Categories: ಲೇಖನ

ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಸಮಾನತೆಯನ್ನು ಬೆಂಬಲಿಸುತ್ತಾ…

ಹೆಣ್ಣು………..

ಹೆಣ್ಣು – ಸೌಂದರ್ಯ – ಮೇಕಪ್ – ತುಂಡುಡುಗೆ – ಗಂಡು – ಆತನ ಮನಸ್ಸು – ನಮ್ಮ ಸಂಪ್ರದಾಯ ಇತ್ಯಾದಿ ಇತ್ಯಾದಿ…….

ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಎರಡೂ ವರ್ಗದ ಕೆಲವರಿಗೆ ಕಿರಿಕಿರಿ ಎನಿಸಬಹುದು. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಭಾಗವಾಗಿ ಇದನ್ನು ಚರ್ಚಿಸಲೇಬೇಕಾಗಿದೆ….

ಸೌಂದರ್ಯ ಎಂದರೇನು ?
ಆರೋಗ್ಯವೇ ?
ದೇಹ ರಚನೆಯೇ ?
ಬಣ್ಣವೇ ?
ಆಕಾರವೇ ?
ಬುದ್ದಿವಂತಿಕೆಯೇ ?
ಪ್ರಸಾಧನವೇ ?
ಬಟ್ಟೆಯೇ ?
ಮಾತುಗಳೇ ?
ಹಣವೇ ?
ಅಧಿಕಾರವೇ ?
ಲಿಂಗವೇ ?
ಇನ್ನೂ ಏನಾದರೂ….?

ಮತ್ತು ,

ಸೌಂದರ್ಯ ಅಡಗಿರುವುದೆಲ್ಲಿ ?
ದೇಹದಲ್ಲಿಯೇ ?
ನೋಡುಗರ ಕಣ್ಣುಗಳಲ್ಲಿಯೇ ? ಮನಸ್ಸುಗಳಲ್ಲಿಯೇ ?
ನಡವಳಿಕೆಯಲ್ಲಿಯೇ ?
ಸಹಜತೆಯಲ್ಲಿಯೇ ?
ಕೃತಕತೆಯಲ್ಲಿಯೇ ?
ಭಾವನೆಗಳಲ್ಲಿಯೇ ?
ಅಥವಾ
ಇನ್ನೆಲ್ಲಿಯಾದರೂ ?

ಇದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟವಾಗುತ್ತದೆ ಅಥವಾ ಭಾಗಶಃ ಸತ್ಯ ಮಾತ್ರವಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ, ವಯಸ್ಸಿನಿಂದ ವಯಸ್ಸಿಗೆ,
ಅರಿವು ಅಜ್ಞಾನದಿಂದ ಆಧ್ಯಾತ್ಮಿಕತೆಯವರೆಗೆ ಬದಲಾಗುತ್ತಲೇ ಇರುತ್ತದೆ.

ಇದನ್ನು ಸರಳ ಸಾಮಾನ್ಯ ಜನರು ಹೊಂದಿರುವ ಅಭಿಪ್ರಾಯದ ಮೇಲೆ ಮಾತ್ರ ಚರ್ಚಿಸುವುದು ಉತ್ತಮ.

ಮನುಷ್ಯ ಸೌಂದರ್ಯದ ಬಗ್ಗೆ ಮಾತನಾಡುವುದಾದರೆ,….

ಸಾಮಾನ್ಯವಾಗಿ ಹೆಣ್ಣು ಸೌಂದರ್ಯದ ಸಂಕೇತ ಮತ್ತು ಪ್ರತಿರೂಪ ಎಂದು ಕರೆಯಲಾಗುತ್ತದೆ. ಸೃಷ್ಟಿಯಲ್ಲಿರುವ ಒಂದು ಸಣ್ಣ ಭಿನ್ನತೆ ಎಂದರೆ, ಮಗುವಿನ ಜನನದ ಗರ್ಭಾಶಯ ಹೊಂದಿರುವುದು ಹೆಣ್ಣು ಮತ್ತು ಅದು ಒಂದು ವರ್ಷ ಕಾಲದಷ್ಟು ದೀರ್ಘ ಪ್ರಕ್ರಿಯೆ ಹಾಗೂ ನೋವು, ಜವಾಬ್ದಾರಿ, ಗಂಭೀರ ಆರೈಕೆ ಬಯಸುವ ಕ್ರಿಯೆ. ಇದು ಹೆಣ್ಣನ ಬಗ್ಗೆ ಸ್ವಲ್ಪ ಗೌರವಯುತ ಮತ್ತು ಮೃದು ಧೋರಣೆ ಹೊಂದುವಂತೆ ಮಾಡಿದೆ.

ಆಧುನಿಕ ನಾಗರಿಕ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಯ ಅಡಿಯಲ್ಲಿ ಮದುವೆ ಎಂಬ ಒಂದು ಸಂಪ್ರದಾಯ ರೂಪಿಸಿ ಸಂತಾನಾಭಿವೃದ್ಧಿ ಮತ್ತು ಲೈಂಗಿಕ ಕ್ರಿಯೆಗೆ ಅಧೀಕೃತತೆ ನೀಡಲಾಗಿದೆ‌. ಇಲ್ಲಿ ಗಂಡು ಹೆಣ್ಣನ್ನು ಮದುವೆ ಹೆಸರಿನಲ್ಲಿ ಬಂಧಿಸಲಾಗುತ್ತದೆ, ನಿಯಂತ್ರಿಸಲಾಗುತ್ತದೆ ಮತ್ತು ಇಬ್ಬರ ಅಧಿಕಾರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತದೆ. ಆದರೆ ಭಾರತೀಯ ಸಮಾಜದಲ್ಲಿ ಬಹುತೇಕ ಪುರುಷ ಪ್ರಧಾನ ವ್ಯವಸ್ಥೆ ಇರುವುದರಿಂದ ಹೆಣ್ಣನ್ನು ಗಂಡಿಗೆ ಮಾರಾಟಮಾಡಲಾಗುತ್ತದೆ ಎಂಬ ಮನಸ್ಥಿತಿ ಇದೆ. ಆಕೆ ಆತನ ಖಾಸಗಿ ಆಸ್ತಿ ಎಂದೇ ಭಾವಿಸಲಾಗಿದೆ. ಪತಿಯೇ ಪರದೈವ ಎಂಬ ನಾಣ್ಣುಡಿಗೆ ಆಕೆ ಬದ್ದಳಾಗಿರಬೇಕಾಗುತ್ತದೆ.

ಇದೇ ಕಾರಣಕ್ಕಾಗಿ ಮತ್ತು ಲೈಂಗಿಕತೆಯ ಸಾಂಪ್ರದಾಯಿಕ ಶೈಲಿಯಿಂದಾಗಿ ಹೆಣ್ಣಿಗೆ ನಾಚಿಕೆ – ಸೌಂದರ್ಯ – ಸೌಮ್ಯತೆಯ ಆರೋಪ ಹೊರಿಸಲಾಗಿದೆ ಮತ್ತು ಅದನ್ನೇ ಅಧೀಕೃತಗೊಳಿಸಲಾಗಿದೆ.

ಇದರಿಂದಾಗಿ ಹೆಣ್ಣು ಸೌಂದರ್ಯವನ್ನು ಕಾಪಾಡಿಕೊಂಡು ಗಂಡನ್ನು ಆಕರ್ಷಿಸುವುದು ತನ್ನ ಕರ್ತವ್ಯ, ಜವಾಬ್ದಾರಿ, ವೃತ್ತಿ ಎಂದು ಭಾವಿಸುವಂತಾಗಿದೆ.

ಇಲ್ಲಿ ಸೌಂದರ್ಯದ ಇನ್ನೊಂದು ಮುಖವೂ ಇದೆ. ಸಾಂಪ್ರದಾಯಿಕ ಶೈಲಿಯ ಭಾರತದಲ್ಲಿ ಆಧುನಿಕ ಮಹಿಳೆಯರ ತುಂಡುಡುಗೆ.
ಉಡುಗೆ ಅವರವರ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವುದು ಸರಿಯಲ್ಲ. ಆದರೆ ಸಾಮಾನ್ಯ ಜನರಲ್ಲಿ ಇರುವ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥಮಾಡಿಸುವ ಒಂದು ಪ್ರಯತ್ನ…

ಹೆಚ್ಚು ಹೆಚ್ಚು ದೇಹ ಕಾಣುವ, ಕಡಿಮೆ ಬಟ್ಟೆ ತೊಡುವ ಹೆಣ್ಣನ್ನು ಹೆಚ್ಚು ಆಧುನಿಕ ಮತ್ತು ಶ್ರೀಮಂತ ಮಹಿಳೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅದಕ್ಕಾಗಿಯೇ ಫ್ಯಾಷನ್ ಡಿಸೈನಿಂಗ್ ಎಂಬ ಬೃಹತ್ ಉದ್ಯಮ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿದೆ.

ಇಲ್ಲಿನ ಮೂಲಭೂತ ಪ್ರಶ್ನೆ….

ಹೆಣ್ಣು ಕಡಿಮೆ ಬಟ್ಟೆ ತೊಟ್ಟು ತನ್ನ ದೇಹದ ಭಾಗಗಳು ಕಾಣುವಂತೆ ಇರುವುದು ತನ್ನ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ಭಾವಿಸಿರಬಹುದೇ ?
ಅದು ನನ್ನ ಸ್ವಾತಂತ್ರ್ಯ ಮತ್ತು ಹಕ್ಕು ಅದನ್ನು ಸಹಜವಾಗಿ ಚಲಾಯಿಸುವುದರಿಂದ ನನ್ನ ಆತ್ಮವಿಶ್ವಾಸ ಹೆಚ್ಚುವುದು ಎಂದೇ ?
ತನ್ನ ಸ್ವಾಭಿಮಾನದ ಸಂಕೇತವೇ ?
ಇತರರು ನನ್ನನ್ನು ನೋಡಲಿ ಎಂಬ ಭಾವನೆಯೇ ?
ತನ್ನ ಇರುವಿಕೆಯನ್ನು ತೋರ್ಪಡಿಸುವ ಒಂದು ಆಕರ್ಷಕ ವಿಧಾನವೇ ?
ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ ?
ಸಿನಿಮಾ ಮಾಧ್ಯಮಗಳ ಆಕರ್ಷಣೆಯೇ ?

ಇಲ್ಲಿ ಇನ್ನೂ ಒಂದು ಸೂಕ್ಷ್ಮವಿದೆ. ದೇಹ ಕಾಣುವ ಉಡುಗೆ ತೊಡುವ ಹೆಣ್ಣಿಗೆ ತನ್ನ ದೇಹದ ಯಾವ ಭಾಗಗಳು ಕಾಣುತ್ತಿವೆ, ಅದನ್ನು ಹೊರಗಿನ ಜನ ಹೇಗೆ ಮತ್ತು ಯಾವ ದೃಷ್ಟಿಯಿಂದ ನೋಡುತ್ತಾರೆ ಎಂಬ ಅರಿವೂ ಇರುತ್ತದೆ. ತನ್ನ ತಾಯಿ ತಂಗಿ ಅಕ್ಕ ಮಗಳು ಮುಂತಾದ ರಕ್ತ ಸಂಬಂಧಿಗಳನ್ನು ಹೊರತುಪಡಿಸಿದ ಹೆಣ್ಣಿನ ಬಗ್ಗೆ ಈ ಸಮಾಜದ ಸಾಮಾನ್ಯ ಜನರ ಅಭಿಪ್ರಾಯ ಅವರಿಗೂ ತಿಳಿದಿದೆ.

ಇಲ್ಲಿನ ಜಿಜ್ಞಾಸೆ ಎಂದರೆ, ಸೌಂದರ್ಯ ಬಟ್ಟೆಯಲ್ಲಿ ಅಡಗಿದೆ ಎಂದರೆ ದೇಹದ ಮಹತ್ವ ಏನು ? ದೇಹದಲ್ಲಿ ಅಡಗಿದೆ ಎಂದರೆ ಯಾವ ಬಟ್ಟೆ ಹಾಕಿದರೆ ಏನು ? ಜೊತೆಗೆ ಹೆಣ್ಣಿನ ತುಂಡುಡುಗೆ ಎಷ್ಟು ಮಿತಿ ಎಂಬುದಕ್ಕೆ ಯಾವುದೇ ಮಾನದಂಡ ನಿಗದಿಪಡಿಸಲು ಸಾಧ್ಯವಿಲ್ಲ. ಹಾಗೆಯೇ ಸಾಂಪ್ರದಾಯಿಕ ಉಡುಗೆ ಅತ್ಯಂತ ಸಭ್ಯ ಎಂದು ಹೇಳುವುದು ಮೂರ್ಖತನ. ಏಕೆಂದರೆ ಮತ್ತೆ ಮೂಲ ಪ್ರಶ್ನೆ ಸೌಂದರ್ಯ ನೋಡುವವರ ದೃಷ್ಟಿ ಅವಲಂಬಿಸಿದೆ ಎನ್ನಲಾಗುತ್ತದೆ.

ತುಂಡುಡುಗೆ ಮಹಿಳೆಯರ ದೌರ್ಜನ್ಯಕ್ಕೆ ಕಾರಣ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಏಕೆಂದರೆ ಪ್ರಪಂಚದ ಎಲ್ಲಾ ಪ್ರದೇಶಗಳಲ್ಲೂ ಯಾವುದೇ ರೀತಿಯ ಉಡುಗೆ ಇರಲಿ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯ ಮಾತ್ರ ಒಂದೇ ರೀತಿಯಲ್ಲಿದೆ. ಅದಕ್ಕಾಗಿ ಒಂದು ದಿನ ಅದರ ವಿರೋಧಿ ದಿನವನ್ನು ವಿಶ್ವದಾದ್ಯಂತ ಆಚರಿಸುವ ಪರಿಸ್ಥಿತಿ ಇದೆ.

ಏನೇ ಆಗಲಿ, ಇದೊಂದು ವಿವಿಧ ಮುಖಗಳ ಸ್ಪಷ್ಟ ಉತ್ತರ ಸಿಗದ ವ್ಯವಸ್ಥೆಯ ಒಂದು ಲೋಪದೋಷ. ಆಧುನಿಕ ನಾಗರಿಕ ಪ್ರಜ್ಞೆ ಇದಕ್ಕೆ ಒಂದಷ್ಟು ಪರಿಹಾರ ಒದಗಿಸಬಹುದು.

ಹೆಣ್ಣಿನ ಶೋಷಣೆಯ ಇನ್ನಷ್ಟು ಆಳವಾದ ಅಂಶಗಳು ಇವೆ. ಆದರೆ ಅದು ಜನರ ಸಾಮಾನ್ಯ ನಂಬಿಕೆಯ ಅಶ್ಲೀಲತೆಯನ್ನು ಮೀರಬಹುದು. ಅದಕ್ಕಾಗಿ ಇಷ್ಟು ಮಾತ್ರ…

ಎಲ್ಲಾ ಸಂದರ್ಭದಲ್ಲೂ ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಸಮಾನತೆಯನ್ನು ಬೆಂಬಲಿಸುತ್ತಾ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿಯ ನೂತನ ‘ಮಯೂರ ಸನ್‌ರೈಸ್ ರೆಸ್ಟೋರೆಂಟ್’ ಉದ್ಘಾಟನೆ: ನಂದಿಬೆಟ್ಟದ ಸಂಚಾರ ದಟ್ಟಣೆಗೆ ರೋಪ್‌ವೇ ಹಾಗೂ ಸಮಗ್ರ ಪಾರ್ಕಿಂಗ್ ಯೋಜನೆ- ಸಚಿವ ಕೆ.ಜೆ ಜಾರ್ಜ್

ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಮಯೂರ ಹೋಟೆಲ್‌ಗಳು ಹಾಗೂ ಇತರೆ…

3 hours ago

ಸಮಾಜಸೇವಕ ಮಹೇಂದ್ರ ಬಾಬುಗೆ ಅದ್ಧೂರಿ ಜನ್ಮದಿನ ಆಚರಣೆ

ದೊಡ್ಡಬಳ್ಳಾಪುರ: ಸಾಯಿರಾಂ ಡ್ರಿಪ್ ಇರಿಗೇಷನ್ ಹಾಗೂ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮಾಲೀಕರಾದ ಬಿ. ಮಹೇಂದ್ರ ಬಾಬು ಅವರ 46ನೇ ವರ್ಷದ ಹುಟ್ಟುಹಬ್ಬವನ್ನು…

14 hours ago

ಕುಖ್ಯಾತ ಅಂತರರಾಜ್ಯ ಕೇಬಲ್ ಕಳ್ಳರ ಬಂಧನ: ₹15 ಲಕ್ಷ ಮೌಲ್ಯದ ಕೇಬಲ್ ವಶ

ದೊಡ್ಡಬಳ್ಳಾಪುರ: ಅಲ್ಯೂಮಿನಿಯಂ ವಿದ್ಯುತ್ ಕೇಬಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಂತರರಾಜ್ಯ ಕೇಬಲ್ ಕಳ್ಳರ ಜಾಲವನ್ನು…

1 day ago

RSS ನೋಂದಣಿಗೆ ಆಗ್ರಹಿಸಿ ಪ್ರತಿಭಟನೆ; ರಾಷ್ಟ್ರಪತಿಗಳಿಗೆ ಮನವಿ

ದೊಡ್ಡಬಳ್ಳಾಪುರ : ಹೊರದೇಶಗಳಲ್ಲಿ ಅಲ್ಲಿನ ನೆಲದ ಕಾನೂನಿಗೆ ಬದ್ಧವಾಗಿ ನೋಂದಣಿ ಮಾಡಿಸಿಕೊಂಡಿರುವ ಸಂಘ ಪರಿವಾರ, ಇಲ್ಲಿನ ನೆಲದ ಕಾನೂನಿಗೆ ವ್ಯತಿರಿಕ್ತವಾಗಿ…

1 day ago

ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಣೆ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರದ್ದು: ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜನೆ-ವಕೀಲ ಪ್ರತಾಪ್

ದೊಡ್ಡಬಳ್ಳಾಪುರ: ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆಯಬೇಕಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕೊನೆಯ ಕ್ಷಣದಲ್ಲಿ ಕಾಲೇಜು ವತಿಯಿಂದ…

1 day ago

ಮುಂಗಾರು ಮಳೆ ಕೊರತೆ, ಭೂಗರ್ಭದ ನೀರಿಗೆ ಭಾರೀ ಹೊಡೆತ: ಜಲಬಿಕ್ಕಟ್ಟಿನ ಮುನ್ಸೂಚನೆ

ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿಯುತ್ತಿದೆ. ಸಾಮಾನ್ಯವಾಗಿ…

2 days ago