ಮಹಿಷ ಚಾರಿತ್ರಿಕ ಹಾಗೂ ಪೌರಾಣಿಕ ಪುರುಷನೆ ಹೊರತು ಕಾಲ್ಪನಿಕ ವ್ಯಕ್ತಿಯಲ್ಲ-ಚಿಂತಕ ಪ್ರೊ.ವಿಠಲ್ ವಗ್ಗನ್

ದೊಡ್ಡಬಳ್ಳಾಪುರ: ನಮ್ಮ ಅಸ್ತಿತ ಮತ್ತು ಅಸ್ಮಿತೆಯ ಸಂಕೇತ ಮಹಿಷ ಎಂದು ಪ್ರಗತಿಪರ ಚಿಂತಕ ಪ್ರೊ.ವಿಠಲ್ ವಗ್ಗನ್ ಹೇಳಿದರು.

ಮಹಿಷ ಉತ್ಸವ ಆಚರಣ ಸಮಿತಿ ನಗರದ ಕನ್ನಡ ಜಾಗೃತ ಭವನದಲ್ಲಿ ಏರ್ಪಡಿಸಿದ್ದ ಮಹಿಷ ಉತ್ಸವವನ್ನು ಅರಳಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಷ ಚಾರಿತ್ರಿಕ ಹಾಗೂ ಪೌರಾಣಿಕ ಪುರುಷನೆ ಹೊರತು ಕಾಲ್ಪನಿಕ ವ್ಯಕ್ತಿಯಲ್ಲ ಎಂದ ಅವರು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ಹೊರ ತಂದಿರುವ ಸಂಶೋಧನಾ ದಾಖಲೆಗಳನ್ನು ಪ್ರದರ್ಶನ ಮಾಡಿದರು.

ಮಹಿಷ ಚಾರಿತ್ರಿಕ ವ್ಯಕ್ತಿ ಎಂಬುದಕ್ಕೆ 2500 ವರ್ಷಗಳ ಇತಿಹಾಸವಿದೆ, ಭಾರತ ಬಹುಸಂಸ್ಕೃತಿಗಳ ದೇಶ. ಭಾರತವನ್ನು ಜ್ಯಾತ್ಯಾತೀತ, ಇಲ್ಲಿನ ಪ್ರತಿ ಉದಾಯವು ಅವರ ಅವರದೆ ಆದ ಸಂಸ್ಕೃತಿಗಳ ಆಚರಣೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೈಸೂರು ಚಾಮುಂಡಿ ಕಾಲ್ಪನಿಕ ದೇವಿಯಾಗಿದ್ದು 18 ಪುರಾಣಗಳಲ್ಲಿ ಎಲ್ಲಿಯೂ ಚಾಮುಂಡಿ ಮಹಿಷನ ಕೊಂದ ಬಗ್ಗೆ ಉಲ್ಲೇಖವಿಲ್ಲ ಎಂದ ಅವರು, ಎಲ್ಲ ಪುರಾಣಗಳ ಪ್ರಕಾರ ಚಾಮುಂಡಿ ದೇವಿಗೆ ಸಿಂಹ ವಾಹನವಾಗಿದೆ. ಆದರೆ ಈಗಿನ ಮೈಸೂರು ಚಾಮುಂಡಿಯ ವಾಹನ ಹುಲಿಯಾಗಿದೆ. ಮಹಿಷನನ್ನು ಕೊಂದದ್ದು ಮೈಸೂರಿನಲ್ಲಿ ಅಲ್ಲ. ಕೊಲ್ಕತ್ತಾದಲ್ಲಿ ಅದು ದುರ್ಗೆ ಎಂಬ ಹೆಸರಿನ ಹೆಣ್ಣು ಮಗಳು. ಹಾಗಾಗಿ ಚಾಮುಂಡಿ ಮಹಿಷ ಎಂಬ ವ್ಯಕ್ತಿಯನ್ನು ಕೊಂದಿರುವುದಕ್ಕೆ ಯಾವುದೇ ಪುರಾಣ, ಚಾರಿತ್ರಿಕ ಇತಿಹಾಸದಲ್ಲಿ ಉಲ್ಲೇಖ ಆಗಿಲ್ಲ ಎಂದರು.

ದ್ರಾವಿಡ ರಾಜರನ್ನು ರಾಕ್ಷಸರು, ದುಷ್ಟರು, ಜೀವ ವಿರೋಧಿಗಳು ಎಂದು ಕೆಟ್ಟದಾಗಿ ಪುರಾಣ ಬರೆದಿದ್ದಾರೆ. ಎಂದ ಅವರು ಯಾವುದೇ ಊರು ಅಥವಾ ಸಂಸ್ಥೆಗೆ ಒಬ್ಬ ವ್ಯಕ್ತಿಯ ಹೆಸರಿಡಲು ಆ ವ್ಯಕ್ತಿ ಒಳ್ಳೆಯವನಾಗಿದ್ದರೆ ಮಾತ್ರ ಇಡುತ್ತಾರೆ, ಕರ್ನಾಟಕದ ಮೈಸೂರು (ಮಹಿಷನಾಡು) ಪಂಜಾಬಿನ ಜಲಂದರ್ ಮತ್ತು ಬಿಹಾರದ ಗಯಾ ( ಬೋದ್ ಗಯಾ) ಜಿಲ್ಲೆಗಳಿಗೆ ರಾಕ್ಷಸರ ಹೆಸರು ಇಟ್ಟಿದ್ದಾರೆ ಎಂದರೆ ಅವರು ಒಳ್ಳೆಯವರಾಗಿದ್ದರು ಎಂದು ಅರ್ಥವಲ್ಲವೆ ? ಎಂದು ಪ್ರಶ್ನಿಸಿದರು.

ಸಂಸದ ಪ್ರತಾಪ್ ಸಿಂಹ ಮತ್ತು ಭಾಷಣಕಾರ ಸೂಲಿಬೆಲೆ ಚಕ್ರವರ್ತಿ ಕುರಿತು ನಾನು ಪಂಥಾಹ್ವಾನ ನೀಡುತ್ತೇನೆ ಮಹಿಷ ಬೌತಿಕ ಅಸ್ತಿತ್ವದಲ್ಲಿದ್ದ ಎಂಬ ಬಗ್ಗೆ ನಾನು ದಾಖಲೆ ನೀಡುತ್ತೇನೆ. ಚಾಮುಂಡಿ ಅಸ್ತಿತ್ವದಲ್ಲಿ ಇದ್ದರು ಎಂಬುದಕ್ಕೆ  ಅವರು ದಾಖಲೆ ನೀಡಲಿ. ಇಲ್ಲವಾದಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಸವಾಲು ಎಸೆದರು.

ಸಮಾಜಿಕ ವ್ಯವಸ್ಥೆಯಲ್ಲಿ ಮನುವಾದಿಗಳ ಅನಾವಾರಗಳನ್ನು ಪ್ರಶ್ನೆ ಮಾಡಿದರೆ ಆರಂಭದಲ್ಲೇ ತುಳಿದು ಹಾಕುತ್ತಾರೆ. ಇದು ಶತ ಮಾನಗಳಿಂದ ನಡೆದುಕೊಂಡು ಬಂದಿದೆ, ಅದು ಇಂದಿಗೂ ಚಲಾವಣೆಯಲ್ಲಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಕಾರ್ಯಕ್ರಮದಲ್ಲಿ ಪ್ರಜಾ ವಿಮೋಚನಾ ಸೇನೆಯ ರಾಜ್ಯಾಧ್ಯಕ್ಷ ಮಾ.ಮುನಿರಾಜು, ಜಿಲ್ಲಾ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ, ವಕೀಲರಾದ ಮುನಿರಾಜು, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ, ಮಾನವ ಬಧುತ್ವ ವೇದಿಕೆ ಅಧ್ಯಕ್ಷ ವೆಂಕಟೇಶ್, ದಸಂಸ ರಾಜುಸಣ್ಣಕ್ಕಿ, ಪ್ರಜಾವಿಮೋಚನಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಹನುಮಣ್ಣ ಗೂಳ್ಯ, ವಡ್ಡರಹಳ್ಳಿ ರಾಜಗೋಪಾಲ್, ಅಜಯ್ ಕುಮಾರ್,ಕರೀಂಸೊಣ್ಣೇನಹಳ್ಳಿ ಮುನಿಯಪ್ಪ, ತಳಗವಾರ ಪುನೀತ್, ಬೆಳವಂಗಲ ಮಹೇಶ್, ಕುಮಾರ್ ಮುಂತಾದವರು ಉಪಸ್ಥಿತರಿದ್ದರು

Ramesh Babu

Journalist

Recent Posts

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

5 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

20 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

1 day ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

1 day ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

2 days ago