ಉತ್ತರ ಪ್ರದೇಶದ ಇಟಾಹ್ ಎಂಬಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಗಳ ಪ್ರೇಮ ಪ್ರಕರಣಕ್ಕೆ ಮನನೊಂದ ತಾಯಿಯೊಬ್ಬಳು ಮಗಳನ್ನು ಕೊಲ್ಲಲು ವ್ಯಕ್ತಿಯೊಬ್ಬನನ್ನು ನೇಮಿಸಿದ್ದಾಳೆ. ಆದರೆ, ಆ ಹಂತಕ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ.
ಇಲ್ಲಿ ಟ್ವಿಸ್ಟ್ ಏನೆಂದರೆ ಮಗಳು ಪ್ರೀತಿಸಿದವನಿಗೆ ಮಗಳನ್ನು ಕೊಲ್ಲಲು ತಾಯಿ ಸುಪಾರಿ ಕೊಟ್ಟಿದ್ದಾಳೆ. ಹೀಗಾಗಿ ಮಗಳ ಬದಲು ತಾಯಿಯನ್ನೇ ಕೊಂದಿದ್ದಾನೆ… ಮೃತಳ ಮಗಳು ಮತ್ತು ಆಕೆಯ ಪ್ರೇಮಿ ಕಮ್ ಕಿಲ್ಲರ್ ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಕಳೆದ ಭಾನುವಾರ, ಇಟಾಹ್ನ ರಾಗಿ ಹೊಲದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಗೆ 42 ವರ್ಷ ವಯಸ್ಸಾಗಿತ್ತು. ಕೊಲೆಯಾದ ಎರಡನೇ ದಿನ ಮಹಿಳೆಯನ್ನು ರಮಾಕಾಂತ್ ಅವರ ಪತ್ನಿ ಅಲ್ಕಾ ಎಂದು ಗುರುತಿಸಲಾಗಿದೆ.
ಕಥೆ ಸಿನಿಮಾದಂತೆ ಕಂಡರೂ ವಾಸ್ತವ. ಕೆಲವು ತಿಂಗಳ ಹಿಂದೆ, ನಯಾಗಾಂವ್ ಪೊಲೀಸ್ ಠಾಣೆಯ ಅಲ್ಲಾಪುರ್ ನಿವಾಸಿ ಅಲ್ಕಾ ಅವರ ಅಪ್ರಾಪ್ತ ಮಗಳು ಅದೇ ಗ್ರಾಮದ ಅಖಿಲೇಶ್ ಜೊತೆ ಓಡಿಹೋಗಿದ್ದಳು. ಪೊಲೀಸರು ಆಕೆಯನ್ನು ವಶಪಡಿಸಿಕೊಂಡು ಆಕೆಯ ಮನೆಯವರಿಗೆ ಒಪ್ಪಿಸಿ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಅಲ್ಕಾ ತನ್ನ ಮಗಳನ್ನು ಅಕಾರಾಬಾದ್ ಸಿಕಂದರಪುರ ಖಾಸ್ ಪೊಲೀಸ್ ಠಾಣೆಯ ಕೈಮ್ಗಂಜ್ ಜಿಲ್ಲೆಯ ಫರೂಕಾಬಾದ್ನಲ್ಲಿರುವ ತನ್ನ ತಾಯಿಯ ಮನೆಗೆ ಕಳುಹಿಸಿದಳು. ಈ ಸ್ಥಳದ ನಿವಾಸಿ ಸುಭಾಷ್ ಎಂಬಾತನಿಗೆ ಅಲ್ಕಾ ಪರಿಚಯವಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್ಕುಮಾರ್ ಸಿಂಗ್ ಹೇಳಿದ್ದಾರೆ.
ನಂತರ, ಸುಭಾಷ್ ಅಲ್ಕಾ ಅವರ ಮಗಳೊಂದಿಗೆ ಸಂಬಂಧವನ್ನು ಬೆಳೆಸಿದ್ದಾನೆ. ಒಂದು ದಿನ, ಅವರು ಫೋನ್ನಲ್ಲಿ ಮಾತನಾಡುವುದನ್ನು ನೋಡಿ, ಹುಡುಗಿಯ ತಾಯಿಯ ಚಿಕ್ಕಪ್ಪ ಅಲ್ಕಾಗೆ ಮಾಹಿತಿ ನೀಡಿದರು ಮತ್ತು ಅವಳನ್ನು ಕರೆದುಕೊಂಡು ಹೋಗುವಂತೆ ಹೇಳಿದರು. ಆದರೆ, ಆ ಹುಡುಗಿಗೆ ಸುಭಾಷ್ ಜೊತೆ ಸಂಬಂಧವಿದೆ ಎಂಬುದು ಅಲ್ಲಿಯವರೆಗೆ ಯಾರಿಗೂ ತಿಳಿದಿರಲಿಲ್ಲ.
ಸುಭಾಷ್ ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ವಾಸ ಅನುಭವಿಸಿದ್ದಾನೆ. ತಾಯಿ ಅಲ್ಕಾ ಅಕ್ಟೋಬರ್ 27 ರಂದು ಸುಭಾಷ್ಗೆ ಕರೆ ಮಾಡಿ ಮಗಳನ್ನು ಕೊಲ್ಲಲು 50,000 ರೂ. ಕೊಡುತ್ತಾಳೆ. ಈ ವಿಚಾರ ಮಗಳಿಗೆ ತಿಳಿಯುತ್ತದೆ. ಆಗ ತನ್ನ ತಾಯಿಯನ್ನು ಕೊಂದರೆ ನಿನ್ನನ್ನು ಮದುವೆಯಾಗುತ್ತೇನೆಂದು ಸುಭಾಷ್ ಚಂದ್ರನಿಗೆ ಭರವಸೆ ನೀಡುತ್ತಾಳೆ. ಆದರೆ, ಮಗಳ ಬದಲಿಗೆ ಸುಫಾರಿಕೊಟ್ಟ ತಾಯಿಯನ್ನೇ ಹಂತಕ ಕೊಲ್ಲುತ್ತಾನೆ. ಸದ್ಯ ಕೊಲೆ ಆರೋಪಿ ಪೊಲೀಸರ ವಶದಲ್ಲಿದ್ದಾನೆ….
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 3:30ರ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ…
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಲಸಳ್ಳಿ ಗೇಟ್ ಸಮೀಪದ ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ದ್ವಿಚಕ್ರ…
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯಪಾನ ಮಾಡಲು ಅನುಮತಿ ನೀಡುವುದು ಕಾನೂನುಬಾಹಿರವಾಗಿದ್ದು, ತಪ್ಪಿದ್ದಲ್ಲಿ, ಪರವಾನಗಿ…
ದೇವನಹಳ್ಳಿ ತಾಲೂಕಿನ ರಾಣಿ ಕ್ರಾಸ್ ಬಳಿ ಡ್ಯೂಕ್ ಬೈಕ್ ಮತ್ತು ಕಂಟೈನರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ…
ಹೊಸಕೋಟೆ: ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ…
ಬೆಂಗಳೂರು ಗ್ರಾಮಾಂತರ: ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಆಹಾರ ಮತ್ತು ನಾಗರಿಕ…