ಮೇಲಿನ ಜೂಗಾನಹಳ್ಳಿ ಕ್ರಿಕೆಟರ್ಸ್ ವತಿಯಿಂದ ದಿವಂಗತ ಡಾ.ಪುನಿತ್ ರಾಜ್ಕುಮಾರ್ರವರ ಸವಿನೆನಪಿಗಾಗಿ ತಾಲೂಕಿನ ಮೇಲಿನಜೂಗಾನಹಳ್ಳಿ ಗ್ರಾಮದಲ್ಲಿ ಮಾ.14ರ ಶುಕ್ರವಾರದಿಂದ ಮಾ.16ರ ಭಾನುವಾರದವರೆಗೆ “ಟೆನ್ನಿಸ್ (ವಿಕ್ಕಿ) ಬಾಲ್ ಕ್ರಿಕೆಟ್ ಟೂರ್ನಿಮೆಂಟ್” ನ್ನು ಆಯೋಜನೆ ಮಾಡಲಾಗಿದೆ.
ಮೂರು ದಿನಗಳ ಕಾಲ ನಡೆಯುವ ಟೆನ್ನಿಸ್ ಬಾಲ್ (ವಿಕ್ಕಿ) ಕ್ರಿಕೇಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಆಸಕ್ತಿಯುಳ್ಳ ತಂಡಗಳು ತಮ್ಮ ತಂಡದ ಹೆಸರನ್ನು ಮಾ.12ರ ಬುಧವಾರದಂದು ಸಂಜೆ 6 ಗಂಟೆಯೊಳಗೆ ನೊಂದಾಯಿಸಿಕೊಳ್ಳತಕ್ಕದ್ದು.
ಬಹುಮಾನ ಹಾಗೂ ಪ್ರವೇಶ ಶುಲ್ಕ ವಿವರ
ಪ್ರಥಮ ಬಹುಮಾನ : ರೂ. 25001/- ಮತ್ತು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಬಹುಮಾನ : ರೂ. 15001/- ಮತ್ತು ಟ್ರೋಫಿ ಇರುತ್ತದೆ. ಪ್ರವೇಶ ಶುಲ್ಕ 1999 ನಿಗದಿ ಮಾಡಲಾಗಿದೆ.
ನಿಬಂಧನೆಗಳು : ಎಲ್ಲಾ ಪಂದ್ಯಗಳು ಐ.ಸಿ.ಸಿ. ನಿಯಮಗಳಿಗೆ ಒಳಪಟ್ಟಿರುತ್ತವೆ (ಲೆಗ್ಬೈಸ್ & ಎಲ್.ಬಿ. ಡಬ್ಲ್ಯೂಯೊ ಹೊರತುಪಡಿಸಿ). ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ ಇದಕ್ಕೆ ಪ್ರತಿಯಾಗಿ ಅನಧಿಕೃತವಾಗಿ ವಾಗ್ವಾದ ಮಾಡಿದ್ದಲ್ಲಿ ಅಂತಹ ತಂಡವನ್ನು ಟೂರ್ನಿಯಿಂದ ಕೈ ಬಿಡಲಾಗುವುದು. ಪಂದ್ಯದ ಪ್ರತಿ ಇನ್ನಿಂಗ್ಸ್ 6 ಓವರ್ಗಳಿಗೆ ಸೀಮಿತವಾಗಿರುತ್ತದೆ. ಒಂದು ತಂಡದಲ್ಲಿ ಆಡಿರುವ ಆಟಗಾರನಿಗೆ ಮತ್ತೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ. ಯಾವುದೇ ತಂಡ ನಿರ್ದಿಷ್ಟ ಸಮಯಕ್ಕೆ ಹಾಜರಿಲ್ಲವಾದಲ್ಲಿ ಅಂತಹ ತಂಡಕ್ಕೆ ವಾಕ್ವರ್ ನೀಡಲಾಗುವುದು. ಪ್ರತಿ ದಿನ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಪ್ರತಿ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಇರುತ್ತದೆ. ಪ್ರತಿ ಆಟಗಾರರು ಆಧಾರ್ ಕಾರ್ಡ್ನ್ನು ಜೊತೆಯಲ್ಲಿ ಕಡ್ಡಾಯವಾಗಿ ತರತಕ್ಕದ್ದು. (ಒ.ಟಿ.ಪಿ. ಮುಖಾಂತರ ಪರೀಕ್ಷಿಸಲಾಗುವದು). ಒಂದು ತಂಡದಲ್ಲಿ ಒಂದೇ ಊರಿನ ಹಾಗೂ ಒಂದೇ ವಾರ್ಡ್ ಆಟಗಾರರು ಮಾತ್ರ ಆಡಬೇಕು.
ಹೆಚ್ಚಿನ ಮಾಹಿತಿಗಾಗಿ ಗೋಪಾಲಕೃಷ್ಣ : 9686326887, ಸುನಿಲ್ : 6361591407, ಸುರೇಶ್ : 9110487161, ಮುನಿರಾಜು : 8884978979, ಮುತ್ತರಾಜು : 9066333374, ರಾಜು : 7486949414 ಇವರನ್ನು ಸಂಪರ್ಕಿಸಿ
ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ…
ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…
ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…
ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್, ಸಿಹಿ,…
ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…