ಮಲ್ಟಿ ಬ್ರ್ಯಾಂಡ್ ಬೈಕ್ ಶೋರೂಂ ಮಾಲೀಕನಿಂದ ಮಹಾ ವಂಚನೆ

ವೈಟ್ ಫಿಲ್ಡ್ ನಲ್ಲಿರೋ SMRITI MOTORS, SALES & SERVICE ಮಲ್ಟಿ ಬ್ರ್ಯಾಂಡ್ ಬೈಕ್ ಶೋರೂಂ ಮಾಲೀಕನಿಂದ ವಂಚನೆ ಆಗಿದೆ ಎಂದು ಗ್ರಾಹಕರು ದೂರಿದ್ದಾರೆ.

ಕಸ್ಟಮರ್ ಗಳಿಂದ ಲಕ್ಷಗಟ್ಟಲೇ ಅಡ್ವಾನ್ಸ್ ಹಣ ಪಡೆದು ಬೈಕ್ ನೀಡದೇ ಬೈಕ್ ಶೋರೂಂ ಮಾಲೀಕ ವಿಜಯ್ ಕುಮಾರ್ ಸದ್ಯ ಎಸ್ಕೇಪ್ ಆಗಿದ್ದಾನೆ.

ಫುಲ್ ಕ್ಯಾಷ್ ಕಟ್ಟಿರುವವರಿಗೆ ಗೊತ್ತೆ ಆಗದಂತೆ EMIಗೆ ಕನ್ವರ್ಟ್ ಮಾಡಿದ್ದ ಮಾಲೀಕ. ಕೆಲವರಿಗಂತು ಸಿಂಗಲ್ EMI ಗೆ ಡಬಲ್ EMI ಕಟ್ಟುವಂತ ಸ್ಥಿತಿ ತಂದಿಟ್ಟಿದ್ದಾನೆ. ಕೆಲವರಿಗೆ NOC ಕೊಡಿಸುತ್ತೇನೆ ಎಂದು ಮತ್ತೆ EMI ಆಕ್ಟಿವ್ ಮಾಡಿರುವ ಭೂಪ. ಹಳೇ ಲೋನ್ ಜೊತೆ ಖರೀದಿ ಮಾಡದ ಬೈಕ್ ಗೂ ಲೋನ್ ಕಟ್ಟುತ್ತಿರುವ ಕೆಲ ಗ್ರಾಹಕರು‌. ಕಸ್ಟಮರ್ ಗಳ ಬ್ಯಾಂಕ್ ಡಿಟೇಲ್ಸ್ ಪಡೆದು ವಂಚನೆ ಮಾಡುತ್ತಿದ್ದ ವಿಜಯ್ ಕುಮಾರ್.

ಲೋನ್ ಕೊಡುವ ಬ್ಯಾಂಕ್ & ಫೈನಾನ್ಸ್ ಕಂಪನಿಗಳ ಜೊತೆ ಸೇರಿ ಈ ರೀತಿ ವಂಚಿಸಿರೋ ಶಂಕೆ ವ್ಯಕ್ತವಾಗಿದೆ. ವಿಜಯ್ ಕುಮಾರ್ ತಂದಿಟ್ಟ ಪಜೀತಿಗೆ ಕಸ್ಟಮರ್ ಗಳು ಕಂಗಾಲಾಗಿದ್ದಾರೆ. ಪ್ರತಿ ತಿಂಗಳು EMI ಹಣ ಕಟ್ಟುವಂತೆ ಫೈನಾನ್ಸ್ ಕಂಪನಿಗಳು ಕಸ್ಟಮರ್ ಗಳ ಬೆನ್ನತ್ತಿವೆ.

ಸದ್ಯ 21 ಜನರಿಂದ ವೈಟ್ ಫೀಲ್ಡ್ ಠಾಣೆಯಲ್ಲಿ ದೂರಿನ ಆಧಾರದ ಮೇಲೆ ಬೈಕ್ ಶೋರೂಂ ಮಾಲೀಕನ ವಿರುದ್ಧ FIR ದಾಖಲಾಗಿದೆ.

ಇನ್ನೂ ಪತಿ ಕಾಣೆಯಾಗಿದ್ದಾರೆ ಅಂತ 1 ತಿಂಗಳ ಹಿಂದೆ ವೈಟ್ ಫಿಲ್ಡ್ ಠಾಣೆಗೆ ದೂರು ನೀಡಿರುವ ಪತ್ನಿ. ಈ ಹಿನ್ನೆಲೆ ವಿಜಯ್‌ಕುಮಾರ್ ಮತ್ತು ಇನ್ನೊಬ್ಬ ಪಾರ್ಟರ್ನ್ ಕಿಶೋರ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Ramesh Babu

Journalist

Recent Posts

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

4 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

19 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

1 day ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

1 day ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

2 days ago