ಮೊಹಾಲಿ : ಆರ್ ಸಿಬಿಯ ತಾರ ಬೌಲರ್ ಮೊಹಮ್ಮದ್ ಸಿರಾಜ್ ತೋರಿದ ಉತ್ತಮ ಬೌಲಿಂಗ್ ಹಾಗೂ ಎರಡು ವರ್ಷಗಳ ನಂತರ ಮತ್ತೊಮ್ಮೆ ಆರ್ ಸಿಬಿ ತಂಡದ ನಾಯಕತ್ವ ವಹಿಸಿದ ವಿರಾಟ್ ಕೊಹ್ಲಿ ಪಡೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 24 ರನ್ ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆಯಿತು, ನಾಯಕ ಫಾಫ್ ಡು ಪ್ಲೆಸಿಸ್ ಗಾಯದ ಕಾರಣ ಇಂಪ್ಯಾಕ್ಟ್ ಆಟಗಾರನಾಗಿ ವಿರಾಟ್ ಜೊತೆ ತಂಡಕ್ಕೆ ಉತ್ತಮ ಜೊತೆಯಾಟ ನೀಡಿದರು, ಮೊದಲನೇ ವಿಕೆಟ್ ಗೆ 137 ರನ್ ಗಳನ್ನು ಪೇರಿಸಿದ ಈ ಜೋಡಿ ಪವರ್ ಪ್ಲೇ ನಲ್ಲಿ ಪಂಜಾಬ್ ತಂಡದ ಬೌಲರ್ ಗಳನ್ನ ಬೆಂಡೆತ್ತಿದ ಇವರು ಆರು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 59 ರನ್ ಗಳನ್ನು ಪೇರಿಸಿದರು.
ಸಂಘಟಿತ ಹೋರಾಟ ನಡೆಸಿದ ಡು ಪ್ಲೆಸಿಸ್ 56 ಬಾಲ್ ಗಳಲ್ಲಿ (84) ರನ್ ಗಳಿಸಿದರು, ಇದರಲ್ಲಿ 5 ಸಿಕ್ಸ್ ಹಾಗೂ 5 ಫೋರ್ ಕೂಡ ಇದ್ದವು, ಇವರ ನಂತರ ಬಂದ ಬ್ಯಾಟರ್ ಗಳಿಂದ ಯಾವುದೇ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ, ಆರ್ ಸಿ ಬಿ 20 ಓವರ್ ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 174 ಗಳಿಸಲಸ್ಟೆ ಸಾಧ್ಯವಾಯಿತು.
ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಗೆ ಆರ್ ಸಿ ಬಿ ಬೌಲರ್ ಗಳು ಶಾಕ್ ನೀಡಿದರು, ಮೊದಲ ಓವರ್ ನಲ್ಲೆ ಮಧ್ಯಮ ವೇಗಿ ಸಿರಾಜ್ ಎಸೆತಕ್ಕೆ ಎಲ್ ಬಿ ಡಬ್ಲ್ಯೂ ಬಲೆಗೆ ಸಿಕ್ಕ ಅಥರ್ವ ಥೈಡೆ ಬಹು ಬೇಗ ವಿಕೆಟ್ ಒಪ್ಪಿಸಿದರು. ನಂತರದ 3 ನೇ ಓವರ್ ನಲ್ಲಿ ವನಿಂದು ಹಸರಂಗರ ಗೂಗ್ಲಿ ಎದುರಿಸಲು ಸಾಧ್ಯವಾಗದೆ ಮ್ಯಾಥ್ಯೂ ಶಾರ್ಟ್ ಕೂಡ ವಿಕೆಟ್ ಒಪ್ಪಿಸಿದರು.
ಬಹು ನಿರೀಕ್ಷಿತ ಆಟಗಾರ ಲಿವಿಂಗ್ ಸ್ಟೋನ್ ರ ಸ್ಫೋಟಕ ಆಟಕ್ಕೆ ಸಿರಾಜ್ ಎಲ್ ಬಿ ಡಬ್ಲ್ಯೂ ಮೂಲಕ ಕಟ್ಟಿಹಾಕಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಸಂಘಟಿತ ಆಟವಾಡಿದ ಪಂಜಾಬ್ ನ ಸ್ಥಳೀಯ ಆಟಗಾರ ಪ್ರಭಸಿಮ್ರಾನ್ (46) ರನ್ ಗಳನ್ನೂ ಪರಿಸಿದರು. ಇದರಲ್ಲಿ 3 ಫೋರ್ ಹಾಗೂ 4 ಭರ್ಜರಿ ಸಿಕ್ಸರ್ ಗಳೂ ಕೂಡ ಇದ್ದವು.
ನಾಯಕ ಸ್ಯಾಮ್ ಕರನ್ ಹಾಗೂ ಶಾರುಕ್ ಖಾನ್ ಕಡೆಯಿಂದ ಉತ್ತಮ ಮೊತ್ತ ಕೂಡಿ ಬರಲು ಸಾಧ್ಯವಾಗಲಿಲ್ಲ. ಆದರೆ ಪಂಜಾಬ್ ನ ವಿಕೆಟ್ ಕೀಪರ್ ಜೀತೆಂದ್ರ ಶರ್ಮಾರ ದಿಟ್ಟ ಹೋರಾಟ ಗೆಲುವಿನತ್ತ ಕೊಂಡೊ ಯ್ಯುವಂತಿತ್ತು. ತಾವು ಎದುರಿಸಿದ 27 ಎಸೆತಗಳಲ್ಲಿ 2 ಫೋರ್ 3 ಸಿಕ್ಸರ್ ಸಮೇತ (41) ರನ್ ಗಳಿಸಿ ಹರ್ಷಲ್ ಪಟೇಲ್ ರ ಎಸೆತದಲ್ಲಿ ಶಹಾಬಾದ್ ಗೆ ಸುಲಭ ಕ್ಯಾಚ್ ನೀಡುವ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಹೋರಾಟಕ್ಕೆ ಮುಕ್ತಾಯ ಬರೆದರು.
18.2 ಓವರ್ ಗಳಲ್ಲಿ ಕೇವಲ 150 ರನ್ ಗಳಷ್ಟೇ ಗಳಿದ ಪಂಜಾಬ್ 24 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿದರು, ಸಿರಾಜ್ ತಮ್ಮ ಉತ್ತಮ ಬೌಲಿಂಗ್ ಅನ್ನು ಈ ಪಂದ್ಯದಲ್ಲೂ ಮುಂದುವರಿಸಿದರು, 4 ಓವರ್ ಗಳಲ್ಲಿ ಕೇವಲ 21 ರನ್ ಗಳನ್ನಸ್ಟೆ ಬಿಟ್ಟು ಕೊಟ್ಟು 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇವರಿಗೆ ಸಾಥ್ ನೀಡಿದ ಹಸರಂಗ 2 ವಿಕೆಟ್ ಹಾಗೂ ಹರ್ಷಲ್ ಪಟೇಲ್ 1 ವಿಕೆಟ್ ಪಡೆದು ಆರ್ ಸಿ ಬಿ ಗೆಲುವಿನ ರುವಾರಿಯಾದರು. ಪಂದ್ಯದಲ್ಲಿ 2 ಆಕರ್ಷಕ ರನ್ ಔಟ್ ಕೂಡ ಮೂಡಿಬಂದವು. ಅತ್ಯುತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…