ಉತ್ತರ ಪ್ರದೇಶದ ಇಟಾಹ್ ಎಂಬಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಗಳ ಪ್ರೇಮ ಪ್ರಕರಣಕ್ಕೆ ಮನನೊಂದ ತಾಯಿಯೊಬ್ಬಳು ಮಗಳನ್ನು ಕೊಲ್ಲಲು ವ್ಯಕ್ತಿಯೊಬ್ಬನನ್ನು ನೇಮಿಸಿದ್ದಾಳೆ. ಆದರೆ, ಆ ಹಂತಕ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ.
ಇಲ್ಲಿ ಟ್ವಿಸ್ಟ್ ಏನೆಂದರೆ ಮಗಳು ಪ್ರೀತಿಸಿದವನಿಗೆ ಮಗಳನ್ನು ಕೊಲ್ಲಲು ತಾಯಿ ಸುಪಾರಿ ಕೊಟ್ಟಿದ್ದಾಳೆ. ಹೀಗಾಗಿ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ… ಮೃತಳ ಮಗಳು ಮತ್ತು ಆಕೆಯ ಪ್ರೇಮಿ ಕಮ್ ಕಿಲ್ಲರ್ ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಕಳೆದ ಭಾನುವಾರ, ಇಟಾಹ್ನ ರಾಗಿ ಹೊಲದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಗೆ 42 ವರ್ಷ ವಯಸ್ಸಾಗಿತ್ತು. ಕೊಲೆಯಾದ ಎರಡನೇ ದಿನ ಮಹಿಳೆಯನ್ನು ರಮಾಕಾಂತ್ ಅವರ ಪತ್ನಿ ಅಲ್ಕಾ ಎಂದು ಗುರುತಿಸಲಾಗಿದೆ.
ಕಥೆ ಸಿನಿಮಾದಂತೆ ಕಂಡರೂ ವಾಸ್ತವ. ಕೆಲವು ತಿಂಗಳ ಹಿಂದೆ, ನಯಾಗಾಂವ್ ಪೊಲೀಸ್ ಠಾಣೆಯ ಅಲ್ಲಾಪುರ್ ನಿವಾಸಿ ಅಲ್ಕಾ ಅವರ ಅಪ್ರಾಪ್ತ ಮಗಳು ಅದೇ ಗ್ರಾಮದ ಅಖಿಲೇಶ್ ಜೊತೆ ಓಡಿಹೋಗಿದ್ದಳು. ಪೊಲೀಸರು ಆಕೆಯನ್ನು ವಶಪಡಿಸಿಕೊಂಡು ಆಕೆಯ ಮನೆಯವರಿಗೆ ಒಪ್ಪಿಸಿ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಅಲ್ಕಾ ತನ್ನ ಮಗಳನ್ನು ಅಕಾರಾಬಾದ್ ಸಿಕಂದರಪುರ ಖಾಸ್ ಪೊಲೀಸ್ ಠಾಣೆಯ ಕೈಮ್ಗಂಜ್ ಜಿಲ್ಲೆಯ ಫರೂಕಾಬಾದ್ನಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿದಳು. ಈ ಸ್ಥಳದ ನಿವಾಸಿ ಸುಭಾಷ್ ಎಂಬಾತನಿಗೆ ಅಲ್ಕಾ ಪರಿಚಯವಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್ಕುಮಾರ್ ಸಿಂಗ್ ಹೇಳಿದ್ದಾರೆ.
ನಂತರ, ಸುಭಾಷ್ ಅಲ್ಕಾ ಅವರ ಮಗಳೊಂದಿಗೆ ಸಂಬಂಧವನ್ನು ಬೆಳೆಸಿದ್ದಾನೆ. ಒಂದು ದಿನ, ಅವರು ಫೋನ್ನಲ್ಲಿ ಮಾತನಾಡುವುದನ್ನು ನೋಡಿ, ಹುಡುಗಿಯ ತಾಯಿಯ ಚಿಕ್ಕಪ್ಪ ಅಲ್ಕಾಗೆ ಮಾಹಿತಿ ನೀಡಿದರು ಮತ್ತು ಅವಳನ್ನು ಕರೆದುಕೊಂಡು ಹೋಗುವಂತೆ ಹೇಳಿದರು. ಆದರೆ, ಆ ಹುಡುಗಿಗೆ ಸುಭಾಷ್ ಜೊತೆ ಸಂಬಂಧವಿದೆ ಎಂಬುದು ಅಲ್ಲಿಯವರೆಗೆ ಯಾರಿಗೂ ತಿಳಿದಿರಲಿಲ್ಲ.
ಸುಭಾಷ್ ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ವಾಸ ಅನುಭವಿಸಿದ್ದಾನೆ. ತಾಯಿ ಅಲ್ಕಾ ಅಕ್ಟೋಬರ್ 27 ರಂದು ಸುಭಾಷ್ಗೆ ಕರೆ ಮಾಡಿ ಮಗಳನ್ನು ಕೊಲ್ಲಲು 50,000 ರೂ. ಕೊಡುತ್ತಾಳೆ. ಈ ವಿಚಾರ ಮಗಳಿಗೆ ತಿಳಿಯುತ್ತದೆ. ಆಗ ತನ್ನ ತಾಯಿಯನ್ನು ಕೊಂದರೆ ನಿನ್ನನ್ನು ಮದುವೆಯಾಗುತ್ತೇನೆಂದು ಸುಭಾಷ್ ಚಂದ್ರನಿಗೆ ಭರವಸೆ ನೀಡುತ್ತಾಳೆ. ಆದರೆ, ಮಗಳ ಬದಲಿಗೆ ಸುಫಾರಿಕೊಟ್ಟ ತಾಯಿಯನ್ನೇ ಹಂತಕ ಕೊಲ್ಲುತ್ತಾನೆ. ಸದ್ಯ ಕೊಲೆ ಆರೋಪಿ ಪೊಲೀಸರ ವಶದಲ್ಲಿದ್ದಾನೆ….
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…