ಮೊದಲನೇ ಹೆಂಡತಿಗೆ ಗೊತ್ತಿಲ್ಲದೇ ಎರಡನೇ ಮದುವೆಗೆ ಪತಿರಾಯ ಸಜ್ಜು: ಮದುವೆ ಮನೆಗೆ ಮೊದಲನೇ ಹೆಂಡತಿ ದಿಢೀರ್ ಎಂಟ್ರಿ: ಹೆಂಡತಿಯನ್ನ ನೋಡಿ ಗಂಡ ಕಕ್ಕಾಬಿಕ್ಕಿ: ಪೊಲೀಸ್ ಪ್ರೊಟೆಕ್ಷನ್ ನಲ್ಲಿ‌ 2ನೇ ಮದುವೆ ನಿಲ್ಲಿಸಿದ ಹೆಂಡತಿ

ಆಕೆ‌ ನೂರಾರು ಕನಸುಗಳನ್ನ ಹೊತ್ತು ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಎರಡು ಗಂಡು ಮಕ್ಕಳು ಕೂಡ ಇವೆ.  ಮದುವೆ ಆಗಿ 18 ವರ್ಷ ಆದ ನಂತರ ಗಂಡ‌ ಈಗ ಎರಡನೇ ಮದುವೆ ಆಗೋದಕ್ಕೆ ಮುಂದಾಗಿದ್ದಾನೆ. ಆದರೆ, ಸಡನ್ ಆಗಿ ಎಂಟ್ರಿ ಕೊಟ್ಟ ಮೊದಲ ಹೆಂಡತಿ ಮದುವೆಗೆ ಸಿದ್ಧನಿದ್ದ ಗಂಡನನ್ನ ಪೊಲೀಸ್ ಠಾಣೆ ಮೆಟ್ಟಿಲು ಏರಿಸುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆ ಘಟನೆ ನಡೆದಿದ್ದು ಎಲ್ಲಿ ಅಂತಿರಾ ಈ ಸ್ಟೋರಿ ಓದಿ………

ಹೌದು… ಹೀಗೆ ಮದುವೆ ಮನೆಯ ಬಳಿ ಪೊಲೀಸರೊಂದಿಗೆ ಮಾತನಾಡುತ್ತಿರುವ ಮಹಿಳೆ, ಮದುವೆಗೆ ಸಿದ್ಧನಾಗಿದ್ದ ಮಧುಮಗ ಪೊಲೀಸ್ ಜೀಪ್‌ ಹತ್ತುತ್ತಿರುವ ಅಕ್ಕ ಪಡೆಯ ಸಿಬ್ಬಂದಿ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೇವನಹಳ್ಳಿಯ ಕೋಡಗುರ್ಕಿ ಗ್ರಾಮದ ಹೊರವಲಯದ ಮುನೇಶ್ವರ ದೇವಾಲಯದ ಬಳಿ.

ಸುರೇಶನನ್ನು ನೊಂದ ಮಹಿಳೆ ಕಳೆದ 18 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದಳು. ಪೋಷಕರ ವಿರೋಧದ ನಡುವೆಯೂ ಸುರೇಶನೇ ಬೇಕೆಂದು ಸಾಕಷ್ಟು ನಂಬಿಕೆಯಿಟ್ಟು ಮದುವೆ ಆಗಿದ್ದಳು. ಮೊದ ಮೊದಲು ಚೆನ್ನಾಗಿ ಇದ್ದ ಸಂಸಾರ, ಸುರೇಶನ ಕುಡಿತದ ಚಟಕ್ಕೆ ಬಿರುಕು ಪ್ರಾರಂಭವಾಯಿತು. ‌ನಂತರ ಇವರಿಬ್ಬರ ಮಧ್ಯೆ ಸಾಕಷ್ಟು ಗಲಾಟೆಗಳಾಗಿ ರಾಜಿ ಪಂಚಾಯತಿ ಕೂಡ ನಡೆದಿವೆ. ಎದೆ ಎತ್ತರಕ್ಕೆ ಎರಡು ಗಂಡು ಮಕ್ಕಳಿದ್ದರೂ ಈಗ ಸುರೇಶ ಮತ್ತೊಂದು ಮದುವೆಗೆ ಮುಂದಾಗಿದ್ದಾನೆ.

ಇನ್ನೂ ನೊಂದ ಮಹಿಳೆ ಮತ್ತು ಸುರೇಶನ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಗ ಇಬ್ಬರೂ ಕೂಡ ಕಳೆದ ಒಂದೂವರೆ ವರ್ಷದ ಹಿಂದೆ ದೂರವಾಗಿದ್ದರು. ಈ ವೇಳೆ ಮಕ್ಕಳ ಪೋಷಣೆಗೆ ಜೀವನಾಂಶ ಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದ ಸುರೇಶ್, ಇದೀಗ ನಾಟಕವಾಡಲು ಪ್ರಾರಂಭ ಮಾಡಿದ್ದಾನೆ. ನಂತರ ಮೊದಲ ಹೆಂಡತಿಗೆ ತಿಳಿಯದೇ ಎರಡನೇ ಮದುವೆಗೆ ಮುಂದಾಗಿದ್ದಾನೆ.‌ಈ ವಿಷಯ ತಿಳಿದ ಮೊದಲ ಹೆಂಡತಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ, ನಂತರ ಅಕ್ಕಪಡೆಯ ಸಹಾಯದಿಂದ ಎರಡನೇ ಮದುವೆ ನಡೆಯುತ್ತಿದ್ದ ದೇವಾಲಯದ ಬಳಿಗೆ ಹೋಗಿ ಮದುವೆ ನಿಲ್ಲಿಸಿದ್ದಾಳೆ. ಪೊಲೀಸರು ಅರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆದುತ್ತಿದ್ದಾರೆ.

 

ಒಟ್ಟಾರೆ, ಪ್ರೀತಿಸಿ ಮದುವೆ ಆದ ಸುರೇಶ, ಮೊದಲ ಹೆಂಡತಿಯನ್ನೂ ಸರಿಯಾಗಿ ನೋಡಿಕೊಳ್ಳದೆ ಈಗ ಎರಡನೇ ಮದುವೆ ಆಗಲು ಹೋಗಿ ಇನ್ನೊಂದು ಮಹಿಳೆಯ ಬಾಳಲ್ಲಿ ಕುಡ ವಿಲನ್ ಆಗಿದ್ದಾನೆ. ಮದುವೆಗೆ ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿದ್ದ ಪೋಷಕರು ಈಗ ದಿಕ್ಕೇ ತೋಚದ ಸ್ಥಿತಿಗೆ ತಲುಪಿದ್ದಾರೆ‌.

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

1 hour ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

2 hours ago

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆರೋಗ್ಯ ಕಾಳಜಿ; ಹೀಲಿನ್ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…

5 hours ago

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

20 hours ago

ತೂಬಗೆರೆ ಸೊಸೈಟಿ ಅಧ್ಯಕ್ಷರಾಗಿ ವಾಸುದೇವ್, ಉಪಾಧ್ಯಕ್ಷರಾಗಿ ಸತ್ಯನಾರಾಯಣಸ್ವಾಮಿ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…

1 day ago

80ರ ಹೊಸ್ತಿಲಲ್ಲಿ ಭಾರತ…..

ಅಂತೂ ಇಂತೂ, ಹಾಗೂ ಹೀಗೂ ಸ್ವಾತಂತ್ರ್ಯ ಪಡೆದ ನಂತರದ 79 ವರ್ಷಗಳನ್ನು ಪೂರೈಸಿದ್ದೇವೆ. ಬಹುತೇಕ ಒಂದು ಪೀಳಿಗೆ ಅಂತ್ಯವಾಗಿ ಮುಂದಿನ…

1 day ago