತ್ತು ಅಗಲ 19 ಅಡಿ ಎತ್ತರ ವಿಸ್ತೀರ್ಣದ ಬಹುದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ.
ಬಿಗ್ ಬಾಸ್ ಖ್ಯಾತಿಯ ಅರ್ಜುನ್ ರಮೇಶ್ ನಾಯಕ ನಟನಾಗಿ ಮತ್ತು ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾ ವರ್ಷ ವಿಶ್ವನಾಥ್, ಸಂಪತ್ ರಾಮ್ ಅರ್ಜುನ್, ಮೇದಿನಿ ಕೆಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪ್ರಿಸ್ವಸ್ ಸ್ಟುಡಿಯೋಸ್ ಬ್ಯಾನರ್ ನಡಿ ಮೂಡಿ ಬರ್ತಾ ಇರೋ ಈ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲು ಪ್ಲಾನ್ ಮಾಡಿಕೊಂಡಿದೆ. ಈ ಸಿನಿಮಾಕ್ಕಾಗಿ ಕಳೆದು ಒಂದು ವರ್ಷದಿಂದ ತಯಾರಿ ನಡೆಸಿ ನಾಯಕ ನಟ ಅರ್ಜುನ್ ರಮೇಶ್ ಪಾತ್ರಕ್ಕಾಗಿ 14 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಮೂರು ವರ್ಷಗಳ ಬಳಿಕ ಕನ್ನಡ ಚಿತ್ರರಂಗ ಕಂಬ್ಯಾಕ್ ಮಾಡಿದ ಸಿಂಧು ಲೋಕನಾಥ್ ಆರು ತಿಂಗಳಿನಿಂದ ಚಿತ್ರಕ್ಕಾಗಿ ತಾಲೀಮು ನಡೆಸಿದ್ದಾರೆ.
ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…
ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…
ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…
ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಶ್ರವಣಬೆಳಗೊಳದಲ್ಲಿ ಪಾಪಿ ಪುತ್ರನೊಬ್ಬ ಮದುವೆ ಮಾಡಿಸಲಿಲ್ಲವೆಂದು ತಾಯಿಯನ್ನೇ ಕೊಲೆಗೈದಿದ್ದಾನೆ. ಗಂಗಮ್ಮ (65), ಕೊಲೆಯಾದ ಮಹಿಳೆ.…
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…