ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ನಾಗದೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸುಮಾರು 50 ವರ್ಷದ ನಿರಾಶ್ರಿತ ಮಾನಸಿಕ ಖಿನ್ನತೆಗೆ ಒಳಗಾಗಿ ಚಳಿ, ಗಾಳಿಗೆ ನಲುಗಿ ನೀರು, ಊಟ, ವಸತಿ ಹಾಗೂ ಸ್ನಾನ ಇಲ್ಲದೆ ಸುಮಾರು 4-5 ತಿಂಗಳಿಂದ ಚಿಕತ್ಸೆ ಸಿಗದೆ ಅನಾರೋಗ್ಯದಿಂದ ಬಳಲಿದ ವ್ಯಕ್ತಿಯನ್ನು ರಕ್ಷಿಸಿ, ಪವಿತ್ರ ರೂರಲ್ ಡೆವಲಪ್ಮೆಂಟ್ ಸಂಸ್ಥೆ ವೃದ್ಧಾಶ್ರಮಕೆ ದಾಖಲಿಸಿದ ಜಗದೀಶ ಎನ್ ಎಂ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ. ಚಿಕ್ಕಬಳ್ಳಾಪುರ ಹಾಗೂ ಪ್ರಭಾರ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವ್ಯಕ್ತಿಗೆ ಪುನರ್ವಸತಿ ಕಲ್ಪಿಸಲು ವ್ಯತಿಯೊಂದಿಗೆ ಸುಮಾರು 20 ದಿನಗಳ 8-10 ಗಂಟೆಗಳ ಸಂಭಾಷಣೆ ಹಾಗೂ ಆಪ್ತ ಸಮಾಲೋಚನೆ ನಡೆಸಿ ಮನವೊಲಿಸಲು ಯತ್ನಿಸಿ ಯಶಸ್ಸು ಕಾಣಲಾಯಿತು.
ಸುಮಾರು ನಾಲ್ಕೈದು ತಿಂಗಳಿನಿಂದ ಬೆಂಗಳೂರಿನ ತನ್ನ ಕುಟುಂಬದಿಂದ ದೂರವಾಗಿ ಒಂಟಿಯಾಗಿದ್ದ ಮಾನಸಿಕ ಖಿನ್ನತೆಯ ವ್ಯಕ್ತಿ, ಯಾರಾದರೂ ನೀರು, ಊಟ, ಬ್ರೆಡ್, ಬಿಸ್ಕತ್ ಹಾಗೂ ನೀರಿನ ಬಾಟಲ್ ನ್ನು ಅಕ್ಕ ಪಕ್ಕದ ಮನೆಯವರು, ಗ್ರಾಮಸ್ಥರು ಹಾಗು ರಾಷ್ಟ್ರೀಯ ಹೆದ್ದಾರಿ ದಾರಿ ಹೋಕರು ನೀಡುತ್ತಿದ್ದರು. ಅದೇ ಆತನಗೆ ಆಹಾರದ ಮೂಲವಾಗಿತ್ತು. ನಿರಾಶ್ರಿತ ವ್ಯಕ್ತಿಗೆ ಆಸರೆಯ ಕೈಗಳ ಅವಶ್ಯಕತೆಯೂ ಇತ್ತು.
ಪೋಷಕರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಹೊರಹಾಕುವ ಸಂಸ್ಕೃತಿ ಬಾರದ ರೀತಿ. ಎಲ್ಲಾ ಮಕ್ಕಳಿಗೆ ಮೌಲ್ಯ ಶಿಕ್ಷಣ ಕಡ್ಡಾಯವಾಗಿ ತಿಳಿಸಬೇಕು.
ಈ ರೀತಿಯ ಸಂದರ್ಭಗಳು ಕಂಡುಬಂದರೆ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಬಹುದಾಗಿದೆ.
ರಕ್ಷಣಾ ಕಾರ್ಯಾದಲ್ಲಿ ಸಹಕಾರಿಯಾದ ಹಾಗು ವ್ಯಕ್ತಿಗೆ ತಾತ್ಕಾಲಿಕ ಪುನರ್ವಸತಿ ದೊರಕಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುಮತಿ ಪಡೆದ ಸಂಸ್ಥೆ ಪವಿತ್ರ ರೂರಲ್ ಡೆವಲಪ್ಮೆಂಟ್ ಸಂಸ್ಥೆ, (ವೃದ್ಧಾಶ್ರಮ)ದೊಡ್ಡಬಳ್ಳಾಪುರ ಮುಖ್ಯಸ್ಥರಾದ ಎಂ ಸಿದ್ದಗಂಗಯ್ಯ ರವರಿಗೆ ಧನ್ಯವಾದಗಳು.ಈ ರೀತಿಯ ನಿಸ್ವಾರ್ಥ ಸೇವೆಯ ಸಂಸ್ಥೆಗೆ ಇನ್ನಷ್ಟು ಸೇವೆಯ ಅವಕಾಶ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಜಗದೀಶ ಎನ್ ಎಂ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ. ಚಿಕ್ಕಬಳ್ಳಾಪುರ ಹಾಗೂ ಪ್ರಭಾರ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ತಿಳಿಸಿದರು.
ಇಂದು ಸಂಜೆ ಸುಮಾರು 4:30ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾರಂಭವಾದ ಮಳೆಯು ಸತತವಾಗಿ 7ಗಂಟೆಯವರೆಗೆ ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಅದೇರೀತಿ…
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆ ವರ್ಷದ ಮೊದಲ ಮಳೆ ಸುರಿಯಿತು. ಬಂಗಾಳ…
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…
ದೊಡ್ಡಬಳ್ಳಾಪುರ: ನಗರದ 4 ನೇ ವಾರ್ಡ್ನ ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಸ್ಟಿಮೊ ಫೈ ಕಂಪನಿಯ…
ಕಾನೂನು ರಕ್ಷಕನೇ ಭಕ್ಷಕನಾದರೆ ಸಾಮಾನ್ಯ ಜನರ ಗತಿ ಏನು? ದೂರು ನೀಡಲು ಬಂದವರನ್ನೇ ಲೈಂಗಿಕವಾಗಿ ಬಳಸಿಕೊಳ್ಳುವ ಕಾಮುಕ ಪೊಲೀಸ್ ಅಧಿಕಾರಿಯೊಬ್ಬನ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಲಸಹಳ್ಳಿ ಗೇಟ್ ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ…